ಆ್ಯಪ್ನಗರ

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ

ಗದಗ : ಆದರ್ಶ ವಿದ್ಯಾರ್ಥಿ ಜೀವನಕ್ಕೆ ಸತತ ಪ್ರಯತ್ನ ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಂಡು ಮುನ್ನುಗ್ಗುವುದೇ ಜೀವನ ಎಂದು ಎಂ.ಸಿ.ಕಟ್ಟಿಮನಿ ಹೇಳಿದರು.

Vijaya Karnataka 15 Aug 2019, 5:00 am
ಗದಗ : ಆದರ್ಶ ವಿದ್ಯಾರ್ಥಿ ಜೀವನಕ್ಕೆ ಸತತ ಪ್ರಯತ್ನ ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಂಡು ಮುನ್ನುಗ್ಗುವುದೇ ಜೀವನ ಎಂದು ಎಂ.ಸಿ.ಕಟ್ಟಿಮನಿ ಹೇಳಿದರು.
Vijaya Karnataka Web embrace humanitarian value
ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ


ನಗರದ ಹುಲಕೋಟಿ ಸಹಕಾರಿ ಶಿಕ್ಷ ಣ ಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆದರ್ಶ ಗುರಿಯನಿಟ್ಟುಕೊಂಡು ಆ ಗುರಿ ತಲುಪುವಾಗ ಅನೀರಿಕ್ಷಿತವಾಗಿ ಬರುವ ಅಡೆತಡೆಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆ ಶಿಖರವನ್ನೇರಿದ ಹಲವಾರು ಸಾಧಕರ ಬದುಕನ್ನು ಅಧ್ಯಯನ ಮಾಡಬೇಕು ಎಂದರು.

ಪ್ರಿಯಾಂಕ ಬೊಮ್ಮಯ್ಯನವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ ಬಿಡಬೇಕು. ಸಕಾರಾತ್ಮಕ ಭಾವನೆ ಹಾಗೂ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.

ಕೆ.ಬಿ.ತಳಗೇರಿ ಮಾತನಾಡಿ, ಸಾಧನೆಗೆ ಬಡತನ-ಸಿರಿತನ, ದೈಹಿಕ ನೂನ್ಯತೆಗಳು ಎಂದು ಭಾದಿಸುವಸಿಲ್ಲ. ಸತತ ಪ್ರಯತ್ನ, ದೃಢ ಸಂಕಲ್ಪದ ಮುಂದೆ ಅವೆಲ್ಲವೂ ಶೂನ್ಯ ಎಂದರು.

ಬಿ.ಬಿ.ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನವು ಒಂದು ತಪಸ್ಸಿದ್ದಂತೆ. ಈ ತಪಸ್ಸಿಗೆ ಅಡೆತಟೆಯಾಗುವ ಕ್ಷ ಣಿಕ ಸುಖ ಬದಿಗೊತ್ತಿ ಜ್ಞಾನಾರ್ಜನೆ ಮಾಡಿದಾಗ ವಿದ್ಯಾರ್ಥಿಗಳು ಭಾವಿ ಭವಿಷ್ಯ ಉಜ್ವಲಗೊಳ್ಳುವುದೆಂದು ಹೇಳಿದರು.

ಪ್ರಾ. ಡಿ.ಜಿ.ಜೋಗಣ್ಣವರ ಮಾತನಾಡಿ, ಪ್ರಜಾಪ್ರಭುತ್ವ ಈ ವ್ಯವಸ್ಥೆಯಲ್ಲಿ ಸರಕಾರದ ಸೌಲಭ್ಯ ಬಳಸಿಕೊಂಡು ಸ್ವಚ್ಛಂದ ಆದರ್ಶ ಬದುಕು ರೂಪಿಸಿಕೊಂಡು ಶೋಷಣೆಯ ವಿರುದ್ದ ಹೋರಾಡಿ ಶೋಷಿತ ವರ್ಗದ ಮತ್ತು ಅತ್ಯಂತ ಕೆಳವರ್ಗದ ಏಳ್ಗೆಗೆ ಹೋರಾಡುವ ಗುಣವನ್ನು ವಿದ್ಯಾರ್ಥಿ ದಿಸೆಯಿಂದ ರೂಢಿಸಿಕೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದರು.

ಎ.ಐ.ಹಿಂಡಿ, ಜಿ.ಎಚ್‌.ಹೊಸಮನಿ, ವೈ.ಎಸ್‌.ಹುನಗುಂದ, ಜಿ.ವಿ.ಮುಳ್ಳೂರ, ಆರ್‌.ಬಿ.ಕಟ್ನಳ್ಳಿ, ಎಸ್‌.ಎಸ್‌.ಪವಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ