ಆ್ಯಪ್ನಗರ

ಸರಕಾರಿ ಶಾಲೆಗಳಲ್ಲಿ ಭಾರತ ಸೇವಾದಳ ಘಟಕ ಸ್ಥಾಪನೆ ಅವಶ್ಯ

ಮುಂಡರಗಿ : ಮಕ್ಕಳಲ್ಲಿ ದೇಶವನ್ನು ಪ್ರೀತಿಸುವ, ದೇಶಪ್ರೇಮ ಬೆಳæಸುವ ಶಿಕ್ಷ ಣವನ್ನು ಭಾರತ ಸೇವಾದಳ ನೀಡುತ್ತಿದ್ದು, ಎಲ್ಲ ಸರಕಾರಿ ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳು ಸ್ಥಾಪನೆ ಆಗಬೇಕೆಂದು ಭಾರತ ಸೇವಾದಳ ತಾಲೂಕು ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.

Vijaya Karnataka 14 Jan 2019, 5:00 am
ಮುಂಡರಗಿ : ಮಕ್ಕಳಲ್ಲಿ ದೇಶವನ್ನು ಪ್ರೀತಿಸುವ, ದೇಶಪ್ರೇಮ ಬೆಳæಸುವ ಶಿಕ್ಷ ಣವನ್ನು ಭಾರತ ಸೇವಾದಳ ನೀಡುತ್ತಿದ್ದು, ಎಲ್ಲ ಸರಕಾರಿ ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳು ಸ್ಥಾಪನೆ ಆಗಬೇಕೆಂದು ಭಾರತ ಸೇವಾದಳ ತಾಲೂಕು ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
Vijaya Karnataka Web establishment of india seva unit in government schools
ಸರಕಾರಿ ಶಾಲೆಗಳಲ್ಲಿ ಭಾರತ ಸೇವಾದಳ ಘಟಕ ಸ್ಥಾಪನೆ ಅವಶ್ಯ


ಅವರು ಗುರುವಾರ ಪಟ್ಟಣದ ಕ್ಷೇತ್ರ ಶಿಕ್ಷ ಣಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ತಾಲೂಕು ಮಕ್ಕಳ ಮೇಳದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳು ಸ್ಥಾಪನೆಯಾಗುವುದರಿಂದ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ಶಾಲೆಗಳಲ್ಲಿಯೂ ಭಾರತ ಸೇವಾದಳ ಘಟಕಗಳು ಪ್ರಾರಂಭವಾಗಿ ಉತ್ತಮ ನಡಾವಳಿ ಶಿಸ್ತು ಬೆಳೆಸುವಂತಾಗಬೇಕು. ಮುಂಬರುವ ದಿನಗಳಲ್ಲಿ ನಡೆಯುವ ಮಕ್ಕಳ ಮೇಳಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಭಾರತ ಸೇವಾದಳ ಜಿಲ್ಲಾ ಸಂಘಟಕ ಕುಮಾರಸ್ವಾಮಿ ಬಳ್ಳಾರಿ ಮಾತನಾಡಿ, ಪ್ರತಿಯೊಬ್ಬರು ರಾಷ್ಟಧ್ವಜ, ಚಿಹ್ನೆ, ರಾಷ್ಟ್ರಲಾಂಛನಗಳನ್ನು ಗೌರವಿಸಬೇಕು. ಸೇವಾಮನೋಭಾವನೆ ಎನ್ನುವುದು ಸೇವಾದಳದ ಮುಖ್ಯ ಧೇಯ್ಯೋದ್ಧೇಶವಾಗಿದ್ದು, ಶಿಕ್ಷ ಕರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷ ಣ ನೀಡುವತ್ತ ಗಮನ ನೀಡಬೇಕು ಎಂದರು.

ಭಾರತ ಸೇವಾದಳ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುದಕೇಶ ಬೀಡನಾಳ ಅಧ್ಯಕ್ಷ ತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷ ಣಾಧಿಕಾರಿ ಎನ್‌.ಎಸ್‌.ಅಂಗಡಿ ಉಪಸ್ಥಿತರಿದ್ದರು. ಎಸ್‌.ಎಸ್‌.ಭೂತರಡ್ಡಿ ಸ್ವಾಗತಿಸಿದರು. ಭಾರತ ಸೇವಾದಳ ತಾಲೂಕು ಅಧಿನಾಯಕ ವೈ.ಎಚ್‌. ಬಚನಳ್ಳಿ ನಿರೂಪಿಸಿದರು. ಎಲ್‌.ಎಚ್‌.ಯಣ್ಣಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ