ಆ್ಯಪ್ನಗರ

ನನ್ನದೆಂಬ ಅಹಂಕಾರ ಭಾವಬೇಡ

ಗದಗ: ಮನಸ್ಸು ಶುದ್ಧ ಇದ್ದರೆ ಕರ್ಮ ಶ್ರೇಷ್ಠವಾಗುತ್ತದೆ. ಮನಸ್ಸು ಶುದ್ಧಿಕರಣ ಮಾಡುವ ಸೇವಾಕೇಂದ್ರವೆ ಈಶ್ವರೀಯ ವಿಶ್ವ ವಿದ್ಯಾಲಯ. ಸಂಕಲ್ಪ ಶ್ರೇಷ್ಠ ಇತ್ತು ಅಂದ್ರೇ ಕರ್ಮನು ಶ್ರೇಷ್ಠವಾಗುತ್ತದೆ. ಪರಮಾತ್ಮನ ನೆನಪಿನಲ್ಲಿ ಮಾಡುವ ಕರ್ಮ ಶ್ರೇಷ್ಠ ಕರ್ಮ ಸ್ವಯಂ ಸರ್ವರಿಗೂ ಖುಷಿಕೊಡುತ್ತದೆ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.

Vijaya Karnataka 2 May 2019, 5:00 am
ಗದಗ: ಮನಸ್ಸು ಶುದ್ಧ ಇದ್ದರೆ ಕರ್ಮ ಶ್ರೇಷ್ಠವಾಗುತ್ತದೆ. ಮನಸ್ಸು ಶುದ್ಧಿಕರಣ ಮಾಡುವ ಸೇವಾಕೇಂದ್ರವೆ ಈಶ್ವರೀಯ ವಿಶ್ವ ವಿದ್ಯಾಲಯ. ಸಂಕಲ್ಪ ಶ್ರೇಷ್ಠ ಇತ್ತು ಅಂದ್ರೇ ಕರ್ಮನು ಶ್ರೇಷ್ಠವಾಗುತ್ತದೆ. ಪರಮಾತ್ಮನ ನೆನಪಿನಲ್ಲಿ ಮಾಡುವ ಕರ್ಮ ಶ್ರೇಷ್ಠ ಕರ್ಮ ಸ್ವಯಂ ಸರ್ವರಿಗೂ ಖುಷಿಕೊಡುತ್ತದೆ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
Vijaya Karnataka Web GDG-1RUDRAGOUD16


ನಗರದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಬುಧವಾರ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕರ್ಮ ಮಾಡುವವರೆ ಕಾರ್ಮಿಕರು ಈ ದೇಹದ ಮೂಲಕ ಕರ್ಮ ಮಾಡುವ ಶಕ್ತಿ ಯಾವುದು? ಅದು ಯಾರಿಗೂ ಗೊತ್ತಿಲ್ಲ. ಅದು ಚೈತನ್ಯ ಶಕ್ತಿ ಆತ್ಮ ಆಗಿದೆ. ಯಾವುದೇ ಕರ್ಮ ಮಾಡಬೇಕಾದರೆ ನಿಮಿತ್ತ ಭಾವನೆಯಿಂದ ನಿರ್ಲಿಪ್ತವಾಗಿ ಮಾಡಬೇಕು. ಕರ್ಮ ಮಾಡಿದರೂ ಮಾಡದಂತೆ ಇರಬೇಕು ಹೇಗೆ ಬ್ಯಾಂಕಿನಲ್ಲಿ ಕ್ಯಾಶಿಯರ್‌ ಇಡಿ ದಿನ ಹಣ ಲೆಕ್ಕ ಮಾಡಿದರು ಈ ಹಣ ನನ್ನದಲ್ಲ ಎಂದು ಯಾವಾಗಲೂ ಅವನಿಗೆ ನೆನಪಿರುತ್ತದೆ. ಕರ್ಮ ಮಾಡುವಾಗ ನಾನು ನನ್ನದು ಬರಬಾರದು ಅಹಂಕಾರ ಬಂದರೆ ಕ್ರೋಧ ಬರುತ್ತದೆ. ಕ್ರೋಧ ಬಂದರೆ ದೇಹದ ಆರೋಗ್ಯ ಹಾಳು ಆಗುತ್ತದೆ ಎಂದರು.

ಪರೋಪಕಾರ ಮಾಡಲಿಕ್ಕೆನೆ ನಮಗೆ ಈ ಜನ್ಮ ಸಿಕ್ಕಿದೆ ಹೇಗೆ ಮರ ತಾನು ನೆರಳು, ಫಲ ಕೊಡುತ್ತದೆ. ತನ್ನ ಫಲತಾನು ತಿನ್ನುವುದಿಲ್ಲ ಹಸುವು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ, ದೀಪ ತಾನು ಸ್ವತಹ ಊರಿದು ಬೆಳಕು ಕೊಡುತ್ತದೆ. ನದಿ ತನ್ನ ನೀರನ್ನು ತಾನು ಕೂಡಿಯುವುದಿಲ್ಲ. ಪರೋಪಕಾರವೆ ಪುಣ್ಯ, ಪರಪಿಡನೇಯೆ ಪಾಪ. ಕೊಟ್ಟಿದ್ದು ತನಗೆ ಬಚಿಟ್ಟಿದ್ದು ಪರರಿಗೆ, ನಾವು ಯಾವರೀತಿ ಕರ್ಮ ಮಾಡುತ್ತೇವೆ ಅದಕ್ಕೆ ತಕ್ಕಂತೆ ಫಲ ಸಿಗುತ್ತದೆ ಎಂದರು.

ಚನ್ನಬಸಪ್ಪ ಅಕ್ಕಿ ಮಾತನಾಡಿ, ಈಶ್ವರೀಯ ಜ್ಞಾನ ತಮ್ಮ ಜೀವನದಲ್ಲಿ ಬಹಳ ಉಪಯುಕ್ತವಾಗಿದೆ. ಎಲ್ಲಾ ಕಾರ್ಮಿಕರಿಗೆ ಉಚಿತವಾಗಿ ಕೋಡುವ ಈಶ್ವರೀಯ ಜ್ಞಾನವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆಯಬೇಕು. ಯಾವುದೇ ರೀತಿಯ ಜಾತಿ ಮತ ಪಂಥ, ಬಡವ-ಬಲಿದ ಭೇದವಿಲ್ಲದೆ ಎಲ್ಲರಿಗೂ ನಿಸ್ವಾರ್ಥವಾದ ಸೇವೆಯನ್ನು ಸಲ್ಲಿಸುವ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯ ಚಟುವಟಿಕೆಗಳು ಬಹಳ ಪ್ರಾಶಂನೀಯ ಎಂದು ಹೇಳಿದರು.ಈಶ್ವರಿ ವಿದ್ಯಾಲಯದ ಸಿಬ್ಬಂದಿಗಳು, ಕಾರ್ಮಿಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ