ಆ್ಯಪ್ನಗರ

ರಕ್ತದಾನ ಮಾಡಿ ಜೀವ ಕಾಪಾಡಿ

ರೋಣ: ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತ ದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಲು ಮುಂದಾಗಬೇಕಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಮುಂದೆ ಬಂದಲ್ಲಿಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ರಮೇಶ ಬೇವಿನಗಿಡದ ಹೇಳಿದರು.

Vijaya Karnataka 23 Nov 2019, 5:40 pm
ರೋಣ: ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತ ದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಲು ಮುಂದಾಗಬೇಕಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಮುಂದೆ ಬಂದಲ್ಲಿಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ರಮೇಶ ಬೇವಿನಗಿಡದ ಹೇಳಿದರು.
Vijaya Karnataka Web donate blood and save lives
ರಕ್ತದಾನ ಮಾಡಿ ಜೀವ ಕಾಪಾಡಿ


ಅವರು ಶುಕ್ರವಾರ ತಾಲೂಕಿನ ಹಿರೇಹಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಕರುಣಾ ಟ್ರಸ್ಟ್‌, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾರಕ್ತ ಭಂಡಾರ ಗದಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಹಾಳ ಆಶ್ರಯದಲ್ಲಿಜರುಗಿದ ಉಚಿತ ರಕ್ತ ದಾನ ಶಿಬಿರ ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದರು. ಪ್ರಥಮವಾಗಿ ಯುವಕರು ದುಶ್ಚಟ ದೂರವಿಟ್ಟು ರಕ್ತದಾನಕ್ಕೆ ಮುಂದಾಗಬೇಕು.ಎಲ್ಲದಾನಗಳಿಗಿಂತ ಶ್ರೇಷ್ಠ ದಾನವೆಂದರೆ ಅದು ರಕ್ತದಾನ. ಅಪಘಾತದ ಸಂದರ್ಭದಲ್ಲಿಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವ್ಯಕ್ತಿಗೆ ರಕ್ತ ಪುನರ್ಜನ್ಮ ನೀಡುತ್ತದೆ. ಆದ್ದರಿಂದ ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಮಾಡಬೇಕು ಎಂದರು.

ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ದುಶ್ಚಟ ದೂರವಿಟ್ಟು ಪೌಷ್ಟಿಕ ಆಹಾರ ಸೇವೆನೆಯಿಂದ ಸದೃಢರಾಗಬೇಕು ಹಾಗೂ ಎಲ್ಲವಿದ್ಯಾರ್ಥಿಗಳು ಸ್ವಚ್ಛತೆ ಕುರಿತು ತಮ್ಮ ಮನೆಯಲ್ಲಿಹಾಗೂ ಅಕ್ಕ ಪಕ್ಕದ ಮನೆಯವರಿಗೆ ಅರಿವು ಮೂಡಿಸಬೇಕು ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ರಕ್ತದಾನ ಮಾಡುವುದರಿಂದ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು ಹಾಗೂ ನರ ರೋಗಗಳು ಬರುವುದಿಲ್ಲಹಾಗೂ ರಕ್ತ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದು ನಾವೆಲ್ಲರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದಂತೆ ಆಗುತ್ತದೆ ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ದಳವಾಯಿ ಮಾತನಾಡಿ,ಕರುಣ ಟ್ರಸ್ಟ್‌ ಸಂಸ್ಥೆಯವರು ನಮ್ಮೂರ ಆಸ್ಪತ್ರೆಯನ್ನು ಇ-ಆಸ್ಪತ್ರೆಯನ್ನಾಗಿ ಮಾಡುತ್ತಿದ್ದಾರೆ. ಈಗಾಗಲೆ ರೋಗಿಗಳ ನೋಂದಣಿ ಮಾಡುತ್ತಿದ್ದು ಮತ್ತು ಇಂದು ಹೃದಯ ಸಂಬಂದಿ ಖಾಯಿಲೆ ಪತ್ತೆಹಚ್ಚಲು ಸಂಸ್ಥಯು ಮೊಬೈಲ್‌ ಮೂಲಕ ಇಸಿಜಿ ಆ್ಯಪ್‌ ಪರಿಚಯಿಸುತ್ತಿರುವುದು ಸಂತೋಷದಾಯಕ.ಪ್ರಾಥಮಿಕ ಆರೋಗ್ಯ ಕೇಂದ್ರವು 2018-19 ನೇ ಸಾಲಿನ ಕಾಯಕಲ್ಪ ಅವಾರ್ಡ್‌ ಪಡೆದಿ ಹೆಮ್ಮೆಯ ವಿಷಯ ಎಂದರು.

ಇಂದಿರಾ ತೇಲಿ, ಬೀಮಪ್ಪ ಮಾದರ,ಬಸವರಾಜ ತಲಾಬಟ್ಟಿ,ಸುಂದ್ರವ್ವ ಮಾದರ, ವೈದ್ಯಾಧಿಕಾರಿ ಡಾ. ಮಹೇಶ.ಎಸ್‌.ಪಾಟೀಲ, ಡಾ.ನಾಗರಾಜ ಜಾವೂರ,ಐ.ಎಸ್‌ ಹಿರೇಮಠ,ಕುಮಾರ ಯಡಪ್ಪನವರ,ಅಶೋಕ ಕೋಳಿವಾಡ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ