ಆ್ಯಪ್ನಗರ

ನೀರು ವ್ಯರ್ಥಗೊಳಿಸದೇ ಸದ್ಬಳಕೆ ಮಾಡಿ

ನರಗುಂದ : ಶೇ.4 ರಷ್ಟು ಮಾತ್ರ ಭೂಮಿಯಲ್ಲಿ ನೀರು ಹೊಂದಿದ್ದರಿಂದ ಬರುವ ದಿನಗಳಲ್ಲಿ ಅಂತರ್‌ಜಲಮಟ್ಟ ಮತ್ತಷ್ಟು ಕುಸಿದು ನೀರಿನ ಸಮಸ್ಯೆ ಉಲ್ಬಣಿಸುವ ಮೊದಲೇ ಭವಿಷ್ಯದ ದೃಷ್ಠಿಯಿಂದ ನೀರು ವ್ಯರ್ಥಗೊಳಿಸದೇ ಸದ್ಬಳಕೆ ಮಾಡಿ. ಹರಿದು ಹೋಗುವ ಮಳೆ ನೀರನ್ನು ತಡೆದು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

Vijaya Karnataka 23 Feb 2019, 5:00 am
ನರಗುಂದ : ಶೇ.4 ರಷ್ಟು ಮಾತ್ರ ಭೂಮಿಯಲ್ಲಿ ನೀರು ಹೊಂದಿದ್ದರಿಂದ ಬರುವ ದಿನಗಳಲ್ಲಿ ಅಂತರ್‌ಜಲಮಟ್ಟ ಮತ್ತಷ್ಟು ಕುಸಿದು ನೀರಿನ ಸಮಸ್ಯೆ ಉಲ್ಬಣಿಸುವ ಮೊದಲೇ ಭವಿಷ್ಯದ ದೃಷ್ಠಿಯಿಂದ ನೀರು ವ್ಯರ್ಥಗೊಳಿಸದೇ ಸದ್ಬಳಕೆ ಮಾಡಿ. ಹರಿದು ಹೋಗುವ ಮಳೆ ನೀರನ್ನು ತಡೆದು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
Vijaya Karnataka Web GDG-20NRD2
ನರಗುಂದ ತಾಲೂಕು ಚಿಕ್ಕನರಗುಂದದಲ್ಲಿ ನದಿ ಪುನಶ್ಚೇತನ ಕಾರ್ಯಕ್ರಮವನ್ನು ಶಾಸಕ ಸಿ.ಸಿ.ಪಾಟೀಲ ಉದ್ಘಾಟಿಸಿದರು.


ತಾಲೂಕಿನ ಚಿಕ್ಕನರಗುಂದ ಗ್ರಾಮದ ಹೊರವಲಯದ ಹಂಪನ್ನವರ ಹೊಲದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನದಿ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆಯೇ ಆರ್ಟ ಆಫ್‌ ಲಿವಿಂಗ್‌ ನದಿ ಪುನಶ್ಚೇತನ ಯೋಜನೆ ಜಾರಿಗೆ ತಂದಿದ್ದು ಈಗ ಮತ್ತೇ ಹೊಸ ತಂತ್ರಜ್ಞಾನ ಬಳಿಸಿ ಇಂಗುಗುಂಡಿ ನಿರ್ಮಿಸಲು ಮುಂದಾಗಿದೆ ಎಂದರು.

ಮಳೆಗಾಲದಲ್ಲಿ ಹಳ್ಳ, ಕೊಳ್ಳಗಳಲ್ಲಿ ಹರಿಯುವ ನೀರನ್ನು ತಡೆದು ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಇಂಗುಗುಂಡಿಗೆ ಹರಿಸುವುದರಿಂದ ಅಂತರ್‌ಜಲಮಟ್ಟ ಏರಿಕೆಯಾಗುವ ಉದ್ದೇಶದಿಂದ ಆರ್ಟಆಫ್‌ ಲಿವಿಂಗ್‌ ಸಹಯೋಗದಲ್ಲಿ ಎನ್‌ಆರ್‌ಜಿಯಿಂದ ಹಣ ಒದಗಿಸಲಾಗುತ್ತಿದೆ. ಹಿಂದಿನಂತೆ ಕಳಪೆ ಕಾಮಗಾರಿಗೆ ಅವಕಾಶವಿಲ್ಲ, ವಿಫಲವಾದರೆ ನರಗುಂದ ತಾಲೂಕಿನಲ್ಲಿ ಈ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ ಅವರು, ನೀರಿನ ಸದ್ಬಳಕೆ ಮತ್ತು ಇಂಗುಗುಂಡಿ ನಿರ್ಮಿಸುವಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.

ಆರ್ಟ್‌ ಆಫ್‌ ಲಿವಿಂಗ್‌ ರವಿ ಶಂಕರ ಗುರೂಜಿ ಅವರು ಅಂತರ್‌ಜಲಮಟ್ಟಸುಧಾರಿಸುವ ಉದ್ದೇಶದಿಂದ ನಿಧಿ ಪುನಶ್ಚೇತನ ಯೋಜನೆ ಜಾರಿಗೆ ತಂದಿದ್ದು ಗದಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಗುರುತಿಸಲಾದ ಹತ್ತು ಸ್ಥಳಗಳಲ್ಲಿ ಕಾಮಗಾರಿ ಕೈಗೊಂಡಿದ್ದು ನೀರು ಹಿಡಿಯುವ ಶಕ್ತಿ ಎಲ್ಲಿದೆ ಎಂಬುದನ್ನು ತಂತ್ರಜ್ಞಾನದ ಮೂಲಕ ಗುರುತಿಸಿ ಅಲ್ಲಿ ಇಂಗುಗುಂಡಿ ನಿರ್ಮಿಸಲಾಗುತ್ತಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮಾತನಾಡಿ, ತಾಲೂಕಿನಲ್ಲಿ 1500 ಇಂಗುಗುಂಡಿಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು ಚಿಕ್ಕನರಗುಂದದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಿಸಾನ್‌ ಯೋಜನೆ ಜಾರಿ

ನರಗುಂದ: ಪ್ರಧಾನ ಮಂತ್ರಿಗಳ ಕಿಸಾನ್‌ ಯೋಜನೆ ಚಿಕ್ಕನರಗುಂದದಲ್ಲಿ ಜಾರಿಯಾಗಿದ್ದು ಐದು ಎಕರೆ ಒಳಗಿನ 573 ರೈತರ ಯಾದಿ ಲಗತ್ತಿಸಲಾಗಿದ್ದು ಹೆಸರು ಬಾರದೇ ಇರುವ ರೈತರು ಗ್ರಾಪಂ, ತಾಪಂ ಅಥವಾ ಕೃಷಿ ಇಲಾಖೆ ಸಂಪರ್ಕಿಸಿ ಅಗತ್ಯ ದಾಖಲೆ ನೀಡಿ ವರ್ಷಕ್ಕೆ 6 ಸಾವಿರ ಹಣ ಪಡೆಯಬಹುದು ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು. ತಾಪಂ ಇಒ ನಾರಾಯಣರಡ್ಡಿ ಕಣಕರಡ್ಡಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಬಸವ್ವ ಹಳೆಮನಿ, ಉಪಾಧ್ಯಕ್ಷ ಸುರೇಶ ಸಾತನ್ನವರ, ಜಿಪಂ ಸದಸ್ಯೆ ರೇಣುಕಾ ಅವರಾದಿ, ಎಸ್‌.ಎಂ.ಗಣೇಶಿ, ಮಲ್ಲಪ್ಪ ತೊರಗಲ್ಲ, ಅಶೋಕ ಜ್ಞಾನೋಪಂತ, ನಿರ್ಮಾಲಾ ಯರಗಟ್ಟಿ, ಪಾರ್ವತೆವ್ವ ಚನ್ನಪ್ಪಗೌಡ್ರ, ತಿಪ್ಪವ್ವ ಚಲವಾದಿ, ಗಿರಿಯಪ್ಪಗೌಡ ಚನ್ನಪ್ಪಗೌಡ್ರ, ರುದ್ರಗೌಡ ರಾಚನಗೌಡ್ರ, ಮಲ್ಲಪ್ಪ ಕಲಹಾಳ, ಶಿವನಗೌಡ ಸಾಲೂಟಗಿ, ತಾಪಂ ವ್ಯವಸ್ಥಾಪಕ ಸಿ.ಆರ್‌.ಕುರ್ತಕೊಟಿ ಮುಂತಾದವರಿದ್ದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಿಡಿಒ ಸಾವಳಗಿ ಸ್ವಾಗತಿಸಿದರು. ಶಿಕ್ಷ ಕ ಬಿ.ಆರ್‌.ಮಹಾದೇವಪ್ಪನವರ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ