ಗದಗ: ಕೊರೊನಾ ಭೀತಿಯಿಂದ ಇಡೀ ದೇಶವೇ ಸ್ತಬ್ಧವಾಗಿದ್ದರೂ ಗದಗ -ಬೆಟಗೇರಿ ನಗರಸಭೆ ಪೌರಕಾರ್ಮಿಕರು ಎಂದಿನಂತೆ ಭಾನುವಾರ ಬೆಳಗ್ಗೆ ಸ್ವಚ್ಛತಾ ಕಾರ್ಯ ಕೈಗೊಂಡರು.
ಮಾಸ್ಕ್, ಕೈಗವಸ ಹಾಗೂ ಸ್ವಚ್ಛತಾ ಸಲಕರಣೆ ಹಿಡಿದು ಎಂದಿನಿಂತೆ ಬೀದಿಗಿಳಿದ ಪೌರ ಕಾರ್ಮಿಕರು, ರಸ್ತೆ ಕಸ ಗೂಡಿಸಿ, ಕಸದ ವಾಹನದಲ್ಲಿಹಾಕಿ ಕರ್ತವ್ಯ ಪ್ರಜ್ಞೆ ಮೆರೆದರು.
ಈ ಸಂದರ್ಭದಲ್ಲಿಮಾತನಾಡಿದ ಪೌರ ಕಾರ್ಮಿಕರು, ಸ್ವಚ್ಛತೆ ಕಾಪಾಡಿಕೊಂಡರೆ ಹೋಗ ಬರುವುದಿಲ್ಲಎನ್ನುತ್ತಿದ್ದಾರೆ. ಹೀಗಾಗಿ ಎಂದಿನಂತೆ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಜನಸಂದಣಿ ಇಲ್ಲದ ಕಾರಣ ಬೇಗ ಬೇಗ ಕೆಲಸ ಮುಗಿಸಿ ಮನೆಗೆ ಹೋಗುತ್ತೇವೆ ಎಂದು ಪೌರ ಕಾರ್ಮಿಕರು ಹೇಳಿದರು.
ಅದೇ ರೀತಿ ಪೊಲೀಸರು, ಟ್ರಾಫಿಕ್ ಪೊಲೀಸರು ಸಹ ಜನಸಂಚಾರ ಇಲ್ಲದಿದ್ದರೂ ನಿಯೋಜಿದ ಸ್ಥಳಗಳಲ್ಲಿಇದ್ದು ಕರ್ತವ್ಯ ನಿರ್ವಹಿಸಿದರು. ಪತ್ರಿಕಾ ವಿತರಕರು, ಮಾರಾಟಗಾರರು ಬೆಳಗ್ಗೆಯೇ ಪತ್ರಿಕೆ ವಿತರಣೆ ಪೂರ್ಣಗೊಳಿಸಿ ಮನೆಗೆ ತೆರಳಿದರು.
ಮಾಸ್ಕ್, ಕೈಗವಸ ಹಾಗೂ ಸ್ವಚ್ಛತಾ ಸಲಕರಣೆ ಹಿಡಿದು ಎಂದಿನಿಂತೆ ಬೀದಿಗಿಳಿದ ಪೌರ ಕಾರ್ಮಿಕರು, ರಸ್ತೆ ಕಸ ಗೂಡಿಸಿ, ಕಸದ ವಾಹನದಲ್ಲಿಹಾಕಿ ಕರ್ತವ್ಯ ಪ್ರಜ್ಞೆ ಮೆರೆದರು.
ಈ ಸಂದರ್ಭದಲ್ಲಿಮಾತನಾಡಿದ ಪೌರ ಕಾರ್ಮಿಕರು, ಸ್ವಚ್ಛತೆ ಕಾಪಾಡಿಕೊಂಡರೆ ಹೋಗ ಬರುವುದಿಲ್ಲಎನ್ನುತ್ತಿದ್ದಾರೆ. ಹೀಗಾಗಿ ಎಂದಿನಂತೆ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಜನಸಂದಣಿ ಇಲ್ಲದ ಕಾರಣ ಬೇಗ ಬೇಗ ಕೆಲಸ ಮುಗಿಸಿ ಮನೆಗೆ ಹೋಗುತ್ತೇವೆ ಎಂದು ಪೌರ ಕಾರ್ಮಿಕರು ಹೇಳಿದರು.
ಅದೇ ರೀತಿ ಪೊಲೀಸರು, ಟ್ರಾಫಿಕ್ ಪೊಲೀಸರು ಸಹ ಜನಸಂಚಾರ ಇಲ್ಲದಿದ್ದರೂ ನಿಯೋಜಿದ ಸ್ಥಳಗಳಲ್ಲಿಇದ್ದು ಕರ್ತವ್ಯ ನಿರ್ವಹಿಸಿದರು. ಪತ್ರಿಕಾ ವಿತರಕರು, ಮಾರಾಟಗಾರರು ಬೆಳಗ್ಗೆಯೇ ಪತ್ರಿಕೆ ವಿತರಣೆ ಪೂರ್ಣಗೊಳಿಸಿ ಮನೆಗೆ ತೆರಳಿದರು.