ಸಮಾನತೆ ಲಿಂಗಾಯತದ ಮೂಲ ಆಶಯ
ಗದಗ : ವೈದಿಕ ಧರ್ಮದ ಆಚರಣೆಯಲ್ಲಿ ಲೋಪದೋಷ ಮತ್ತು ಅಸಮಾನತೆ ಇರುವುದನ್ನು ಗಮನಿಸಿದ ಬಸವಣ್ಣ ಅವೈದಿಕವಾದ ಹಾಗೂ ಸಮಾನತೆಯ ತಳಹದಿಯ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದು ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.
Vijaya Karnataka 3 Jan 2019, 5:00 am
ಗದಗ : ವೈದಿಕ ಧರ್ಮದ ಆಚರಣೆಯಲ್ಲಿ ಲೋಪದೋಷ ಮತ್ತು ಅಸಮಾನತೆ ಇರುವುದನ್ನು ಗಮನಿಸಿದ ಬಸವಣ್ಣ ಅವೈದಿಕವಾದ ಹಾಗೂ ಸಮಾನತೆಯ ತಳಹದಿಯ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದು ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ಜಗದ್ಗುರು ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆಯುವ 2413ನೇ ಶಿವಾನುಭವದಲ್ಲಿ ಉಪನ್ಯಾಸ ಹಾಗೂ ಜಾನಪದ ವೈವಿಧ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆ, ಕಾಯಕ, ದಾಸೋಹದ ತತ್ವದಡಿಯಲ್ಲಿ ಸ್ವಸ್ಥ ಸಮಾಜ ನಿರ್ಮಿಸುವ ಉದ್ದೇಶವನ್ನು 12ನೇ ಶತಮಾನದ ಬಸವಾದಿಶರಣರು ಹೊಂದಿದ್ದರು ಎಂದರು.
ಅಸಮಾನತೆ ಇದ್ದಲ್ಲಿ ಸಂಘರ್ಷ ಇರುತ್ತದೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಧರ್ಮ ಲಿಂಗಾಯತ ಧರ್ಮವಾಗಿದೆ. ಸ್ವತಂತ್ರ ಧರ್ಮದ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರಕಾರಿ ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಹೋರಾಟದ ಮೂಲಕ ಅದನ್ನು ಪಡೆಯುವ ಅನಿವಾರ್ಯತೆ ಮತ್ತು ಅಗತ್ಯ ಇದೆ ಎಂದರು.
ಲಿಂಗಾಯತ ಧರ್ಮ ಒಂದು ಚಿಂತನೆ ಕುರಿತು ಮುಳಗುಂದ ಎಸ್ಜೆಜೆಎಂ ಪದವಿಪೂರ್ವ ಕಾಲೇಜು ಅಧ್ಯಾಪಕ ಆರ್.ಆರ್.ಪಟ್ಟಣ ಮಾತನಾಡಿ, ಕನ್ನಡ ನೆಲದ ಅಪ್ಪಟ ಧರ್ಮ ಲಿಂಗಾಯತ ಧರ್ಮ. ಬ್ರಿಟಿಷ ಕಾಲದ ಎಲ್ಲ ಗೆಜೆಟ್ಗಳಲ್ಲಿ ಲಿಂಗಾಯತ ಧರ್ಮದ ಉಲ್ಲೇಖವಿದೆ. ವೈದಿಕ ಧರ್ಮದ ವಿರೋಧಿಯಾಗಿ ಬಂದ ಲಿಂಗಾಯತಧರ್ಮವನ್ನು ಕೆಲವರು ಹೈಜಾಕ್ ಮಾಡುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು.
ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸಾಧನೆ ಮತ್ತು ಜೀವನ ದರ್ಶನ ಕುರಿತ ದಿನದರ್ಶಿಕೆಯನ್ನು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮರಣೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊತಬಾಳದ ಅರುಣೋದಯ ಕಲಾತಂಡದ ಶಂಕ್ರಣ್ಣ ಸಂಕಣ್ಣವರ ಹಾಗೂ ತಂಡದವರಿಂದ ಜನಪದ ಕಾರ್ಯಕ್ರಮ ಜನಮನ ಸೆಳೆಯಿತು.
ಯೋಗ ಸಾಧಕ ಎಸ್.ಕೆ.ಮೇಲ್ಮುರಿ ಮಾತನಾಡಿ, ದೇಹ ಮತ್ತು ಮನಸ್ಸಿನ ಆರೋಗ್ಯ ಯೋಗ ಅಗತ್ಯ. ಸರಳ ಆಸನಗಳು ಮತ್ತು ಆಹಾರ ಕ್ರಮ ಅನುಸರಿಸುವುದರಿಂದ ದೇಹವನ್ನು ನಿರೋಗಿಯನ್ನಾಗಿಸಬಹುದು ಎಂದರು. ನಂತರ ಯೋಗ ಪ್ರಾತ್ಯಕ್ಷಿಕೆ ಜರುಗಿತು. ಬಸವಯೋಗ ಕೇಂದ್ರದ ಸಂಯೋಜಕ ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ಪ್ರಸ್ತುತಪಡಿಸುವರು. ಧರ್ಮಗ್ರಂಥ ಪಠಣ ಡಾ.ಸುಲೋಚನಾ ಹಳ್ಳಿಕೇರಿ, ವಚನ ಚಿಂತನವನ್ನು ಜಯಶ್ರೀ ಜಿಡ್ಡಿಮನಿ ನೆರವೇರಿಸಿದರು.
ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಅಧ್ಯಕ್ಷ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.
ಕೆ.ಎಸ್.ಪಲ್ಲೇದ, ಗಿರಿರಾಜ ಹೊಸಮನಿ, ಬಿ.ಎಂ.ಹಿರೇಮಠ, ಜಿ.ಪಿ.ಕಟ್ಟಿಮನಿ, ಎಸ್.ಯು. ಸಜ್ಜನಶೆಟ್ಟರ, ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.
ನಗರದ ಜಗದ್ಗುರು ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆಯುವ 2413ನೇ ಶಿವಾನುಭವದಲ್ಲಿ ಉಪನ್ಯಾಸ ಹಾಗೂ ಜಾನಪದ ವೈವಿಧ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾನತೆ, ಕಾಯಕ, ದಾಸೋಹದ ತತ್ವದಡಿಯಲ್ಲಿ ಸ್ವಸ್ಥ ಸಮಾಜ ನಿರ್ಮಿಸುವ ಉದ್ದೇಶವನ್ನು 12ನೇ ಶತಮಾನದ ಬಸವಾದಿಶರಣರು ಹೊಂದಿದ್ದರು ಎಂದರು.
ಅಸಮಾನತೆ ಇದ್ದಲ್ಲಿ ಸಂಘರ್ಷ ಇರುತ್ತದೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಧರ್ಮ ಲಿಂಗಾಯತ ಧರ್ಮವಾಗಿದೆ. ಸ್ವತಂತ್ರ ಧರ್ಮದ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರಕಾರಿ ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಹೋರಾಟದ ಮೂಲಕ ಅದನ್ನು ಪಡೆಯುವ ಅನಿವಾರ್ಯತೆ ಮತ್ತು ಅಗತ್ಯ ಇದೆ ಎಂದರು.
ಲಿಂಗಾಯತ ಧರ್ಮ ಒಂದು ಚಿಂತನೆ ಕುರಿತು ಮುಳಗುಂದ ಎಸ್ಜೆಜೆಎಂ ಪದವಿಪೂರ್ವ ಕಾಲೇಜು ಅಧ್ಯಾಪಕ ಆರ್.ಆರ್.ಪಟ್ಟಣ ಮಾತನಾಡಿ, ಕನ್ನಡ ನೆಲದ ಅಪ್ಪಟ ಧರ್ಮ ಲಿಂಗಾಯತ ಧರ್ಮ. ಬ್ರಿಟಿಷ ಕಾಲದ ಎಲ್ಲ ಗೆಜೆಟ್ಗಳಲ್ಲಿ ಲಿಂಗಾಯತ ಧರ್ಮದ ಉಲ್ಲೇಖವಿದೆ. ವೈದಿಕ ಧರ್ಮದ ವಿರೋಧಿಯಾಗಿ ಬಂದ ಲಿಂಗಾಯತಧರ್ಮವನ್ನು ಕೆಲವರು ಹೈಜಾಕ್ ಮಾಡುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು.
ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸಾಧನೆ ಮತ್ತು ಜೀವನ ದರ್ಶನ ಕುರಿತ ದಿನದರ್ಶಿಕೆಯನ್ನು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮರಣೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊತಬಾಳದ ಅರುಣೋದಯ ಕಲಾತಂಡದ ಶಂಕ್ರಣ್ಣ ಸಂಕಣ್ಣವರ ಹಾಗೂ ತಂಡದವರಿಂದ ಜನಪದ ಕಾರ್ಯಕ್ರಮ ಜನಮನ ಸೆಳೆಯಿತು.
ಯೋಗ ಸಾಧಕ ಎಸ್.ಕೆ.ಮೇಲ್ಮುರಿ ಮಾತನಾಡಿ, ದೇಹ ಮತ್ತು ಮನಸ್ಸಿನ ಆರೋಗ್ಯ ಯೋಗ ಅಗತ್ಯ. ಸರಳ ಆಸನಗಳು ಮತ್ತು ಆಹಾರ ಕ್ರಮ ಅನುಸರಿಸುವುದರಿಂದ ದೇಹವನ್ನು ನಿರೋಗಿಯನ್ನಾಗಿಸಬಹುದು ಎಂದರು. ನಂತರ ಯೋಗ ಪ್ರಾತ್ಯಕ್ಷಿಕೆ ಜರುಗಿತು. ಬಸವಯೋಗ ಕೇಂದ್ರದ ಸಂಯೋಜಕ ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ಪ್ರಸ್ತುತಪಡಿಸುವರು. ಧರ್ಮಗ್ರಂಥ ಪಠಣ ಡಾ.ಸುಲೋಚನಾ ಹಳ್ಳಿಕೇರಿ, ವಚನ ಚಿಂತನವನ್ನು ಜಯಶ್ರೀ ಜಿಡ್ಡಿಮನಿ ನೆರವೇರಿಸಿದರು.
ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಅಧ್ಯಕ್ಷ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.
ಕೆ.ಎಸ್.ಪಲ್ಲೇದ, ಗಿರಿರಾಜ ಹೊಸಮನಿ, ಬಿ.ಎಂ.ಹಿರೇಮಠ, ಜಿ.ಪಿ.ಕಟ್ಟಿಮನಿ, ಎಸ್.ಯು. ಸಜ್ಜನಶೆಟ್ಟರ, ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.