ಆ್ಯಪ್ನಗರ

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಪೂರಕ

ಗದಗ : ಪ್ರತಿಯೊಬ್ಬರೂ ಶಿಕ್ಷ ಣವು ಪಡೆಯಲು ಮೊದಲ ಆದ್ಯತೆ ನೀಡಬೇಕು. ಶಿಕ್ಷ ಣವು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ರಾಜ್ಯ ನದಾಫ ಪಿಂಜಾರದ ರಾಜ್ಯಾಧ್ಯಕ್ಷ ಎಚ್‌.ಜಲೀಲಸಾಬ ಹೇಳಿದರು.

Vijaya Karnataka 24 Jul 2019, 5:00 am
ಗದಗ : ಪ್ರತಿಯೊಬ್ಬರೂ ಶಿಕ್ಷ ಣವು ಪಡೆಯಲು ಮೊದಲ ಆದ್ಯತೆ ನೀಡಬೇಕು. ಶಿಕ್ಷ ಣವು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ರಾಜ್ಯ ನದಾಫ ಪಿಂಜಾರದ ರಾಜ್ಯಾಧ್ಯಕ್ಷ ಎಚ್‌.ಜಲೀಲಸಾಬ ಹೇಳಿದರು.
Vijaya Karnataka Web education supplement for the development of society
ಸಮಾಜದ ಅಭಿವೃದ್ಧಿಗೆ ಶಿಕ್ಷಣ ಪೂರಕ


ಇಲ್ಲಿನ ರಾಜೀವಗಾಂಧಿ ನಗರದಲ್ಲಿರುವ ಸಂಘದ ಕಟ್ಟಡದಲ್ಲಿ ರಾಜ್ಯ ನದಾಫ ಪಿಂಜಾರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಪವಿತ್ರ ಹಜ್‌ ಯಾತ್ರಿಕರಿಗೆ ಸನ್ಮಾನ ಮತ್ತು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಅಭಿವೃದ್ಧಿಗಾಗಿ ಸಾಂಘಿಕ ಪ್ರಯತ್ನ ತುಂಬಾ ಅವಶ್ಯವಾಗಿದೆ. ನದಾಫ ಪಿಂಜಾರ ಸಮುದಾಯವು ಶೈಕ್ಷ ಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದ್ದು ಆ ಸಮಾಜದ ಅಭಿವೃದ್ಧಿಗಾಗಿ ಸಾಂಘಿಕ ಪ್ರಯತ್ನ ತುಂಬಾ ಅವಶ್ಯವಾಗಿದೆ ಎಂದರು.

ಜಿಲ್ಲಾ ಸರಕಾರಿ ನೌಕರರ ಅಧ್ಯಕ್ಷ ರವಿ ಗುಂಜೇಕರ ಮಾತನಾಡಿ, ನದಾಫ ಪಿಂಜಾರ ಸಮುದಾಯದ ಪ್ರತಿಯೊಬ್ಬರು ಸರಕಾರಿ ಸವಲತ್ತು ಪಡೆದು ಶೈಕ್ಷ ಣಿಕವಾಗಿ ಮುಂದುವರಿಯಬೇಕು. ಆ ನಿಟ್ಟಿನಲ್ಲಿ ಸಮುದಾಯದ ಜಿಲ್ಲಾ ಹಾಗೂ ತಾಲೂಕು ಘಟಕಗಳು ಸಮಯಕ್ಕೆ ಸರಿಯಾಗಿ ಉತ್ತಮ ಕಾರ್ಯನಿರ್ವಹಿಸಬೇಕು ಎಂದರು.

ದಾದಾಖಲಂದರ ಮಾತನಾಡಿ, ಸಂಘದಿಂದ ವ್ಯಕ್ತಿ, ವ್ಯಕ್ತಿಯಿಂದ ಸಂಘವಾಗಬಾರದು ಅದಕ್ಕಾಗಿ ಪ್ರತಿಯೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸಿದರೆ ಮಾತ್ರ ಸಮಾಜಕ್ಕೆ ಕೊಡುಗೆ ನೀಡಬಹುದು. ಸಮಾಜದ ಇತರ ಅನೇಕ ಹಿರಿಯರ ಸಾಮಾಜಿಕ ಶ್ರಮದಿಂದ ಇಂದು ನದಾಫ ಪಿಂಜಾರ ಸಮುದಾಯವು ತನ್ನ ಅಸ್ತಿತ್ವ ಹೊಂದಿದೆ ಎಂದರು.

ಜಿಲ್ಲಾಧ್ಯಕ್ಷ ಎಸ್‌.ಕೆ.ನದಾಫ ಅಧ್ಯಕ್ಷ ತೆ ವಹಿಸಿದ್ದರು.ಎಲ್‌.ಡಿ.ಚಂದಾವರಿ, ಶಾಬುದ್ದೀನ ಟೋಪಿವಾಲೆ, ಮೌಲಾನಾ ಶಬ್ಬೀರಸಾಬ, ಇಮಾಮಸಾಬ ಬಾಗಲಕೋಟ, ಎಸ್‌.ಕೆ.ನದಾಫ, ಎ.ಎನ್‌.ನದಾಫ, ಮೌಲಾನಾ ಶಬ್ಬೀರಸಾಬ, ಎಂ.ಆರ್‌. ಅಣ್ಣೀಗೇರಿ, ಎಸ್‌.ಎ.ಟೋಪಿವಾಲೆ, ಎಂ.ಜೆ.ನದಾಫ, ಡಾ.ವೈ.ಆರ್‌.ಬೇಲೇರಿ, ಶೌಕತ್‌ ಅಲಿ ಅಣ್ಣೀಗೇರಿ, ಪಕ್ರುಸಾಬ ನದಾಫ, ಎಂ.ಬಿ.ನದಾಫ, ಅಕ್ಬರ್‌ ನದಾಫ, ಜಾವೇದ ನೂರಭಾಷಾ, ಕೆ.ಎಫ್‌.ಹುಲಕೋಟಿ ಇದ್ದರು.ಎಂ.ಬಿ.ನದಾಫ ನಿರೂಪಿಸಿದರು. ಆರ್‌.ಆಯ್‌.ನದಾಫ ಸ್ವಾಗತಿಸಿದರು. ಎಸ್‌.ಆರ್‌.ನದಾಫ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ