ಆ್ಯಪ್ನಗರ

ಹೆಣ್ಣು ಮಗುವಿಗೆ ಶಿಕ್ಷಣ ನೀಡಿ

ರೋಣ : ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದೇ ಕೇಂದ್ರ ಸರಕಾರದ ಬೇಟಿ ಬಚಾವೊ,ಬೇಟಿ ಪಡಾವೋ ಯೋಜನೆ ಉದ್ದೇಶವಾಗಿದೆ. ಹೆಣ್ಣು ಮಗುವನ್ನು ಸಂರಕ್ಷಿಸಿ, ಪೋಷಣೆ ದೊರೆಯುವಂತೆ ಮಾಡಿ ಸುಶಿಕ್ಷಿತರನ್ನಾಗಿ ಮಾಡಿದರೆ ಲಿಂಗಾಧಾರಿತ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಗ್ರಾ.ಪಂ.ಉಪಾಧ್ಯಕ್ಷೆ ಶ್ರೀದೇವಿ ಪಾಟೀಲ ಹೇಳಿದರು

Vijaya Karnataka 17 Dec 2018, 5:00 am
ರೋಣ : ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದೇ ಕೇಂದ್ರ ಸರಕಾರದ ಬೇಟಿ ಬಚಾವೊ,ಬೇಟಿ ಪಡಾವೋ ಯೋಜನೆ ಉದ್ದೇಶವಾಗಿದೆ. ಹೆಣ್ಣು ಮಗುವನ್ನು ಸಂರಕ್ಷಿಸಿ, ಪೋಷಣೆ ದೊರೆಯುವಂತೆ ಮಾಡಿ ಸುಶಿಕ್ಷಿತರನ್ನಾಗಿ ಮಾಡಿದರೆ ಲಿಂಗಾಧಾರಿತ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಗ್ರಾ.ಪಂ.ಉಪಾಧ್ಯಕ್ಷೆ ಶ್ರೀದೇವಿ ಪಾಟೀಲ ಹೇಳಿದರು
Vijaya Karnataka Web educate a girl child
ಹೆಣ್ಣು ಮಗುವಿಗೆ ಶಿಕ್ಷಣ ನೀಡಿ


ಅವರು ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜರುಗಿದ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಎಂಬ ಜನಜಾಗೃತ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರಿಗೆ ಇಡೀ ಸಮಾಜವನ್ನು ಮುನ್ನಡೆಸುವ ಶಕ್ತಿಯಿದೆ. ಇದು ಮಹಿಳೆಯರ ಸಬಲೀಕರಣ ಮಂತ್ರ ಎಂದರು. ಗಂಡು, ಹೆಣ್ಣಿನ ಅನುಪಾತ ಅವಲೋಕಿಸಿದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಹೆಣ್ಣಿಗೆ ಹೆಣ್ಣು ಶತ್ರು ಆಗಬಾರದು. ತನಗೆ ಗಂಡು ಮಗುವೇ ಬೇಕು ಎನ್ನುವ ಆಸೆ ಬಿಡಬೇಕು. ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಇದಕ್ಕಾಗಿ ಹೆಣ್ಣು ಮಗುವಿಗೆ ಉನ್ನತ ಶಿಕ್ಷ ಣ ನೀಡುವ ಅವಶ್ಯಕತೆ ಇದೆ ಎಂದರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪನಾಧಿಕಾರಿ ಅಕ್ಕಮಹಾದೇವಿ ಕೆ.ಎಚ್‌. ಮಾತನಾಡಿ, ಗಂಡಿಗಿಂತ ಹೆಣ್ಣು ಸಂತಾನದ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. 1961 ರಲ್ಲಿ 1000 ಗಂಡುಗಳಿಗೆ 961 ಹೆಣ್ಣು ಮಕ್ಕಳಿದ್ದರು.ಆದರೆ, 2011 ರಲ್ಲಿ 1000 ಗಂಡುಗಳಿಗೆ 918 ಹೆಣ್ಣು ಮಕ್ಕಳಿದ್ದಾರೆಂಬ ಮಾಹಿತಿ ತಲ್ಲಣಗೊಳಿಸುತ್ತದೆ. ಹೀಗಾಗಿ ಗಂಡು, ಹೆಣ್ಣು ಸಂತಾನದ ಅನುಪಾತ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಇದರಿಂದ ಸಾಮಾಜಿಕ, ಕೌಟುಂಬಿಕವಾಗಿ ಆಗುತ್ತಿರುವ ತೊಂದರೆ ತಪ್ಪಿಸಲು ಪ್ರಧಾನಿ ಇಂತಹ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದರು.

ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷ ಹನಮಪ್ಪ ವಡ್ಡರ, ಎಚ್‌.ಎಸ್‌.ನಾರಾಯಣಪೂರ,ಪಿ.ಎಚ್‌.ತುಗಣಿ, ಪಿ.ವೈ.ಮಾದರ, ಎಸ್‌.ಎಸ್‌.ಗಡ್ಡಿ, ಎ.ಎಸ್‌.ನದಾಫ್‌,ಎಚ್‌.ಕೆ.ಕೊಡತಗೇರಿ, ಟಿ.ಪಿ.ಬಂಡಿವಡ್ಡರ,ನೂರಜಾನ್‌ಬಿ ಜಾಲಿಹಾಳ, ರೇಣುಕಾ ಹಟ್ಟಿಮನಿ, ಡಿ.ಎನ್‌.ಕಾರ್ಯಭಾರಿ, ಶಿಲ್ಪಾ ಶೇತ ಸನದಿ, ಸುನಿತಾ ಹೊಸಮನಿ, ನಾಗರತ್ನಾ ವಡ್ಡರ, ಮಹೇಶಗೌಡ ಪೂಜಾರ, ಅಂಗನವಾಡಿ ಮೇಲ್ವಿಚಾರಕಿ ಸುವರ್ಣಾ ಹಾನಾಪೂರ ಇತರರು ಉಪಸ್ಥಿತರಿದ್ದರು.

ಕೊತಬಾಳದ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಅರುಣೋದಯ ಕಲಾ ತಂಡದವರಿಂದ ಬೇಟಿ ಬಚಾವೊ,ಬೇಟಿ ಪಡಾವೋ ಯೋಜನೆ ಕುರಿತು ಬೀದಿ ನಾಟಕ, ಜನಪದ ಜನಜಾಗೃತಿ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ