ಆ್ಯಪ್ನಗರ

ಸಾರ್ವತ್ರಿಕ ಚುನಾವಣೆ ಮೀರಿಸಿದ ಸರಕಾರಿ ನೌಕರರ ಚುನಾವಣೆ

ಮುಂಡರಗಿ: ರಾಜ್ಯ ಸರಕಾರಿ ನೌಕರರ 6 ಕಾರ್ಯಕಾರಿಣಿ ಸಮಿತಿ ಸದಸ್ಯರ ಸ್ಥಾನಕ್ಕೆ ಗುರುವಾರ ತುರುಸಿನಿಂದ ಮತದಾನ ನಡೆಯಿತು.

Vijaya Karnataka 14 Jun 2019, 5:00 am
ಸಿ.ಕೆ.ಗಣಪ್ಪನವರ
Vijaya Karnataka Web GDG-13MDR1 NOU ELE

ಮುಂಡರಗಿ:
ರಾಜ್ಯ ಸರಕಾರಿ ನೌಕರರ 6 ಕಾರ್ಯಕಾರಿಣಿ ಸಮಿತಿ ಸದಸ್ಯರ ಸ್ಥಾನಕ್ಕೆ ಗುರುವಾರ ತುರುಸಿನಿಂದ ಮತದಾನ ನಡೆಯಿತು.

ಒಟ್ಟು 6 ಸ್ಥಾನಗಳಲ್ಲಿ 3 ಸ್ಥಾನಕ್ಕೆ 7 ನೌಕರರು ಶಿಕ್ಷ ಣ ಇಲಾಖೆಯಿಂದ ( ಪ್ರಾಥಮಿಕ, ಹಿರಿಯ ಪ್ರಾಥಮಿಕ ವಿಭಾಗ) 2 ಸ್ಥಾನಕ್ಕೆ ಕಂದಾಯ ಇಲಾಖೆಯಿಂದ ಮೂವರು, ಭೂಮಾಪನ ಕಂದಾಯ ವ್ಯವಸ್ಥೆ ಇಲಾಖೆಯಿಂದ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು.

ರಾಜ್ಯ ಸರಕಾರಿ ನೌಕರರ ಸಂಘಕ್ಕೆ 25 ಇಲಾಖೆಗಳ ಕಾರ್ಯಕಾರಿಣಿ ಸಮಿತಿ ಸದಸ್ಯರು ಇರುತ್ತಾರೆ. ಮುಂಡರಗಿ ತಾಲೂಕಿನ ನೌಕರರ ಸಂಘಕ್ಕೆ ಈಗಾಗಲೇ ಕೃಷಿ, ಪಶು ಸಂಗೋಪನ, ಲೋಕೋಪಯೋಗಿ, ಸಣ್ಣ ನೀರಾವರಿ, ಪ್ರೌಢಶಾಲೆ, ಪದವಿ ಹಾಗೂ ಪದವಿ ಪೂರ್ವ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ, ಅಬಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ, ಖಜಾನೆ, ಎಪಿಎಂಸಿ ವಿಭಾಗ, ನ್ಯಾಯಾಂಗ, ತಾಪಂ ಹಾಗೂ ಸಿಡಿಪಿಒ ಇಲಾಖೆಯಿಂದ 19 ನೌಕರರು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 6 ಸ್ಥಾನಗಳಿಗೆ ಗುರುವಾರ ತುರುಸಿನಿಂದ ಮತದಾನ ನಡೆಯಿತು.

ಬೆಳಗ್ಗೆ 8 ಗಂಟೆಗೆ ಆರಂಭವಾದ ಚುನಾವಣೆಯಲ್ಲಿ ಮತದಾನ ಮಾಡಿಸಲು ಆಯಾ ಬಣದವರು ಟ್ರ್ಯಾಕ್ಸ್‌, ಕಾರು, ಜೀಪುಗಳಲ್ಲಿ ನೌಕರರನ್ನು ಕರೆ ತಂದು ಗಮನ ಸೆಳೆದರು. ಊಟೋಪಚಾರವೂ ನಡೆಯಿತು. ಪಶು ಸಂಗೋಪನ ಇಲಾಖೆಯಲ್ಲಿ ಮತದಾನ ವ್ಯವಸ್ಥೆ ಮಾಡಲಾಗಿತ್ತು.

ಶಿಕ್ಷ ಣ ಇಲಾಖೆಯಲ್ಲಿ ಹೆಚ್ಚು ಮತದಾರರಿದ್ದಾರೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಯ 542 ಮತದಾರರು, 31 ಕಂದಾಯ ಇಲಾಖೆ ನೌಕರರು ಮತ್ತು ಭೂಮಾಪನ ಇಲಾಖೆಯ 16 ನೌಕರರು ಇದ್ದಾರೆ.

ಪ್ರತಿ ಬಾರಿಯೂ ಶಿಕ್ಷ ಣ ಸೇರಿದಂತೆ ನಾನಾ ಸರಕಾರಿ ಇಲಾಖೆಗಳಿಂದ ಬಹುತೇಕ ಸದಸ್ಯರು ಅವಿರೋಧ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಶಿಕ್ಷ ಕರ ಸಂಘದಲ್ಲಿಯೇ ಎರಡು ಬಣಗಳಾಗಿ ಮಾರ್ಪಟ್ಟಿದ್ದು, ಕೇವಲ ಮೂರು ಸ್ಥಾನಗಳಿಗೆ 7 ಶಿಕ್ಷ ಕರು ಸ್ಪರ್ಧಿಸಿದ್ದಾರೆ. ಅದರಲ್ಲಿಯೇ ಎರಡು ಬಣಗಳು ಭಾರಿ ಪೈಪೋಟಿ ನಡೆಸಿದ್ದು ಸಾರ್ವತ್ರಿಕ ಚುನಾವಣೆ ಮೀರಿಸುವಂತೆ ನಿತ್ಯ ಮತದಾರರನ್ನು ಭೇಟಿಯಾಗಿ ಹಲವರು ಮೂಲಕ ಪ್ರಭಾವ ಬೀರಿ ತಮ್ಮತ್ತ ಒಲವು ತೋರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.

ತಾಲೂಕಾ ನೌಕರರ ಸಂಘದ ಅಧ್ಯಕ್ಷ ರಾಗಿದ್ದ ಕಂದಾಯ ನಿರೀಕ್ಷ ಕ ಎಂ.ಎ.ನದಾಫ್‌ ಕಳೆದ ಬಾರಿ ಅವಿರೋಧ ಆಯ್ಕೆಯಾಗಿದ್ದರು. ಈ ಬಾರಿ ಇದೇ ಇಲಾಖೆಯ ಇನ್ನೊಬ್ಬ ಕಂದಾಯ ನಿರೀಕ್ಷ ಕ ಎಸ್‌.ಎಸ್‌.ಬಿಚ್ಚಾಲಿ ಹಾಗೂ ಕಲಕೇರಿ ಗ್ರಾಮ ಲೆಕ್ಕಾಧಿಕಾರಿ ಟಿ.ಜಗದೀಶ ಸ್ಪರ್ಧಿಸಿದ್ದಾರೆ. ಮೂವರಲ್ಲಿ ಇಬ್ಬರು ಆಯ್ಕೆಯಾಗುತ್ತಾರೆ.

ಅವಿರೋಧ ಆಯ್ಕೆಯಾಗಿರುವ ಹಿಂದುಳಿದ ವರ್ಗಗಳ ಇಲಾಖೆಯ ಡಾ.ಬಸವರಾಜ ಬಳ್ಳಾರಿ ತಾಲೂಕಾಧ್ಯಕ್ಷ ರಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ