ಆ್ಯಪ್ನಗರ

ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅಡವಿಸೋಮಾಪುರ: ಗರ್ಭಿಣಿಯರಲ್ಲಿಹಿಮೋಗ್ಲೋಬಿನ್‌ ಕಡಿಮೆ ಆಗುತ್ತಿರುವುದರಿಂದ ಹೆರಿಗೆ ತೊಂದರೆ ಹೆಚ್ಚಾಗಿ ಸಿಜೇರಿಯನ್ನು ಆಗುತ್ತಿವೆ. ಪೌಷ್ಟಿಕಾಂಶಯುಕ್ತ ಆಹಾರ ಮತ್ತು ತರಕಾರಿ ಕಾಯಪಲ್ಲೆ ಸೇವಿಸದಿರುವುದರಿಂದ ಅಶಕ್ತಮಕ್ಕಳ ಜನನವಾಗುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ವಿನೋಧಾ ಹೊಂಬಳ ಹೇಳಿದರು.

Vijaya Karnataka 10 Mar 2020, 5:00 am
ಅಡವಿಸೋಮಾಪುರ: ಗರ್ಭಿಣಿಯರಲ್ಲಿಹಿಮೋಗ್ಲೋಬಿನ್‌ ಕಡಿಮೆ ಆಗುತ್ತಿರುವುದರಿಂದ ಹೆರಿಗೆ ತೊಂದರೆ ಹೆಚ್ಚಾಗಿ ಸಿಜೇರಿಯನ್ನು ಆಗುತ್ತಿವೆ. ಪೌಷ್ಟಿಕಾಂಶಯುಕ್ತ ಆಹಾರ ಮತ್ತು ತರಕಾರಿ ಕಾಯಪಲ್ಲೆ ಸೇವಿಸದಿರುವುದರಿಂದ ಅಶಕ್ತಮಕ್ಕಳ ಜನನವಾಗುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ವಿನೋಧಾ ಹೊಂಬಳ ಹೇಳಿದರು.
Vijaya Karnataka Web eat nutritious food and maintain health
ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ


ಅವರು ಇಲ್ಲಿಯ ಸಣ್ಣತಾಂಡೆಯ ಅಂಗನವಾಡಿ ಕೇಂದ್ರದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಮತ್ತು ಗರ್ಭಿಣಿಯರ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಳಕೆಯೋಡೆದ ಬೆಳೆಕಾಳು ಸೇವನೆ ಮಾಡಬೇಕು. ಮಕ್ಕಳಿಗೆ 6 ತಿಂಗಳವರೆಗೆ ತಾಯಿಯ ಎದೆ ಹಾಲನ್ನು ಕೊಡಬೇಕು.ದ್ರವರೂಪದ ಆಹಾರ ಕೊಡಬೇಕೆಂದರು.

ಸಮಾಜದಲ್ಲಿಇನ್ನೂ ಜೀವಂತ ಇರುವಂತಹ ಅನಿಷ್ಠ ಪದ್ಧತಿಗಳಾದ ಬಾಲ್ಯ ವಿವಾಹ, ಭ್ರೂಣ ಹತ್ಯೆ ಇವೆಲ್ಲವುಗಳನ್ನು ತಡೆಗಟ್ಟಿರಿ. ಗಂಡು ಮಕ್ಕಳಂತೆ ಹೆಣ್ಣುಮಕ್ಕಳಿಗೆ ಸಮಾನವಾಗಿ ಶಿಕ್ಷಣ ಕೊಡಿಸಬೇಕಾಗಿದೆ ಎಂದರು.

ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕ ಸಿದ್ದಪ್ಪ ಲಿಂಗದಾಳ ಮಾತನಾಡಿ, ಮಹಿಳೆಯರು ಮತ್ತು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದು ಹೆರಿಗೆ ಸಮಯದಲ್ಲಿಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆಂದರು. ಮಗುವಿನ ಬೆಳವಣಿಗೆ ಮತ್ತು ಸರಳ ಹೆರಿಗೆಗೆ ಪೌಷ್ಟಿಕ ಆಹಾರ ಸಮತೋಲನ ಆಹಾರ ಹಣ್ಣುಗಳನ್ನು ಸೇವಿಸಬೇಕೆಂದರು.

ಶಿವು ಲಮಾಣಿ ಅಧ್ಯಕ್ಷತೆ ವಹಿಸಿದ್ದರು.ಪ್ರವೀಣ ರಾಮಗೀರಿ, ರೇಶ್ಮಾ ಮುರಡಿ, ಸಕ್ಕೂಭಾಯಿ ಲಮಾಣಿ, ಅನಿತಾ ಲಮಾಣಿ, ಪಾರವ್ವ ಲಮಾಣಿ, ಎಫ್‌.ಎನ್‌. ಅತ್ತಿಕಟ್ಟಿ, ಆರ್‌.ಎಂ. ಮಾಡಲಗೇರಿ ,ಮಂಜುಳಾ ಆರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ