ಆ್ಯಪ್ನಗರ

ಹಳ್ಳಿಗರಿಗೆ ಶಿಕ್ಷಣದ ಸೌಲಭ್ಯ ಸಿಗಲಿ

ನರಗುಂದ: ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಹಳ್ಳಿಯಿಂದ ಪಟ್ಟಣಕ್ಕೆ ಹೋಗುವುದನ್ನು ತಪ್ಪಿಸಲು ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಸೊರಟೂರು ಓಂಕಾರೇಶ್ವರಮಠದ ಫಕ್ಕೀರೇಶ್ವರ ಸ್ವಾಮೀಜಿ ಹೇಳಿದರು.

Vijaya Karnataka 4 Feb 2020, 5:00 am
ನರಗುಂದ: ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಹಳ್ಳಿಯಿಂದ ಪಟ್ಟಣಕ್ಕೆ ಹೋಗುವುದನ್ನು ತಪ್ಪಿಸಲು ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಸೊರಟೂರು ಓಂಕಾರೇಶ್ವರಮಠದ ಫಕ್ಕೀರೇಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web educate villagers
ಹಳ್ಳಿಗರಿಗೆ ಶಿಕ್ಷಣದ ಸೌಲಭ್ಯ ಸಿಗಲಿ


ತಾಲೂಕಿನ ಹದಲಿ ಗ್ರಾಮದ ಎಸ್‌.ಎಲ್‌.ಖಾನಪ್ಪಗೌಡ್ರ ಪ್ರಾಥಮಿಕ ಶಾಲೆಯ 10 ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿಸಾನ್ನಿಧ್ಯವಹಿಸಿ ಮಾತನಾಡಿದರು. ಗ್ರಾಮದಲ್ಲಿದಶಕಗಳಿಂದ ಉತ್ತಮ ಶಿಕ್ಷಣ ನೀಡುವಲ್ಲಿಶ್ರಮಿಸುತ್ತಿರುವ ಖಾನಪ್ಪಗೌಡ್ರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ವಕೀಲ ರಮೇಶ ನಾಯ್ಕರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿಶಿಕ್ಷಣ ನೀಡುವುದು ನಿಜವಾದ ಸೇವಾಕಾರ್ಯವಾಗಿದೆ. ಸಂಸ್ಕಾರಯುತ ಶಿಕ್ಷಣ ಮಕ್ಕಳ ಜೀವನಕ್ಕೆ ಬುನಾದಿ. ಶ್ರಮದ ಹಿಂದೆ ಪ್ರತಿಫಲವಿದೆ ಎನ್ನುವ ಹಾಗೇ ಮುಂದೊಂದು ದಿನ ಈ ಗ್ರಾಮೀಣ ಶಾಲೆ ಉನ್ನತಮಟ್ಟಕ್ಕೇರಲಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಂಗನಗೌಡ ಖಾನಪ್ಪಗೌಡ್ರ 2019-20ನೇ ಸಾಲಿನ ಆದರ್ಶ ವಿದ್ಯಾರ್ಥಿ ಸಾಧಿಕ್‌ಅಹ್ಮದ್‌ ತಹಸೀಲ್ದಾರರನ್ನು ಸನ್ಮಾನಿಸಿದರು. ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕೂಟದಲ್ಲಿವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದರು. ನಂತರದಲ್ಲಿಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಬದ್ನಿಕಾಯಿ, ಭೀಮಪ್ಪ ಹಾದಿಮನಿ, ಸಿ.ಎಂ.ಬದ್ನಿಕಾಯಿ, ಹನುಮಂತ ಪವಾರ, ಮಾರುತಿ ಯಾದವ, ತಾಪಂ ಸದಸ್ಯ ಪ್ರಭುಲಿಂಗಪ್ಪ ಯಲಿಗಾರ, ಗದಿಗೆಪ್ಪ ಕೆರಿ, ಅಶೋಕ ನವಲಗುಂದ, ಯಲ್ಲಪ್ಪಗೌಡ ಆರಟ್ಟಿ, ಮಂಜುಳಾ ಹಲಗತ್ತಿ, ಮಂಜು ಎಲಿಗಾರ, ಮುತ್ತಪ್ಪ ಸಂಕದಾಳ, ಹನುಮಂತ ಸಂಕದಾಳ, ಈರಣ್ಣ ಬ್ಯಾಹಟ್ಟಿ, ಹಸನ್‌ ತಹಶೀಲ್ದಾರ, ಚಂದ್ರಪ್ಪ ಗುದಗಿ, ಅನೀತಾ ಶಿರಕೋಳ, ಮಂಜುಳಾ ಗುದಗಿ ಇದ್ದರು. ಸರಸ್ವತಿ ಜಂತ್ಲಿಸ್ವಾಗತಿಸಿದರು, ಚೈತನ್ಯ ವಿಠ್ಠಪ್ಪನವರ, ಸಲೀಮಾ ತಹಸೀಲ್ದಾರ ನಿರೂಪಿಸಿದರು. ರೇಣುಕಾ ಮಾಳಶೆಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ