ಆ್ಯಪ್ನಗರ

ಅಪರಿಚಿತರೊಂದಿಗೆ ವ್ಯವಹಾರ ಬೇಡ

ಅಕ್ಕಿಆಲೂರು : ರಸ್ತೆ ಸುರಕ್ಷ ತಾ ಕ್ರಮಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದರೆ ಅಪಘಾತಗಳ ಸಂಖ್ಯೆ ತಗ್ಗಲಿದೆ. ಈ ನಿಟ್ಟಿನಲ್ಲಿ ಕಾಳಜಿ ಬೇಕಿದೆ ಎಂದು ಹಾನಗಲ್‌ ಸಿಪಿಐ ಪ್ರವೀಣ ನೀಲಮ್ಮನವರ ಹೇಳಿದರು.

Vijaya Karnataka 10 Feb 2019, 5:00 am
ಅಕ್ಕಿಆಲೂರು : ರಸ್ತೆ ಸುರಕ್ಷ ತಾ ಕ್ರಮಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದರೆ ಅಪಘಾತಗಳ ಸಂಖ್ಯೆ ತಗ್ಗಲಿದೆ. ಈ ನಿಟ್ಟಿನಲ್ಲಿ ಕಾಳಜಿ ಬೇಕಿದೆ ಎಂದು ಹಾನಗಲ್‌ ಸಿಪಿಐ ಪ್ರವೀಣ ನೀಲಮ್ಮನವರ ಹೇಳಿದರು.
Vijaya Karnataka Web HVR-9AKR1
ಅಕ್ಕಿಆಲೂರಿನಲ್ಲಿ ನಡೆದ ರಸ್ತೆ ಸುರಕ್ಷ ತಾ ಸಪ್ತಾಹ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಗುರುರಾಜ್‌ ಮೈಲಾರ ಮಾತನಾಡಿದರು.


ಇಲ್ಲಿನ ನರಸಿಂಗರಾವ್‌ ದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಾನಗಲ್‌ ಪೊಲೀಸ್‌ ಠಾಣೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷ ತಾ ಸಪ್ತಾಹ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಶಯಾಸ್ಪದವಾಗಿ ತಿರುಗಾಡುವರ ಬಗೆಗೆ ಎಚ್ಚರಿಕೆ ಇರಲಿ. ಪೂರ್ವಾಪರ ಮಾಹಿತಿ ಇಲ್ಲದೇ ಅಪರಿಚಿತರೊಂದಿಗೆ ವ್ಯವಹಾರ ಮಾಡುವುದು ಬೇಡ. ಕಾನೂನು ವಿರೋಧಿ ಚಟುವಟಿಕೆಗಳು ಎಲ್ಲಿಯೇ ನಡೆದರೂ ಆ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸಿ ಜವಾಬ್ದಾರಿ ಪಾಲಿಸುವಂತೆ ಕರೆ ನೀಡಿದರು.

ಪಿಎಸ್‌ಐ ಗುರುರಾಜ್‌ ಮೈಲಾರ ಮಾತನಾಡಿ, ಅನ್ಯಾಯಧಿ-ಅನಾಚಾರದಂಥ ಕಾನೂನು ಬಾಹಿರ ಚಟುವಟಿಕೆ ನಿಗ್ರಹಿಸುವಲ್ಲಿ ಪ್ರತಿಯೊಬ್ಬರೂ ಪೊಲೀಸ್‌ ಇಲಾಖೆಯೊಂದಿಗೆ ಕೈ ಜೋಡಿಸಬೇಕಿದೆ. ಪ್ರತಿ ಪ್ರಜೆ ಕನಿಷ್ಟ ಕಾನೂನು ಪ್ರಜ್ಞೆ ಹೊಂದಿ ಈ ನೆಲದ ಕಾನೂನು ಗೌರವಿಸಿ, ಅನುಸರಿಸಬೇಕಿದೆ. ಕಾನೂನು ಕೈಗೆತ್ತಿಕೊಂಡು ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಗಳಾಗುವರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಸಲಿದೆ ಎಂದರು. ಅಪರಾಧ ಪ್ರಕರಣ ತಡೆಗಟ್ಟುವಲ್ಲಿ ಸಹಕಾರಿಯಾಗುವ ಕೆಲವು ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಪ್ರಾ.ಎಚ್‌.ಬಿ.ಉಮಾಪತಿ, ಹಿರಿಯ ಶಿಕ್ಷ ಕ ಎಂ.ಎನ್‌.ಹರಿಜನ, ಪೊಲೀಸ್‌ ಇಲಾಖೆಯ ಎಸ್‌.ಎಂ.ಬೇಂದ್ರೆ, ಜೆ.ಬಿ.ವಗ್ಗನವರ, ಎಲ್‌.ಎಲ್‌.ಪಾಟೀಲ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ