ಆ್ಯಪ್ನಗರ

ಮಗುವಿನ ಬೆಳವಣೆಗೆಯಲ್ಲಿ ಪರಿಸರ ಪಾತ್ರ ಮುಖ್ಯ

ಗದಗ: ಪ್ರತಿಯೊಬ್ಬ ಮಗುವಿನ ಬೆಳವಣೆಗೆಯಲ್ಲಿ ಪರಿಸರದ ಪಾತ್ರವೂ ಮುಖ್ಯವಾದುದು. ಆ ಹಿನæ್ನಲೆಯಲ್ಲಿ ಶಿಕ್ಷ ಕ ಬಳಗವು ಸಮುದಾಯದ ಸಹಕಾರದೊಂದಿಗೆ ಶಾಲೆಯಲ್ಲಿ ಮಲೆನಾಡಿನ ಸೊಬಗು ನೆನಪಿಸುವಂತೆ ಮಾಡಬೇಕು. ಶಾಲಾ ಪರಿಸರವನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ನಿರ್ಮಾಣ ಮಾಡಿರುವುದು ಪ್ರಶಂಸನೀಯ ಎಂದು ನಗರಾಭಿವೃದ್ಧಿ ಕೋಶ ಜಿಲ್ಲಾಯೋಜನಾ ನಿರ್ದೇಶಕರು ರುದ್ರೇಶ ಎಸ್‌.ಎನ್‌. ಹೇಳಿದರು.

Vijaya Karnataka 26 Jul 2019, 5:00 am
ಗದಗ: ಪ್ರತಿಯೊಬ್ಬ ಮಗುವಿನ ಬೆಳವಣೆಗೆಯಲ್ಲಿ ಪರಿಸರದ ಪಾತ್ರವೂ ಮುಖ್ಯವಾದುದು. ಆ ಹಿನæ್ನಲೆಯಲ್ಲಿ ಶಿಕ್ಷ ಕ ಬಳಗವು ಸಮುದಾಯದ ಸಹಕಾರದೊಂದಿಗೆ ಶಾಲೆಯಲ್ಲಿ ಮಲೆನಾಡಿನ ಸೊಬಗು ನೆನಪಿಸುವಂತೆ ಮಾಡಬೇಕು. ಶಾಲಾ ಪರಿಸರವನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ನಿರ್ಮಾಣ ಮಾಡಿರುವುದು ಪ್ರಶಂಸನೀಯ ಎಂದು ನಗರಾಭಿವೃದ್ಧಿ ಕೋಶ ಜಿಲ್ಲಾಯೋಜನಾ ನಿರ್ದೇಶಕರು ರುದ್ರೇಶ ಎಸ್‌.ಎನ್‌. ಹೇಳಿದರು.
Vijaya Karnataka Web GDG-25RUDRAGOUD16


ಗುರುವಾರ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.10 ರಲ್ಲಿ ಗ್ರೂಪ್‌ ನಂ.2 ಕ್ರೀಡಾಕೂಟ ಹಸಿರು ಹಬ್ಬ ಹಾಗೂ ಪ್ರತಿಭಾವಂತ ಮಕ್ಕಳ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳು ಶಿಕ್ಷ ಣದ ಕಲಿಕೆಯೊಂದಿಗೆ ಪರಿಸರ ಸ್ವಚ್ಛತೆ ಕಡೆಗೂ ಗಮನ ಹರಿಸಲು ಹಾಗೂ ಮುಂದಿನ ಪೀಳಿಗೆಯ ಉಳಿವಿಗಾಗಿ ಎಲ್ಲರೂ ಪರಿಸರ ಕಾಯ್ದ ಕೊಳ್ಳಲು ತಿಳಿಸಿದರು.

ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ ಮಾತನಾಡಿ, ಮಕ್ಕಳು ಉತ್ತಮ ಆರೋಗ್ಯ ಹೊಂದಲು ಕ್ರೀಡೆ ಅವಶ್ಯವಾಗಿದೆ. ಕ್ರೀಡೆಯ ಮೂಲಕ ಸಾಂಘಿಕ ಭಾವನೆ ಮೂಡಲು ಸಾಧ್ಯ ಎಂದರು.

ಸಸಿ ನೆಡುವುದರೊಂದಿಗೆ ಹಸಿರು ಹಬ್ಬ ಉದ್ಘಾಟಿಸಿದ ಕ್ಷೇತ್ರ ಶಿಕ್ಷ ಣಾಧಿಕಾರಿ ಎಸ್‌.ಎಸ್‌. ಕೆಳದಿಮಠ ಮಾತನಾಡಿ, ಪ್ರತಿ ವಿದ್ಯಾರ್ಥಿಯು ಶಿಕ್ಷ ಣ ಪಡೆಯುವುದರೊಂದಿಗೆ ಸಸಿಗಳನ್ನು ನೆಡುವ ಹಾಗೂ ಪೋಷಿಸುವತ್ತ ಗಮನಹರಿಸಬೇಕು. ಆ ಮೂಲಕ ಪರಿಸರ ಸಮತೋಲನ ಕಾಯ್ದಕೊಳ್ಳಲು ಕರೆ ನೀಡಿದರು.

ಶಾಲಾ ಮುಖ್ಯೊಪಾಧ್ಯಾಯ ಎಸ್‌.ಎನ್‌. ಬಳ್ಳಾರಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ವಿ.ಎಂ.ಹಿರೇಮಠ, ಗ್ರಾಮೀಣ ಘಟಕ ಅಧ್ಯಕ್ಷ ಡಿ.ಎಸ್‌. ತಳವಾರ, ಶಹರ ಘಟಕ ಅಧ್ಯಕ್ಷ ವಿ.ಜಿ.ಖೋಡೆ ಮಾತನಾಡಿದರು.

ಪೌರಾಯಕ್ತ ಮನ್ಸೂರ ಅಲಿ, ಪರಿಸರ ಅಭಿಯಂತ ಗಿರೀಶ ತಳವಾರ, ದೈಹಿಕ ಶಿಕ್ಷ ಣ ಪ್ರಭಾರಿ ಅಧಿಕಾರಿ ಅಣ್ಣಿಗೇರಿ, ಜಿಲ್ಲಾ ಎಸ್‌ಸಿ ಎಸ್‌ಟಿ ಶಿಕ್ಷ ಕರ ಸಂಘದ ಅಧ್ಯಕ್ಷ ಎಂ.ವೈ. ತೇರದಾಳ, ಎಸ್‌.ಕೆ. ಮಂಗಳಗುಡ್ಡ, ಎಚ್‌.ಜಿ. ಕಾಂಬಳೆಕರ, ಬಿ.ಕೆ.ತಳವಾರ, ಎಸ್‌.ವಿ.ಕುರಹಟ್ಟಿ, ಎಸ್‌.ಆರ್‌.ಹಲಕುರ್ಕಿ, ಕೆ.ಬಿ. ಮುಶಿಗೇರಿ, ಲಲಿತಾ ಮ್ಯಾಗೇರಿ ಇದ್ದರು.

ಎಸ್‌.ಎ .ಚಂದಪ್ಪನವರ ಪ್ರಾರ್ಥಿಸಿದರು. ಜಿ.ಎಸ್‌.ಜತ್ತಿ ನಿರೂಪಿಸಿದರು. ಜೆ .ಜಿ.ಬಸರಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ