ಆ್ಯಪ್ನಗರ

ಪರಿಹಾರ ನೀಡಲು ವಿಳಂಬ ಬೇಡ

ಗದಗ : ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು ಈಗಾಗಲೇ ಜಿಲ್ಲಾಡಳಿತ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮ ಕೈಕೊಳ್ಳಲು ಹಾಗೂ ತಾಲೂಕು ಸಹಾಯವಾಣಿ ಪ್ರಾರಂಭಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Vijaya Karnataka 25 Jun 2019, 5:00 am
ಗದಗ : ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು ಈಗಾಗಲೇ ಜಿಲ್ಲಾಡಳಿತ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮ ಕೈಕೊಳ್ಳಲು ಹಾಗೂ ತಾಲೂಕು ಸಹಾಯವಾಣಿ ಪ್ರಾರಂಭಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
Vijaya Karnataka Web GDG-24RUDRAGOUD5
ಗದಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿದರು.


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಜೀವಹಾನಿ ಸಂದರ್ಭದಲ್ಲಿ ವಿಳಂಬಿಸದೇ ಪರಿಹರ ವಿತರಣೆಗೆ ತಹಸೀಲ್ದಾರರು ಕ್ರಮ ಜರುಗಿಸಬೇಕು. ಗದಗ ಹೊರತುಪಡಿಸಿ ಎಲ್ಲ ತಹಸೀಲ್ದಾರ ಹತ್ತಿರ ಬೋಟ್‌ಗಳಿದ್ದು ಅವುಗಳು ಉಪಯೋಗಕ್ಕೆ ಬರುವಂತೆ ಅಗತ್ಯ ದುರಸ್ತಿ ಮಾಡಿಸಿ ಸನ್ನದ್ಧತೆಯಲ್ಲಿ ಇಟ್ಟುಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಈ ಹಿಂದಿನ ಸಂದರ್ಭಗಳಲ್ಲಿ ಮಳೆ ಪ್ರವಾಹದಿಂದ ಬಾಧಿತವಾಗುವ ಗ್ರಾಮ, ಹಳ್ಳಗಳನ್ನು ಗುರುತಿಸಿ ಅವುಗಳ ಮೇಲೆ ನಿಗಾ ಇಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ನಗರ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ , ಸೊಳ್ಳೆ ನಿಯಂತ್ರಕ ಫಾಗಿಂಗ್‌ ಕಾರ‍್ಯಗಳನ್ನು ನಿಯಮಿತವಾಗಿ ಮಾಡಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ನಗರ ಹಾಗೂ ಗ್ರಾಪಂಗಳ ಸಮನ್ವಯತೆ ಮೂಲಕ ಅಗತ್ಯದ ಮುನ್ನೆಚ್ಚರಿಕೆ, ಜನಜಾಗೃತಿ ಕಾರ‍್ಯ ಕೈಕೊಳ್ಳಬೇಕು. ಮಳೆ ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪಗಳಿಂದ ಹಾನಿಯಾಗುವ ಗ್ರಾಮಗಳಲ್ಲಿ ಕಂದಾಯ ನಿರೀಕ್ಷ ಕರು ತಕ್ಷ ಣ ಭೇಟಿ ನೀಡಿ ತಹಸೀಲ್ದಾರರಿಗೆ ಅಗತ್ಯ ಮಾಹಿತಿ ನೀಡಬೇಕು.ಎಲ್ಲ ತಹಸೀಲ್ದಾರರಲ್ಲಿ ವಿಪತ್ತು ನಿರ್ವಹಣೆಗೆ ಸರಾಸರಿ 25 ಲಕ್ಷ ರೂ. ಇರುವಂತೆ ಅನುದಾನ ನೀಡಲಾಗುತ್ತಿದೆ ಎಂದರು.

ಅರ್ಜಿ ಜತೆಗೆ ಘೋಷಣಾ ಪತ್ರ ಅಗತ್ಯವಾಗಿದ್ದು ಜಿಲ್ಲೆಯಲ್ಲಿ 1.79 ಲಕ್ಷ ರೈತರ ಪೈಕಿ ಈಗಾಗಲೇ 1 ಲಕ್ಷ ಕ್ಕೂ ಹೆಚ್ಚಿನ ರೈತರು ಪ್ರಧಾನ ಮಂತ್ರಿ ರೈತ ಸಮ್ಮಾನ ನಿಧಿ ಯೋಜನೆಯಡಿ ನೋಂದಣಿ ಆಗಿದ್ದು ಇನ್ನುಳಿದ 79 ಸಾವಿರ ರೈತರು ಜೂ.28 ರ ಒಳಗಾಗಿ ನೋಂದಣಿ ಆಗುವಂತೆ ತಹಸೀಲ್ದಾರರು, ತಾಪಂ ಕಾರ‍್ಯನಿರ್ವಾಹಕ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಗಳು, ಚುರುಕಿನಿಂದ ಕಾರ‍್ಯನಿರ್ವಹಿಸಲು ಸಲಹೆ ನೀಡಿದರು.

ಈ ಯೋಜನೆಯಡಿ ಭೂಮಿ ಹೊಂದಿರುವ ಸಂಘ ಸಂಸ್ಥೆಗಳು, ಮಾಜಿ ಹಾಗೂ ಹಾಲಿ ಸಂವಿಧಾನಿಕ ಹುದ್ದೆ ಹೊಂದಿದ ಕುಟುಂಬಗಳು, ಕೇಂದ್ರ ಹಾಗೂ ರಾಜ್ಯ ಹಾಲಿ ಮಾಜಿ ಸಚಿವರು, ಸಂಸದರು, ಶಾಸಕರು , ನಗರ ಪುರಸಭೆ ಅಧ್ಯಕ್ಷ ರು, ಗ್ರುಪ್‌ ಡಿ ಹೊರಡುಪಡಿಸಿ ಸರಕಾರಿ ಸ್ಥಳೀಯ ಸಂಸ್ಥೆಗಳು, ಸರಕಾರಿ ಸ್ವಾಮ್ಯದ ಹಾಲಿ ಹಾಗೂ ಮಾಜಿ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿ, 10 ಸಾವಿರಕ್ಕೂ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು, ತೆರಿಗೆ ಪಾವತಿದಾರರು, ವೃತ್ತಿಪರ ಉದ್ಯೋಗ ನಡೆಸುತ್ತಿರುವವರು, ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಮಾಹಿತಿಗೆ ರೈತ ಸಂಪರ್ಕ, ಗ್ರಾಪಂ ಕಂದಾಯ, ಕೃಷಿ , ತೋಟಗಾರಿಕೆ , ರೇಷ್ಮೆ ಇಲಾಖೆ, ನಾಡಕಚೇರಿ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು.

2018 ರ ಮುಂಗಾರು ಬೆಳೆ ಹಾನಿಯ ಇನ್‌ಫುಟ್‌ ಸಬ್ಸಿಡಿ ಪಡೆಯಬೇಕಾಗಿರುವ ಜಿಲ್ಲೆಯ ಬಾಕಿ ರೈತರ ಮಾಹಿತಿಯನ್ನು ತಕ್ಷ ಣ ಅಪ್‌ಲೋಡ್‌ ಮಾಡಲು ತಹಸೀಲ್ದಾರರು ಕಾರ‍್ಯನಿರ್ವಹಿಸಬೇಕು. ವಿಳಂಬವಾದಲ್ಲಿ ಅವರೇ ಹೊಣೆಗಾರರರು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಜಿಪಂ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್‌.ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ, ತಹಸೀಲ್ದಾರರು, ತಾಪಂ ಕಾರ‍್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ