ಆ್ಯಪ್ನಗರ

ರಸ್ತೆಯಲ್ಲಿ ಗುಂಡಿಗಳ ದರ್ಬಾರ್‌...!

​ರೋಣ : ಪಟ್ಟಣದ ರಸ್ತೆಗಳು ಹದಗೆಟ್ಟು ಅಕ್ಷ ರಶಃ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ.ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದು ಸವಾರರಿಗೆ ಸವಾಲಾಗಿದೆ. ತಾಲೂಕು ಆಡಳಿತ, ಪುರಸಭೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ ್ಯದಿಂದ ಪಟ್ಟಣದ ಪ್ರಮುಖ ರಸ್ತೆಗಳಿಂದ ಹಿಡಿದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಓಣಿಯ ಒಳ ರಸ್ತೆಗಳಲ್ಲೂ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ.

Vijaya Karnataka 14 Aug 2019, 5:00 am
ಯಲ್ಲಪ್ಪ ತಳವಾರ
Vijaya Karnataka Web GDG-12 RON 2
ರೋಣ ಮುಲ್ಲಾನ ಭಾವಿ ವೃತ್ತದಲ್ಲಿ ನಿರ್ಮಾಣವಾಗಿರುವ ಬೃಹತ್‌ ಗುಂಡಿಗಳು

ರೋಣ : ಪಟ್ಟಣದ ರಸ್ತೆಗಳು ಹದಗೆಟ್ಟು ಅಕ್ಷ ರಶಃ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ.ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದು ಸವಾರರಿಗೆ ಸವಾಲಾಗಿದೆ. ತಾಲೂಕು ಆಡಳಿತ, ಪುರಸಭೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ ್ಯದಿಂದ ಪಟ್ಟಣದ ಪ್ರಮುಖ ರಸ್ತೆಗಳಿಂದ ಹಿಡಿದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಓಣಿಯ ಒಳ ರಸ್ತೆಗಳಲ್ಲೂ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ.

ಈ ರಸ್ತೆಗಳಲ್ಲೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಮುಲ್ಲಾನಭಾವಿ ವೃತ್ತದಿಂದ ಹುಬ್ಬಳ್ಳಿಯ ರಸ್ತೆಯ ಸ್ಥಿತಿ ನೋಡುವಂತಿಲ್ಲ. ಇಲ್ಲಿ ಬಿದ್ದಿರುವ ದೊಡ್ಡ ಗುಂಡಿಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಸಂದರ್ಭ ಗುಂಡಿಗಳ ಆಳ ಎಷ್ಟಿವೆ ಎಂಬುದು ಗೊತ್ತಾಗುವುದಿಲ್ಲ. ಅದರೊಳಗೆ ಬೈಕ್‌ ಪಲ್ಟಿ ಹೊಡೆದು ಬಿದ್ದು ಸವಾರರು ಕೈಕಾಲು, ಹಲ್ಲು ಮುರಿದುಕೊಂಡ ಘಟನೆಗಳು ಸಾಕಷ್ಟಿವೆ.

ಯಮ ಸ್ವರೂಪಿ ಗುಂಡಿಗಳು :
ನಗರೋತ್ಥಾನ ಯೋಜನೆಯಡಿ ಏಕ ಪಥ ರಸ್ತೆಯನ್ನು ದ್ವೀಪವನ್ನಾಗಿಸುವ ಕಾಮಗಾರಿ ಎರಡು ವರ್ಷದಿಂದ ಸಾಗುತ್ತಿದೆಯಾದರೂ ಜನರಿಗೆ ಮುಖ್ಯವಾಗಿರುವ ಭಾಗದಲ್ಲಿ ಆ ಕಾಮಗಾರಿ ನಡೆಯದಿರುವುದು ದುರಂತ. ಕೆಲವೆಡೆ ರಸ್ತೆ ಮಾಡಿ 6 ತಿಂಗಳು ಆಗಿಲ್ಲ. ಹೇಗೆ ಮಾಡಿದ್ದಾರೋ ಎಂಬುದು ತಿಳಿಯುತ್ತಿಲ್ಲ. ರಸ್ತೆಯಲ್ಲಿ ಬಿದ್ದಿರುವ ತೆಗ್ಗುಗಳಿಂದ ಮಕ್ಕಳಿಗೆ, ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಪಟ್ಟಣದ ಬಹುತೇಕ ರಸ್ತೆಗಳು ಜಿಟಿ ಜಿಟಿ ಮಳೆಗೆ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಎಲ್ಲಿ ನೋಡಿದರಲ್ಲಿ ಬೃಹತ್‌ ಪ್ರಮಾಣದ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ.

ಅಧಿಕಾರಿಗಳಿಗೆ ಕಾಣುತ್ತಿಲ್ಲ :
ಹುಬ್ಬಳ್ಳಿ ರಸ್ತೆಯ ಸುಂಕದ ಅವರ ಅಂಗಡಿ ಹತ್ತಿರದ ರಸ್ತೆ ಸಂಪೂರ್ಣ ಹಾಳಾಗಿವೆ. ಲೋಕೋಪಯೋಗಿ ಇಲಾಖೆ ಎದುರೇ ಬೃಹತ್‌ ಗುಂಡಿಗಳು ನಿರ್ಮಾಣವಾಗಿವೆ. ಇತ್ತ ಸೂಡಿ ವೃತ್ತದ ರಸ್ತೆ ಬಗ್ಗೆ ಹೇಳಲು ಶಬ್ದಗಳು ಸಾಲುವುದಿಲ್ಲ. ತಹಸೀಲ್ದಾರ ಕಚೇರಿ ಅಣತಿ ದೂರದ ಮುಖ್ಯ ರಸ್ತೆಯಲ್ಲಿಯೇ ಆಳುದ್ದ ಗುಂಡಿಗಳು ಬಿದ್ದಿವೆ.ಅಲ್ಲದೇ ಸಿದ್ಧಾರೂಢ ಮಠದ ಕೂಗಳತೆಯಲ್ಲಿ ಸಾರ್ವಜನಿಕರಿಗೆ ನರಕಯಾತನೆ ನೀಡಲು ಸಿದ್ದವಾಗಿವೆ. ರಸ್ತೆಯ ತೆಗ್ಗು, ಗುಂಡಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ಬೃಹದಾಕಾರದಲ್ಲಿ ನಿರ್ಮಾಣವಾಗಿರುವ ಗುಂಡಿ ಮಳೆಯಾದರೇ ಅಂಗಡಿಕಾರರಿಗೆ,ಗ್ರಾಹಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ.

ದುರಸ್ತಿಯೂ ಇಲ್ಲ :
ಪಟ್ಟಣದ ಪ್ರಮುಖ ಬಹುತೇಕ ರಸ್ತೆಗಳಲ್ಲಿ ಬೃಹತ್‌ ಪ್ರಮಾಣದ ತಗ್ಗು ಬಿದ್ದಿವೆ. ಇವುಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ಜನರ ಆರೋಪ.

ಆರು ತಿಂಗಳಿಂದ ಇಂತಹ ಸ್ಥಿತಿಯಲ್ಲಿಯೇ ಇದ್ದರೂ ದುರಸ್ತಿಯೂ ನಡೆಯುತ್ತಿಲ್ಲ. ಅದರಲ್ಲೇ ನಿತ್ಯ ನೂರಾರು ಬಸ್‌, ಬೈಕ್‌, ಕಾರುಗಳು ಚಲಿಸುತ್ತಿವೆ. ಇಲ್ಲಿ ಹಾದು ಹೋಗುವ ಪ್ರತಿಯೊಬ್ಬರೂ ಪುರಸಭೆಗೆ ಹಾಗೂ ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕದೇ ಹೋಗುವುದಿಲ್ಲ. ಇದಲ್ಲದೇ ಇಂತಹ ಬಹುತೇಕ ಪ್ರಮುಖ ಮತ್ತು ಒಳ ರಸ್ತೆಗಳ ಸ್ಥಿತಿ ಇದಕ್ಕೆ ಹೊರತಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ