ಶಿರಹಟ್ಟಿ : ಇಲ್ಲಿಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿಸರಕಾರದ ವತಿಯಿಂದ ಬೆಂಬಲ ವತಿಯಿಂದ ಕಡಲೆ ಖರೀದಿ ಕೇಂದ್ರಕ್ಕೆ ಹಾಗೂ ಪಟ್ಟಣದ ಸಿಸಿಎನ್ ಸರಕಾರಿ ಪ್ರೌಢ ಶಾಲೆಯಲ್ಲಿ15.75ಲಕ್ಷ ವೆಚ್ಚದಲ್ಲಿಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ರಾಮಣ್ಣ ಲಮಾಣಿ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರೈತರ ಹಿತ ಕಾಪಾಡುವುದಕ್ಕೆ ಹಲವು ಯೋಜನೆಗಳನ್ನು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿಅನುದಾನವನ್ನು ಮೀಸಲಿರಿಸಿದೆ. ಹಂತ ಹಂತವಾಗಿ ಈ ಯೋಜನೆಗಳು ಜಾರಿಯಾಗುವುದರಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಇಂದು ಪ್ರಾರಂಭವಾಗಿರುವ ಕಡಲೆ ಖರೀದಿ ಕೇಂದ್ರದಲ್ಲಿಸರಕಾರ ಪ್ರತಿ ಕ್ವಿಂಟಲ್ಗೆ 4875ರೂ. ನಿಗದಿಪಡಿಸಿದೆ. 10 ಕ್ವಿಂಟಲ್ವರೆಗೆ ರೈತರು ಮಾರಾಟ ಮಾಡಬಹುದು. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಪಟ್ಟಣದಲ್ಲಿಸರಕಾರಿ ಪ್ರೌಢ ಶಾಲೆಯಲ್ಲಿಹೆಚ್ಚುವರಿ ಕೊಠಡಿ ನಿರ್ಮಾಣದ ಬಗ್ಗೆ ಶಾಸಕರ ಗಮನಕ್ಕೆ ತಂದು ಇದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅದಕ್ಕೆ 15.75ಲಕ್ಷ ರೂ. ಅನುದಾನ ಮಂಜೂರಾಗಿ ಇಂದಿನಿಂದ ಕೆಲಸವು ಸಹ ಪ್ರಾರಂಭವಾಗಲಿದೆ. ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಸತತವಾಗಿ 100ರಷ್ಟು ಫಲಿತಾಂಶ ಪಡೆಯುತ್ತ ಬಂದಿದೆ. ಬಹುದಿನಗಳ ಬೇಡಿಕೆ ಇದ್ದಂತಹ ಹೆಚ್ಚುವರಿ ಕೊಠಡಿ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಚಂದ್ರಕಾಂತ ನೂರಶೆಟ್ಟರ, ರಾಮಣ್ಣ ಡಂಬಳ, ಎಚ್.ಎಂ.ದೇವಗಿರಿ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಜಾನು ಲಮಾಣಿ, ಮಹೇಶ ಕಲ್ಲಪ್ಪನವರ, ವಿ.ಎಸ್.ಶೆಟವಾಜಿ, ಎನ್.ಎಫ್.ಸಜ್ಜನರ, ಮಹೇಶ ವರವಿ, ಚನ್ನವೀರಪ್ಪ ಕಲ್ಯಾಣಿ, ತಿಪ್ಪಣ್ಣ ಲಮಾಣಿ, ಎಚ್.ಎಂ.ಪಾಟೀಲ, ಅಕ್ಬರಸಾಬ ಯಾದಗಿರಿ, ಶ್ರೀನಿವಾಸ ಬಾರಬಾರ ಮುಂತಾದವರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರೈತರ ಹಿತ ಕಾಪಾಡುವುದಕ್ಕೆ ಹಲವು ಯೋಜನೆಗಳನ್ನು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿಅನುದಾನವನ್ನು ಮೀಸಲಿರಿಸಿದೆ. ಹಂತ ಹಂತವಾಗಿ ಈ ಯೋಜನೆಗಳು ಜಾರಿಯಾಗುವುದರಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಇಂದು ಪ್ರಾರಂಭವಾಗಿರುವ ಕಡಲೆ ಖರೀದಿ ಕೇಂದ್ರದಲ್ಲಿಸರಕಾರ ಪ್ರತಿ ಕ್ವಿಂಟಲ್ಗೆ 4875ರೂ. ನಿಗದಿಪಡಿಸಿದೆ. 10 ಕ್ವಿಂಟಲ್ವರೆಗೆ ರೈತರು ಮಾರಾಟ ಮಾಡಬಹುದು. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಪಟ್ಟಣದಲ್ಲಿಸರಕಾರಿ ಪ್ರೌಢ ಶಾಲೆಯಲ್ಲಿಹೆಚ್ಚುವರಿ ಕೊಠಡಿ ನಿರ್ಮಾಣದ ಬಗ್ಗೆ ಶಾಸಕರ ಗಮನಕ್ಕೆ ತಂದು ಇದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅದಕ್ಕೆ 15.75ಲಕ್ಷ ರೂ. ಅನುದಾನ ಮಂಜೂರಾಗಿ ಇಂದಿನಿಂದ ಕೆಲಸವು ಸಹ ಪ್ರಾರಂಭವಾಗಲಿದೆ. ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಸತತವಾಗಿ 100ರಷ್ಟು ಫಲಿತಾಂಶ ಪಡೆಯುತ್ತ ಬಂದಿದೆ. ಬಹುದಿನಗಳ ಬೇಡಿಕೆ ಇದ್ದಂತಹ ಹೆಚ್ಚುವರಿ ಕೊಠಡಿ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಚಂದ್ರಕಾಂತ ನೂರಶೆಟ್ಟರ, ರಾಮಣ್ಣ ಡಂಬಳ, ಎಚ್.ಎಂ.ದೇವಗಿರಿ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಜಾನು ಲಮಾಣಿ, ಮಹೇಶ ಕಲ್ಲಪ್ಪನವರ, ವಿ.ಎಸ್.ಶೆಟವಾಜಿ, ಎನ್.ಎಫ್.ಸಜ್ಜನರ, ಮಹೇಶ ವರವಿ, ಚನ್ನವೀರಪ್ಪ ಕಲ್ಯಾಣಿ, ತಿಪ್ಪಣ್ಣ ಲಮಾಣಿ, ಎಚ್.ಎಂ.ಪಾಟೀಲ, ಅಕ್ಬರಸಾಬ ಯಾದಗಿರಿ, ಶ್ರೀನಿವಾಸ ಬಾರಬಾರ ಮುಂತಾದವರು ಉಪಸ್ಥಿತರಿದ್ದರು.