ಆ್ಯಪ್ನಗರ

ಪರಿಸರ ಸಂರಕ್ಷ ಣೆ ಜನಾಂದೋಲನವಾಗಲಿ: ಬಡಿಗೇರ

ಗದಗ : ಕೇವಲ ಪರಿಸರ ದಿನಾಚರಣೆಯೆಂದು ಸಸಿಗಳನ್ನು ನೆಟ್ಟು ಕಾಟಾಚಾರದ ಕಾರ್ಯಕ್ರಮ ಆಚರಿಸಿದರೆ ಪರಿಸರ ಜಾಗೃತಿ ಮೂಡಿಸಲು ಸಾಧ್ಯವಾಗುವುದಿಲ್ಲ. ಮಹಾತ್ಮಗಾಂಧಿಜಿ ಸ್ವಾತಂತ್ರ್ಯ ಹೋರಾಟಕ್ಕೆ ಜನಸಮುದಾಯವನ್ನು ಸಜ್ಜುಗೊಳಿಸಿದಂತೆ ಜೀವಸಂಕುಲಕ್ಕೆ ಮಾರಕವಾಗಿರುವ ಪರಿಸರ ವಿನಾಶ ತಡೆಯಲು ಪರಿಸರ ಸಂರಕ್ಷ ಣೆ ಜನಾಂದೋಲನವಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಡಿ.ವಿ.ಬಡಿಗೇರ ಹೇಳಿದರು.

Vijaya Karnataka 11 Jun 2019, 5:00 am
ಗದಗ : ಕೇವಲ ಪರಿಸರ ದಿನಾಚರಣೆಯೆಂದು ಸಸಿಗಳನ್ನು ನೆಟ್ಟು ಕಾಟಾಚಾರದ ಕಾರ್ಯಕ್ರಮ ಆಚರಿಸಿದರೆ ಪರಿಸರ ಜಾಗೃತಿ ಮೂಡಿಸಲು ಸಾಧ್ಯವಾಗುವುದಿಲ್ಲ. ಮಹಾತ್ಮಗಾಂಧಿಜಿ ಸ್ವಾತಂತ್ರ್ಯ ಹೋರಾಟಕ್ಕೆ ಜನಸಮುದಾಯವನ್ನು ಸಜ್ಜುಗೊಳಿಸಿದಂತೆ ಜೀವಸಂಕುಲಕ್ಕೆ ಮಾರಕವಾಗಿರುವ ಪರಿಸರ ವಿನಾಶ ತಡೆಯಲು ಪರಿಸರ ಸಂರಕ್ಷ ಣೆ ಜನಾಂದೋಲನವಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಡಿ.ವಿ.ಬಡಿಗೇರ ಹೇಳಿದರು.
Vijaya Karnataka Web GDG-10Rudragoud3
ಗದಗನ ಕಬ್ಬಿಗರ ಕೂಟದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಕವಿಗೋಷ್ಠಿಯನ್ನು ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಉದ್ಘಾಟಿಸಿದರು.


ಸ್ಥಳೀಯ ಕಬ್ಬಿಗರ ಕೂಟದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿನೆಡುವ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಜಾಗೃತಿಗೆ ಜನಸಮುದಾಯ ಸನ್ನದ್ಧಗೊಳ್ಳಲು ಮರಗಿಡ ನೆಡುವ ಮೂಲಕ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ನಿಷೇಧಿಸುವ ಮೂಲಕ ಪ್ರತಿಯೊಬ್ಬ ಪ್ರಜೆ ಪರಿಸರ ಸಂರಕ್ಷ ಣೆಗೆ ಪ್ರತಿಜ್ಞಾಬದ್ಧರಾಗಬೇಕೆಂದು ಕರೆ ನೀಡಿದರು. ಈ ನಿಟ್ಟನಲ್ಲಿ ಸಾಹಿತಿ, ಕಲಾವಿದರು ಜನಮನದಲ್ಲಿ ಅರಿವು ಮೂಡಿಸಲು ಪ್ರಯತ್ನಿಸಬೇಕೆಂದು ಕವಿಗಳಿಗೆ ಕಿವಿಮಾತು ಹೇಳಿದರು.

ನ್ಯಾಯವಾದಿ ನೋಟರಿ, ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ, ಅರಣ್ಯ ಸಂರಕ್ಷ ಣಾಧಿಕಾರಿ ಈಶ್ವರ ಅಕ್ಕಿ, ಕಬ್ಬಿಗರ ಕೂಟದ ಪ್ರಾಂಗಣದಲ್ಲಿ ಸಸಿಗಳಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಪರಿಸರವನ್ನು ನಾವು ನಿರ್ಲಕ್ಷಿಸಿದರೆ ಅದರ ಘೋರ ಅನಾಹುತ ಅನುಭವಿಸಬೇಕಾಗುತ್ತದೆ. ಗಿಡ ಮರ ನೆಟ್ಟು ಪರಿಸರ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಹೇಳಿದರು.

ಅರಣ್ಯ ಇಲಾಖೆಯ ಅಧಿಕಾರಿ ಸುರೇಶ ಅಕ್ಕಿ ಮಾತನಾಡಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಉಪಾಧ್ಯಕ್ಷ , ಸಾಹಿತಿ ಬಿ.ಎಸ್‌. ಹಿಂಡಿ ಅಧ್ಯಕ್ಷ ತೆ ವಹಿಸಿದ್ದರು.

ಪರಿಸರ ಜಾಗೃತಿ ಕವಿಗೋಷ್ಠಿಯಲ್ಲಿ ಮಂಜುನಾಥ ಡೋಣಿ, ಶ್ರೀದೇವಿ ಹಿರೇಮಠ, ಮಾರುತಿ ಬೋಸ್ಲೆ, ವಿ.ಎಂ. ಪವಾಡಿಗೌಡರ, ಡಾ. ವಾಮನಮೂರ್ತಿ ಕುಲಕರ್ಣಿ, ಎಸ್‌.ವಿ. ಕಮ್ಮಾರ, ಮಲ್ಲಿಕಾರ್ಜುನ ಪೂಜಾರ, ವಿಶಾಲಾಕ್ಷಿ ದೇಶಪಾಂಡೆ, ರೇಣುಕಾ ದೇಶಪಾಂಡೆ, ಪಿ.ಆರ್‌. ಜಂಗಮನಿ, ಅನಸೂಯಾ ಮಿಟ್ಟಿ, ಜೆ.ಎ.ಪಾಟೀಲ, ಲಾಡಮಾ ನದಾಫ್‌, ಈಶ್ವರ ಕುರಿ, ಚಾಂದಬಿ ಯರಗುಡಿ, ಅಲ್ಲಾಸಾಬ ನದಾಫ್‌, ರೇಣುಕಾ ಹೂಗಾರ, ಅಜಿತ್‌ ಘೋರ್ಪಡೆ, ಎ. ಎಸ್‌. ಗಡದರ, ಅನ್ನಾ ಅಲ್ಬುಕರ್ಕ, ಗೀತಾ ಹೂಗಾರ, ಶಿವಾನಂದ ಗಡಾದ, ರತ್ನಕ್ಕ ಪಾಟೀಲ, ನೀಲಮ್ಮ ಅಂಗಡಿ, ಕಲಾವತಿ ಹವಳದ, ಮಲ್ಲೇಶ ಹೊನಗುಡಿ, ಗುಲಾಬಸಿಂಗ್‌ ದಢೇಕರ, ಅರವಿಂದ ದೇಶಪಾಂಡೆ, ಚನ್ನಪ್ಪ ಹವಳದ ಪರಿಸರ ಜಾಗೃತಿ ಕುರಿತು ಕವನ ವಾಚಿಸಿದರು.

ಬಸವರಾಜ ಗಣಪ್ಪನವರ, ಗುರು ಕಲ್ಮಠ ಇದ್ದರು. ಕಲಾವತಿ ಹವಳದ ಸ್ವಾಗತಿಸಿದರು. ಲಾಡಮಾ ನದಾಫ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ