ಆ್ಯಪ್ನಗರ

ಮದ್ಯ ಮಾರಾಟಕ್ಕೆ ಅವಕಾಶ ಬೇಡ

ಲಕ್ಷ್ಮೇಶ್ವರ : ಕೊರೊನಾ ಹಿನ್ನೆಲೆಯಲ್ಲಿನಿಷೇಧಿಸಲಾಗಿದ್ದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಾಯಿ ಮುಕ್ತ ರಾಜ್ಯ ಮಾಡಬೇಕೆಂದು ಮಠಾಧೀಶರು, ಧರ್ಮಾಧಿಕಾರಿಗಳು, ಬುದ್ಧಿಜೀವಿಗಳು, ಪ್ರಜ್ಞಾವಂತ ಪ್ರಜೆಗಳು, ನೊಂದ ಮಹಿಳೆಯರು ಮನವಿ ಮಾಡಿದರೂ ಆರ್ಥಿಕ ಮುಗ್ಗಟ್ಟಿನ ನೆಪದಿಂದ ಮದ್ಯ

Vijaya Karnataka 6 May 2020, 5:00 am
ಲಕ್ಷ್ಮೇಶ್ವರ : ಕೊರೊನಾ ಹಿನ್ನೆಲೆಯಲ್ಲಿನಿಷೇಧಿಸಲಾಗಿದ್ದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಾಯಿ ಮುಕ್ತ ರಾಜ್ಯ ಮಾಡಬೇಕೆಂದು ಮಠಾಧೀಶರು, ಧರ್ಮಾಧಿಕಾರಿಗಳು, ಬುದ್ಧಿಜೀವಿಗಳು, ಪ್ರಜ್ಞಾವಂತ ಪ್ರಜೆಗಳು, ನೊಂದ ಮಹಿಳೆಯರು ಮನವಿ ಮಾಡಿದರೂ ಆರ್ಥಿಕ ಮುಗ್ಗಟ್ಟಿನ ನೆಪದಿಂದ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡುತ್ತಿರುವ ಸರಕಾರದ ಕ್ರಮ ಸರಿಯಲ್ಲಎಂದು ಬಾಲೇಹೊಸೂರಿನ ದಿಂಗಾಲೇಶ್ವರಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.
Vijaya Karnataka Web do not allow alcohol sales
ಮದ್ಯ ಮಾರಾಟಕ್ಕೆ ಅವಕಾಶ ಬೇಡ


ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಮದ್ಯ ಮಾರಾಟ ನಿಂತಿರುವುದರಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿ, ಸಂತೋಷದಿಂದ ಬದುಕುವಂತಾಗಿದೆ. ಸಾರಾಯಿ ಮಾರಾಟದಿಂದ ಅದೆಷ್ಟೋ ಮಹಿಳೆಯರು, ಮಕ್ಕಳು ಚಿತ್ರಹಿಂಸೆ, ಹಲ್ಲೆಯಿಂದ ನಿತ್ಯ ಕಣ್ಣೀರಿನಲ್ಲಿಗೋಳಾಡುವಂತಾಗಿದ್ದು, ಎಲ್ಲಮನೆಗಳಲ್ಲಿಶಾಂತಿ, ನೆಮ್ಮದಿಯ ವಾತಾವರಣ ನಿರ್ಮಾಣವಾಗಿತ್ತು. ಕುಡಿತದಿಂದ ದೂರವಾಗಿದ್ದ ಮನುಷ್ಯನನ್ನು ಮತ್ತೆ ಅದೇ ದಾರಿಗೆ ಕೊಂಡ್ಯೊಯ್ಯುವ ಕೆಟ್ಟ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ