ಆ್ಯಪ್ನಗರ

ಇಂದು ನಾಮಫಲಕ ಸ್ಥಾಪನೆ

ಮುಂಡರಗಿ : ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯ 12ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಜು.22 ರಂದು ಬೆಳಗ್ಗೆ 11.30 ಕ್ಕೆ ಮುಂಡರಗಿ ವೀರಶೈವ ರುದ್ರಭೂಮಿ (ಗದಗ-ಮುಂಡರಗಿ ರಾಜ್ಯ ಹೆದ್ದಾರಿ) ಬದಿಯಲ್ಲಿ ಗದಗ ಹರಪನಹಳ್ಳಿ ರೈಲ್ವೆ ಹೋರಾಟ ನಾಮಫಲಕ ಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 21 Jul 2019, 5:00 am
ಮುಂಡರಗಿ : ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯ 12ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಜು.22 ರಂದು ಬೆಳಗ್ಗೆ 11.30 ಕ್ಕೆ ಮುಂಡರಗಿ ವೀರಶೈವ ರುದ್ರಭೂಮಿ (ಗದಗ-ಮುಂಡರಗಿ ರಾಜ್ಯ ಹೆದ್ದಾರಿ) ಬದಿಯಲ್ಲಿ ಗದಗ ಹರಪನಹಳ್ಳಿ ರೈಲ್ವೆ ಹೋರಾಟ ನಾಮಫಲಕ ಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web establishment of the nominal board today
ಇಂದು ನಾಮಫಲಕ ಸ್ಥಾಪನೆ


ಕೇಂದ್ರ ಸರಕಾರವು ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕಕ್ಕೆ ರೈಲ್ವೆ ಹಂಚಿಕೆಯಲ್ಲಿ ದ್ವಿಮುಖ ನೀತಿ ಅನುಸರಿಸಿದೆ.2014-15 ರೈಲ್ವೆ ಬಜೆಟ್‌ನಲ್ಲಿ ಮಂಜೂರಾದ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗವನ್ನು 2018 ರಲ್ಲಿ ಸರ್ವೆಕಾರ್ಯ ಮುಗಿಸಿದೆ. ಆದರೆ ಹಣ ಬಿಡುಗಡೆಗೊಳಸದೆ ಈ ರೈಲ್ವೆಯೋಜನೆ ಕೈ ಬಿಟ್ಟು ನಮ್ಮ ಭಾಗದಜನತೆಗೆ ಅನ್ಯಾಯ ಮಾಡಿದ ಕೇಂದ್ರ ಸರಕಾರದ ನೀತಿ ಖಂಡಿಸಿ ಪ್ರತಿಭಟಿಸಲಾಗುವುದು. ಸಂಚಾಲಕ ಬಸವರಾಜ ನವಲಗುಂದ, ವಿ.ಎಸ್‌ಗಟ್ಟಿ, ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಕಾಗೂನೂರಮಠ, ಧುವಕುಮಾರ ಹೂಗಾರ, ಯಮನಪ್ಪ ಭಜಂತ್ರಿ, ಕೃಷ್ಣ ಬಡಿಗೇರ, ಸಂಗಪ್ಪ ಕಂಬಳಿ, ಕಾಶಿಂಸಾಬ ಕೊಕ್ಕರಗೊಂದಿ, ಮೌಲಸಾಬ್‌ ಭಗವಾನ, ಬಸಪ್ಪ ವಡ್ಡರ ಇತರರು ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ