ಆ್ಯಪ್ನಗರ

ಪ್ರೊಟೆಕ್ಟಿವ್‌ ಬೂತ್‌ ದೇಣಿಗೆ

ಗದಗ: ಕೊರೊನಾ ಶಂಕಿತ ಪ್ರಕರಣಗಳ ಗಂಟಲು ದ್ರವ್ಯ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿವೈದ್ಯರ ಸುರಕ್ಷತೆಗಾಗಿ ಗದಗ ನಗರದ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಿದ ರಕ್ಷಣಾ ಕವಾಟ (ಪ್ರೊಟೆಕ್ಟಿವ್‌ ಬೂತ್‌) ವನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರಿಸಿದರು.

Vijaya Karnataka 7 Apr 2020, 5:00 am
ಗದಗ: ಕೊರೊನಾ ಶಂಕಿತ ಪ್ರಕರಣಗಳ ಗಂಟಲು ದ್ರವ್ಯ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿವೈದ್ಯರ ಸುರಕ್ಷತೆಗಾಗಿ ಗದಗ ನಗರದ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಿದ ರಕ್ಷಣಾ ಕವಾಟ (ಪ್ರೊಟೆಕ್ಟಿವ್‌ ಬೂತ್‌) ವನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರಿಸಿದರು.
Vijaya Karnataka Web donate to the protective booth
ಪ್ರೊಟೆಕ್ಟಿವ್‌ ಬೂತ್‌ ದೇಣಿಗೆ


ಗಂಟಲು ದ್ರವ್ಯ ಪರೀಕ್ಷೆಗಾಗಿ ಸಂಗ್ರಹಿಸುವ ಸಂದರ್ಭದಲ್ಲಿಈ ರಕ್ಷಣಾ ಕವಾಟ ವೈದ್ಯರಿಗೆ, ನರ್ಸಿಂಗ್‌ ಸಿಬ್ಬಂದಿಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ರಾಜ್ಯದಲ್ಲಿಪ್ರಥಮವಾಗಿ ಜಿಲ್ಲೆಯಲ್ಲಿಇದನ್ನು ಬಳಸಲಾಗುತ್ತಿದೆ. ನಗರದ ಸಂಕನೂರ ಆಸ್ಪತ್ರೆಯ ಡಾ. ಪ್ರಕಾಶ ಸಂಕನೂರ ಇದನ್ನು ಸಿದ್ದಪಡಿಸಿದ್ದಾರೆ ಎಂದು ಸಂಕನೂರ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ರಕ್ಷಣಾ ಕವಾಟದಿಂದ ವೈದ್ಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಅನುಕೂಲವಾಗಲಿದೆ ಎಂದರು.

ಜಿಪಂ ಸಿಇಒ ಡಾ.ಆನಂದ ಕೆ., ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಯತೀಶ ಎನ್‌, ಜಿಮ್ಸ ನಿರ್ದೇಶಕ ಡಾ. ಪಿ.ಎಸ್‌. ಭೂಸರೆಡ್ಡಿ, ಜಿಲ್ಲಾಸರ್ಜನ್‌ ಬಿ.ಸಿ. ಕರಿಗೌಡರ, ಜಿಮ್ಸ್‌ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥ ಡಾ.ಮಹೇಶ ಬರಗುಂಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ