ಆ್ಯಪ್ನಗರ

ನೋವಿನಲ್ಲೂ ಸೇವಾಭಾವ ಕಂಡವರು...!

​ನರಗುಂದ : ಮಲಪ್ರಭಾ ಮತ್ತು ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿದ ನೆರೆ ಪೀಡಿತ ಸಂತ್ರಸ್ತರಲ್ಲಿ ಅಕ್ಷ ರದಾಸೋಹ ಅಡುಗೆದಾರರು ಸಂತ್ರಸ್ತರಾಗಿದ್ದರೂ ತಮ್ಮ ನೋವು ನುಂಗಿ ಕಾಳಜಿ ಕೇಂದ್ರದಲ್ಲಿನ ಜನರಿಗೆ ಊಟ ಸಿದ್ದಪಡಿಸುವಲ್ಲಿ ನಿರತರಾಗಿರುವುದು ಮರೆಯಲಾಗದು.

Vijaya Karnataka 15 Aug 2019, 5:00 am
ಪ್ರಭು ಗುಡಾರದ
Vijaya Karnataka Web GDG-13NRD3

ನರಗುಂದ : ಮಲಪ್ರಭಾ ಮತ್ತು ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿದ ನೆರೆ ಪೀಡಿತ ಸಂತ್ರಸ್ತರಲ್ಲಿ ಅಕ್ಷ ರದಾಸೋಹ ಅಡುಗೆದಾರರು ಸಂತ್ರಸ್ತರಾಗಿದ್ದರೂ ತಮ್ಮ ನೋವು ನುಂಗಿ ಕಾಳಜಿ ಕೇಂದ್ರದಲ್ಲಿನ ಜನರಿಗೆ ಊಟ ಸಿದ್ದಪಡಿಸುವಲ್ಲಿ ನಿರತರಾಗಿರುವುದು ಮರೆಯಲಾಗದು.

ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿ ಪ್ರವಾಹಕ್ಕೆ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡು ಊರು ತೊರೆದು ಸುರಕ್ಷಿತ ಸ್ಥಳಕ್ಕೆ ಬಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡ ಸಂತ್ರಸ್ತರಿಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಹೊತ್ತು ಉಪಹಾರ, ಅನ್ನ ಸಾರು ಮಾಡಿ ಸಂತ್ರಸ್ತರ ಹಸಿವು ನೀಗಿಸಿ ನೋವು ಮರೆಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಲಖಮಾಪುರ, ವಾಸನ, ಕೊಣ್ಣೂರು, ಬೂದಿಹಾಳ, ಕುರ್ಲಗೇರಿ ಸೇರಿದಂತೆ ವಿವಿಧ ಗ್ರಾಮಗಳ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಮಾಡಿ ಬಡಿಸುವ ಮಹಿಳೆಯರು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ನೆರೆಗೆ ಜಲಾವೃತಗೊಂಡ ಅಡುಗೆದಾರರ ಕುಟುಂಬ ಮನೆ ತೊರೆದು ಸುರಕ್ಷಿತ ಸ್ಥಳದಲ್ಲಿ ವಾಸವಾಗಿ ಅತಂತ್ರ ಸ್ಥಿತಿಯಲ್ಲಿರುವ ಬಿಸಿಯೂಟ ತಯಾರಕರು ಸ್ವತಃ ಸಂತ್ರಸ್ಥರ ಫಲಾನುಭವಿಯಾಗಿದ್ದಾರೆ. ಆದರು ನಿತ್ಯ ಮೂರು ಹೊತ್ತು ಸಂತ್ರಸ್ಥರಿಗೆ ಅಡುಗೆ ಮಾಡಿ ಬಡಿಸುವುದನ್ನು ಬಿಟ್ಟಿಲ್ಲ.

14 ಕಾಳಜಿ ಕೇಂದ್ರ, 90 ಅಡುಗೆದಾರರು:
ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂತ್ರಸ್ಥರಿಗೆ 24 ಕಾಳಜಿ ಕೇಂದ್ರಗಳಲ್ಲಿ ಬಿಸಿಯೂಟ ಬಡಿಸಲು ಅಕ್ಷ ರ ದಾಸೋಹ ಅಡುಗೆದಾರರನ್ನು ನೇಮಿಸಲಾಗಿದೆ. ಇವರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದಾರೆ. ನೆರೆ ಇಳಿದಿದ್ದರಿಂದ ಕೆಲವರು ಗ್ರಾಮಕ್ಕೆ ತೆರಳಿದ್ದರಿಂದ 14 ಕಾಳಜಿ ಕೇಂದ್ರಗಳಿವೆ. 9386 ಕುಟುಂಬಗಳು, 39982 ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆಲ್ಲ ಅಕ್ಷ ರದಾಸೋಹದ 90 ಜನ ಬಿಸಿಯೂಟ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ.

100, 200 ಶಾಲಾ ಮಕ್ಕಳಿಗೆ ಊಟ ಮಾಡಿ ಬಡಿಸುವ ಅಡುಗೆದಾರರು ಹತ್ತು ಸಾವಿರ ಜನರಿಗೆ ಅಡುಗೆ ಮಾಡಿ ಬಡಿಸುವಲ್ಲಿ ನಿರತರಾಗಿದ್ದಾರೆ. ಬೆಳಗ್ಗೆ ಫಲಾವ್‌, ಇಲ್ಲವೇ ದಾನಿಗಳು ನೀಡಿದ ರವೆಯಲ್ಲಿ ಉಪ್ಪಿಟ್ಟು, ಮಧ್ಯಾಹ್ನ, ರಾತ್ರಿ ಅನ್ನ ಸಾರು ಮಾಡುತ್ತಾರೆ. ದಾನಿಗಳು ಅಕ್ಕಿ ಸೇರಿದಂತೆ ರೊಟ್ಟಿಗಳನ್ನು ಕೊಟ್ಟಿದ್ದಾರೆ. ಹಗರಿಬೊಮ್ಮನ ಹಳ್ಳಿ ನಾಗರಿಕರು 10ಸಾವಿರ ರೊಟ್ಟಿ ತರುತ್ತಿದ್ದಾರೆ. ಆದರೆ ಬೆಳಗ್ಗೆ ಸಂತ್ರಸ್ತರು ತಮ್ಮ ಗ್ರಾಮಕ್ಕೆ ಹೋಗಿ ಮನೆ ಪರಿಸ್ಥಿತಿ ನೋಡಲು, ಮನೆ ಸ್ವಚ್ಛ ಮಾಡಲು ಹೋಗಿ ಪುನಃ ಮರಳಿ ರಾತ್ರಿ ಬರುವ ಕಾರಣ ಮಧ್ಯಾಹ್ನ ಹೆಚ್ಚಿನ ಜನ ಇರುವುದಿಲ್ಲ. ಇದರಿಂದ ಇಂತಿಷ್ಟು ಜನರಿಗೆ ಅಡುಗೆ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಅಕ್ಷ ರದಾಸೋಹ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ