ಆ್ಯಪ್ನಗರ

ಜನನ ಮರಣ ನೋಂದಣಿಗೆ ವಿಳಂಬಬೇಡ

ಗದಗ: ಜನನ ಮರಣ ಮತ್ತು ನಿರ್ಜೀವ ನೋಂದಣಿ ಕಾರ್ಯ ವೈಯಕ್ತಿಕ ಹಾಗೂ ಸಾಮಾಜಿಕ ಸ್ಥಾನಮಾನದ ಸುರಕ್ಷತೆಗೆ ಅತ್ಯಂತ ಪ್ರಮುಖವಾಗಿದ್ದು ವಿಳಂಬಕ್ಕೆ ಆಸ್ಪದೆ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.

Vijaya Karnataka 28 Dec 2019, 5:00 am
ಗದಗ: ಜನನ ಮರಣ ಮತ್ತು ನಿರ್ಜೀವ ನೋಂದಣಿ ಕಾರ್ಯ ವೈಯಕ್ತಿಕ ಹಾಗೂ ಸಾಮಾಜಿಕ ಸ್ಥಾನಮಾನದ ಸುರಕ್ಷತೆಗೆ ಅತ್ಯಂತ ಪ್ರಮುಖವಾಗಿದ್ದು ವಿಳಂಬಕ್ಕೆ ಆಸ್ಪದೆ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.
Vijaya Karnataka Web dont delay the birth and death registration
ಜನನ ಮರಣ ನೋಂದಣಿಗೆ ವಿಳಂಬಬೇಡ


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಶುಕ್ರವಾರ ಜರುಗಿದ ಜನನ ಮರಣ ಮತ್ತು ನಿರ್ಜೀವ ಜನನ ನೋಂದಣಿಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೋಂದಣಿ ಸಮಯದಲ್ಲಿಹೆಸರು ಹಾಗೂ ಇತರೆ ದಾಖಲೆಗಳನ್ನು ಗಣಕೀಕೃತ ಮಾಡುವಂತಹ ಸಂದರ್ಭದಲ್ಲಿಅತ್ಯಂತ ಜಾಗರೂಕತೆಯಿಂದ ನಮೂದಿಸಬೇಕು. ನೋಂದಣಿ ಸಮಯದಲ್ಲಿಬಳಸಲಾಗುವ ನಮೂನೆ 1 ಹಾಗೂ 2 ರನ್ನು ಭರ್ತಿ ಮಾಡಿ ನಮೂನೆ 2ನ್ನು ನಿಗದಿತ ಸಮಯದಲ್ಲಿಸಂಬಂಧಿಸಿದ ಅಧಿಕಾರಿಗಳಿಗೆ ಅಥವಾ ಕಚೇರಿಗೆ ಒದಗಿಸಬೇಕು. ಜನನ-ಮರಣ ನೋಂದಣಿ ಮಾಡುವಂತಹ ಗ್ರಾಮ ಲೆಕ್ಕಾಧಿಕಾರಿಗಳ ಹಾಗೂ ವೈದ್ಯಾಧಿಕಾರಿಗಳಿಗೆ ಡಿಜಿಟಲ್‌ ಕೀ ಮ್ಯಾಪಿಂಗ್‌ ಕಾರ್ಯವನ್ನು ಆದಷ್ಟು ಶೀಘ್ರವೇ ಜರುಗಿಸುವಂತೆ ತಿಳಿಸಿದರು. ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದಲ್ಲಿತಹಸೀಲ್ದಾರರ ಅಧ್ಯಕ್ಷತೆಯಲ್ಲಿನಿಯಮಿತವಾಗಿ ಸಭೆ ಜರುಗಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್‌.ಎನ್‌. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಸೇರಿದಂತೆ ತಹಸೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ