ಆ್ಯಪ್ನಗರ

ಬಡತನ ವಿದ್ಯೆಗೆ ತೊಡಕಾಗದಿರಲಿ

ನರೇಗಲ್ಲ : ವಿದ್ಯಾರ್ಥಿಗಳು ಬಡತನದ ಕಾರಣದಿಂದ ವಿದ್ಯಾಭ್ಯಾಸದಿಂದ ವಿಮುಖರಾಗಬಾರದು. ಸರಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸಹಾಯ ಪಡೆದು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದು ವೈ.ಬಿ. ಪೊಲೀಸ್‌ಪಾಟೀಲ ಹೇಳಿದರು.

Vijaya Karnataka 10 Jul 2019, 5:00 am
ನರೇಗಲ್ಲ : ವಿದ್ಯಾರ್ಥಿಗಳು ಬಡತನದ ಕಾರಣದಿಂದ ವಿದ್ಯಾಭ್ಯಾಸದಿಂದ ವಿಮುಖರಾಗಬಾರದು. ಸರಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸಹಾಯ ಪಡೆದು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದು ವೈ.ಬಿ. ಪೊಲೀಸ್‌ಪಾಟೀಲ ಹೇಳಿದರು.
Vijaya Karnataka Web GDG-9nrgl1
ನರೇಗಲ್ಲ ಸಮೀಪದ ತೋಟಗಂಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಶಾಲಾ ಮಕ್ಕಳ ಬಡ ವಿದ್ಯಾರ್ಥಿಗಳಿಗೆ ಡಾ. ಪಾಟೀಲ್‌ ಕೊಡಮಾಡಿದ ಉಚಿತ ಸಮವಸ್ತ್ರ ವಿತರಿಸಲಾಯಿತು.


ನರೇಗಲ್ಲ ಮಜರೆ ತೋಟಗಂಟಿ ಗ್ರಾಮದಲ್ಲಿ ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಶಾಲೆ ವಿದ್ಯಾರ್ಥಿಗಳಿಗೆ ಡಾ. ಬಿ. ಎನ್‌. ಪಾಟೀಲ್‌ ಕೊಡಮಾಡಿದ ಉಚಿತ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದರು. ಮಕ್ಕಳ ಶಿಕ್ಷ ಣಕ್ಕೆ ಪೂರಕ ವಾತಾವರಣ ನಿರ್ಮಿಸುವ ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಗುಣಮಟ್ಟದ ಶಿಕ್ಷ ಣ ದೊರೆತರೆ ಅವರು ಉತ್ತಮ ಸಾಧನೆ ಮಾಡಬಲ್ಲರು. ಸಾಧನೆಗೆ ಬಡತನ ತೊಡಕಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷ ಣಕ್ಕೆ ಸಹಾಯ ಮಾಡುವ ಮನೋಧರ್ಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಹುಟ್ಟು ಮುಖ್ಯವಲ್ಲ. ಆದರೆ ಹುಟ್ಟಿದ ವ್ಯಕ್ತಿ ಹೇಗೆ ಬದುಕುತ್ತಾನೆ ಎಂಬುದು ಮುಖ್ಯ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಸಾಧನೆಗೈದ ಹಲವರು ನಮ್ಮ ನಡುವೆ ಉತ್ತಮ ಸಾಧನೆ ಮಾಡಿದ್ದಾರೆ. ಉತ್ತಮ ಪರಿಸರ ಎಂತಹ ಕ್ರೂರಿಯನ್ನಾದರೂ ಸಜ್ಜನನನ್ನಾಗಿಸುತ್ತದೆ. ಅಂತಹ ಪೂರಕ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದರು.

ಮುಖ್ಯೋಪಾಧ್ಯಾಯ ಎಲ್‌. ಎಲ್‌. ಯಂಕಾನಾಯಕ್‌ ಅಧ್ಯಕ್ಷ ತೆ ವಹಿಸಿ, ಮಕ್ಕಳ ಶೈಕ್ಷ ಣಿಕ ಪ್ರಗತಿಗಾಗಿ ಸರಕಾರದೊಂದಿಗೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಎಲ್ಲರೂ ಸುಶಿಕ್ಷಿತರನ್ನಾಗಿಸಬೇಕು. ಸರಕಾರವು ವಿವಿಧ ಉಚಿತ ಸೌಲಭ್ಯ ನೀಡುತ್ತಿದ್ದು, ಜತೆಗೆ ಬಿಸಿಯೂಟ, ವಿದ್ಯಾರ್ಥಿ ವೇತನ ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಡ್ಡಿರಹಿತ ಸಾಲದ ಸೌಲಭ್ಯ ಹೀಗೆ ಅನೇಕ ಸೌಲಭ್ಯ ಕಲ್ಪಿಸಿದೆ. ಇದರಿಂದ ಪೋಷಕರಿಗೆ ಸಂಪೂರ್ಣ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ದೇಶದ ಶೈಕ್ಷ ಣಿಕ ಪ್ರಗತಿಗೆ ಸಹಕರಿಸಬೇಕು ಎಂದರು.

ಪಪಂ ಸದಸ್ಯ ಮುತ್ತಪ್ಪ ನೂಲ್ಕಿ, ಡಿ. ಎಚ್‌. ಪರಂಗಿ, ಬಿ. ಎ. ಭರಮಗೌಡ್ರ, ಮಲ್ಲಿಕಾರ್ಜುನ ತೇಜಪ್ಪನವರ ಇತರರು ಉಪಸ್ಥಿತರಿದ್ದರು.ಶೈಲಾ ಹಿರೇಮಠ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ