ಆ್ಯಪ್ನಗರ

ಸಾರಾಯಿ ಅಂಗಡಿಗೆ ಬೇಡ: ಮನವಿ

ಶಿರಹಟ್ಟಿ : ತಾಲೂಕಿನ ಹೆಬ್ಬಾಳ ಗ್ರಾಪಂ ವ್ಯಾಪ್ತಿಯಲ್ಲಿ ಎಂಎಸ್‌ಐಎಲ್‌ ಲಿಕ್ಕರ್‌ ಶಾಪ್‌ ಮಂಜೂರು ಮಾಡದಂತೆ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ ಎ.ಡಿ.ಅಮರಾವದಗಿ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 19 Dec 2018, 5:00 am
ಶಿರಹಟ್ಟಿ : ತಾಲೂಕಿನ ಹೆಬ್ಬಾಳ ಗ್ರಾಪಂ ವ್ಯಾಪ್ತಿಯಲ್ಲಿ ಎಂಎಸ್‌ಐಎಲ್‌ ಲಿಕ್ಕರ್‌ ಶಾಪ್‌ ಮಂಜೂರು ಮಾಡದಂತೆ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ ಎ.ಡಿ.ಅಮರಾವದಗಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web do not ask for a sari shop petition
ಸಾರಾಯಿ ಅಂಗಡಿಗೆ ಬೇಡ: ಮನವಿ


ಗ್ರಾಮದಲ್ಲಿ ಎಂಎಸ್‌ಐಎಲ್‌ ಲಿಕ್ಕರ್‌ ಶಾಪ್‌ಗೆ ಮಂಜೂರು ನೀಡದಂತೆ ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಭ್ರಷ್ಟ ಅಧಿಕಾರಿಗಳ ಜತೆಗೆ ಶಾಮೀಲಾಗಿ ಹೆಬ್ಬಾಳ ಗ್ರಾಪಂ ಮೀಟಿಂಗ್‌ನಲ್ಲಿ ವಿಷಯ ಪ್ರಸ್ತಾಪಿಸದೆ ಲಿಕ್ಕರ್‌ ಶಾಪ್‌ ಮಂಜೂರಿಗಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಆಮಿಷಕ್ಕೆ ಬಲಿಯಾಗಿ ಠರಾವು ನೀಡಿದ್ದಾರೆ. ಪಡ್ಡೆ ಹುಡುಗರು ಈ ಹಿಂದೆ ಕುಡಿದು ರಸ್ತೆಯಲ್ಲಿ ಅಡ್ಡಾಡುತ್ತಿರುವುದರಿಂದ ಮಹಿಳೆಯರು ಬಹಿರ್ದೆಸೆಗೆ ಹೋಗಲು ಭಯ ಪಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಾಜಿ ಸೈನಿಕ ಗ್ರಾಪಂ ಸದಸ್ಯ ಎಂ.ಎಸ್‌.ವಾಲಿ, ಎಲ್‌.ಬಿ.ಮಲಿಯಮ್ಮನವರ, ರವಿ ಕನವಳ್ಳಿ, ಮಾಜಿ ತಾಪಂ ಅಧ್ಯಕ್ಷ ಶಿವನಗೌಡ ಕಂಠೀಗೌಡ್ರ, ಎಂ.ಎ.ಪಾಟೀಲ, ಸಿ.ಎಸ್‌.ಪಾಟೀಲ, ಎಸ್‌.ವಿ.ಬಡ್ಡಿಬಸಾಪೂರಮಠ, ವಿನಾಯಕ ಕುಲಕರ್ಣಿ, ಶರಣಪ್ಪ ಬಾರಕೇರ, ಶಾಂತನಗೌಡ ಪಾಟೀಲ, ಎಚ್‌.ಎಫ್‌.ಮಠದ, ಎಸ್‌.ಡಿ.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ