ಗಜೇಂದ್ರಗಡ :ನೋಟಿಗೆ ಓಟು ಮಾರಿಕೊಳ್ಳಬೇಡಿ. ಯಾವುದೇ ದುಷ್ಟ ಪ್ರಚೋದನೆಗೆ ಒಳಗಾಗದೆ ಉತ್ತಮ ಚರಿತ್ರೆಯುಳ್ಳ, ಶುದ್ಧ ಹಸ್ತವಾದ ಪ್ರಜಾಪ್ರತಿನಿಧಿಯನ್ನು ಚುನಾಯಿಸುವುದು ಎಲ್ಲ ಮತದಾರರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ ಎಸ್.ಎಸ್. ಹಿರೇಮಠ ಹೇಳಿದರು.
ಸ್ಥಳೀಯ ಮೈಸೂರಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಪುರಸಭೆಯಿಂದ 93ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಸಾಪ ಅಧ್ಯಕ್ಷ ಈಶ್ವರಪ್ಪ ರೇವಡಿ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ವಿಯಾಗಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವದು ಅವಶ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪಾತ್ರ ಅತ್ಯಂತ ಮಹತ್ತರವಾಗಿದೆ. ಜನತಂತ್ರದ ಮುಖ್ಯ ಅಂಗವೇ ಚುನಾವಣೆ. ಮತದಾರ ಪ್ರಭು ತನ್ನ ನಾಯಕರ ಆಯ್ಕೆಯಲ್ಲಿ ಮತ ಹಾಕುವಾಗ ಪ್ರಜ್ಞಾವಂತಿಕೆ ತೋರಬೇಕು ಎಂದರು.
ಇದೇ ಸಂದರ್ಭದಲ್ಲಿ ಸಭಿಕರು ಸಚ್ಚಾರಿತ್ರ್ಯವಂತ ವ್ಯಕ್ತಿತ್ವದ ವ್ಯಕ್ತಿಯ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪ ಡಿಸೋಣ ಎಂಬ ಪ್ರತಿಜ್ಞಾವಿಧಿ ಸಾಮೂಹಿಕ ಸ್ವಿಕರಿಸಿದರು. ಎಸ್.ಎಸ್. ನರೇಗಲ್ ಬೋಧಿಸಿದರು. ಶರಣಪ್ಪ ಬೇವಿನಕಟ್ಟಿ ಮತದಾನ ಕುರಿತ ಕವನ ವಾಚಿಸಿದರು.
ಪುರಸಭೆ ಯೋಜನಾಧಿಕಾರಿ ಎನ್.ಎಚ್. ಖುದಾನವರ, ಎಂ.ಬಿ. ಒಂಟಿ, ಶಿಕ್ಷ ಕ ಎಸ್.ಎ. ಜಿಗಳೂರ, ಬಿ.ಟಿ. ಹೊಸಮನಿ, ಬಸವರಾಜ ಮುನವಳ್ಳಿ, ಎಮ್.ಎಸ್. ಮಕಾನದಾರ, ಬಸವರಾಜ ಇಂಡಿ, ಎ.ಎಚ್. ನೀಲಿ, ಮೆಹಬೂಬ ಚಾಮಲಾಪುರ, ಯಲ್ಲಮ್ಮಾ ವಕ್ಕುಂದ, ಎ.ಎಕ. ಒಂಟಿ, ಹುಚ್ಚಪ್ಪ ಹಾವೇರಿ, ಭೀಮಾಂಬಿಕಾ ನೂಲ್ವಿ, ಶರಣಪ್ಪ ಬೇವಿಕಟ್ಟಿ, ಕೆ.ಎಸ್. ಗಾರ ವಾಡಹಿರೇಮಠ, ಎಸ್.ಎಸ್. ತುಗ್ಗಣಿ, ಎಚ್.ಆರ್.ಭಜೇಂತ್ರಿ ಮುಂತಾದವರು ಉಪಸ್ಥಿತರಿದ್ದರು.
ಸ್ಥಳೀಯ ಮೈಸೂರಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಪುರಸಭೆಯಿಂದ 93ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಸಾಪ ಅಧ್ಯಕ್ಷ ಈಶ್ವರಪ್ಪ ರೇವಡಿ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ವಿಯಾಗಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವದು ಅವಶ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪಾತ್ರ ಅತ್ಯಂತ ಮಹತ್ತರವಾಗಿದೆ. ಜನತಂತ್ರದ ಮುಖ್ಯ ಅಂಗವೇ ಚುನಾವಣೆ. ಮತದಾರ ಪ್ರಭು ತನ್ನ ನಾಯಕರ ಆಯ್ಕೆಯಲ್ಲಿ ಮತ ಹಾಕುವಾಗ ಪ್ರಜ್ಞಾವಂತಿಕೆ ತೋರಬೇಕು ಎಂದರು.
ಇದೇ ಸಂದರ್ಭದಲ್ಲಿ ಸಭಿಕರು ಸಚ್ಚಾರಿತ್ರ್ಯವಂತ ವ್ಯಕ್ತಿತ್ವದ ವ್ಯಕ್ತಿಯ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪ ಡಿಸೋಣ ಎಂಬ ಪ್ರತಿಜ್ಞಾವಿಧಿ ಸಾಮೂಹಿಕ ಸ್ವಿಕರಿಸಿದರು. ಎಸ್.ಎಸ್. ನರೇಗಲ್ ಬೋಧಿಸಿದರು. ಶರಣಪ್ಪ ಬೇವಿನಕಟ್ಟಿ ಮತದಾನ ಕುರಿತ ಕವನ ವಾಚಿಸಿದರು.
ಪುರಸಭೆ ಯೋಜನಾಧಿಕಾರಿ ಎನ್.ಎಚ್. ಖುದಾನವರ, ಎಂ.ಬಿ. ಒಂಟಿ, ಶಿಕ್ಷ ಕ ಎಸ್.ಎ. ಜಿಗಳೂರ, ಬಿ.ಟಿ. ಹೊಸಮನಿ, ಬಸವರಾಜ ಮುನವಳ್ಳಿ, ಎಮ್.ಎಸ್. ಮಕಾನದಾರ, ಬಸವರಾಜ ಇಂಡಿ, ಎ.ಎಚ್. ನೀಲಿ, ಮೆಹಬೂಬ ಚಾಮಲಾಪುರ, ಯಲ್ಲಮ್ಮಾ ವಕ್ಕುಂದ, ಎ.ಎಕ. ಒಂಟಿ, ಹುಚ್ಚಪ್ಪ ಹಾವೇರಿ, ಭೀಮಾಂಬಿಕಾ ನೂಲ್ವಿ, ಶರಣಪ್ಪ ಬೇವಿಕಟ್ಟಿ, ಕೆ.ಎಸ್. ಗಾರ ವಾಡಹಿರೇಮಠ, ಎಸ್.ಎಸ್. ತುಗ್ಗಣಿ, ಎಚ್.ಆರ್.ಭಜೇಂತ್ರಿ ಮುಂತಾದವರು ಉಪಸ್ಥಿತರಿದ್ದರು.