ಆ್ಯಪ್ನಗರ

ಸಂಕದಾಳದಲ್ಲಿ ಪರಿಸರ ದಿನಾಚರಣೆ

ನರಗುಂದ :ಪರಿಸರ ಮಾನವನ ನಿಕಟ ಸಂಬಂಧ ಹೊಂದಿದೆ. ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ತಡೆಗಟ್ಟುವುದರಿಂದ ಪರಿಸರ ರಕ್ಷ ಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಮತ್ತು ಪರಿಸರ ರಕ್ಷ ಣೆ ಅವರ ಜವಾಬ್ದಾರಿಯಾಗಿದೆ ಎಂದು ಜೀವ ವೈವಿಧ್ಯ ಸಂಶೋದಕ ಮಂಜುನಾಥ ನಾಯಕ ಹೇಳಿದರು.

Vijaya Karnataka 2 Jul 2018, 5:00 am
ನರಗುಂದ :ಪರಿಸರ ಮಾನವನ ನಿಕಟ ಸಂಬಂಧ ಹೊಂದಿದೆ. ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ತಡೆಗಟ್ಟುವುದರಿಂದ ಪರಿಸರ ರಕ್ಷ ಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಮತ್ತು ಪರಿಸರ ರಕ್ಷ ಣೆ ಅವರ ಜವಾಬ್ದಾರಿಯಾಗಿದೆ ಎಂದು ಜೀವ ವೈವಿಧ್ಯ ಸಂಶೋದಕ ಮಂಜುನಾಥ ನಾಯಕ ಹೇಳಿದರು.
Vijaya Karnataka Web eco day in sampradaya
ಸಂಕದಾಳದಲ್ಲಿ ಪರಿಸರ ದಿನಾಚರಣೆ


ತಾಲೂಕಿನ ಸಂಕದಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರಕಾರಿ ಪ್ರೌಢ ಶಾಲೆ ಸಂಕದಾಳ ಆಶ್ರಯದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಹಾಗೂ ವನ್ಯಜೀವಿಗಳ ಮೇಲೆ ಮತ್ತು ಮಾನವರ ಮೇಲೆ ಮೇಲಾಗುವ ದುಷ್ಪರಿಣಾಮಗಳ ತಿಳಿಸಿದರು.

ಪರಿಸರ ಮಾಲಿನ್ಯ ಮತ್ತು ಜಾಗತಿಕ ತಾಪಮಾನ ನಿಯಂತ್ರಿಸಲು ಪಂಚವಟಿ ವೃಕ್ಷ ವನ್ನು ಹೆಚ್ಚು ನೆಟ್ಟು ಬೆಳೆಸಬೇಕು ಎಂದು ಪಂಚವಟಿ ವೃಕ್ಷ ದ ಕುರಿತು ಮಾಹಿತಿ ನೀಡಿದರು.

ಮುಖ್ಯ ಶಿಕ್ಷ ಕ ಎಚ್‌.ಎಚ್‌. ರಾಯರಡ್ಡಿ ಮಾತನಾಡಿದರು. ಅತಿಥಿಗಳಾಗಿ ಎಸ್‌ಡಿಎಂಸಿ ಅಧ್ಯಕ್ಷ ರುದ್ರಪ್ಪ ಹುಂಬಿ ಮತ್ತು ಶಿಕ್ಷ ಕರು ಪಾಲ್ಗೊಂಡಿದ್ದರು. ಪರಿಸರ ದಿನಾಚರಣೆ ಅಂಗವಾಗಿ ಶಾಲೆ ಆವರಣದಲ್ಲಿ 20 ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಚಿಕ್ಕನರಗುಂದದ ಸೇವಾ ಪ್ರತಿನಿಧಿ ಅಕ್ಕಮ್ಮ ನಿರೂಪಿಸಿದರು. ಧರ್ಮಸ್ಥಳ ಕ್ಷೆಮಾಭಿವೃದ್ಧಿಯ ನರಗುಂದ, ರೋಣ ವಲಯಾಧಿಕಾರಿ ಕೃಷಿ ಅಧಿಕಾರಿ ಮಹಾಂತೇಶ ಹಿರೇಮಠ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ