ಶಿರಹಟ್ಟಿ: ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದು ಲಕ್ಷ್ಮೇಶ್ವರದ ದಿವಾಣಿ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿ ಹೆಚ್.ಐ.ಯಾದವಾಡ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಪಂ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಶಿಕ್ಷ ಣ ಇಲಾಖೆ, ತಾಪಂ, ಆರಕ್ಷ ಕ ಇಲಾಖೆ, ಸಿಡಿಪಿಒ ಆಶ್ರಯದಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನದ ಕಾನೂನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ಎಲ್ಲಿಂದ ಪ್ರಾರಂಭವಾಯಿತು? ಏಕೆ ಆಯಿತು? ಇದರ ಪ್ರಯೋಜನ ಪಡೆಯುವುದು ಹೇಗೆ? ಎಂಬುದರ ಬಗ್ಗೆ ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಕಾನೂನು ತಜ್ಞರಿಂದ ಉಪನ್ಯಾಸ ನೀಡಲಾಗುತ್ತಿದೆ. 2009 ರಿಂದ ಸರಕಾರ ಫೆ.20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಸರಕಾರದ ಈ ಮಹತ್ವದ ದಿನದ ಅಂಗವಾಗಿ ನಡೆಯುವ ಕಾನೂನು ಕಾರ್ಯಕ್ರಮದಲ್ಲಿ ತಿಳಿಸುವಂತಹ ಎಲ್ಲ ವಿಚಾರಗಳನ್ನು ಸರಿಯಾಗಿ ಅರ್ಥೈಸಿಕೊಂಡು ತಾವು ತಿಳಿಯುವುದರ ಜತೆಗೆ ತಮ್ಮ ನೆರೆಹೊರೆಯವರಿಗೆ, ಸ್ನೇಹಿತರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಸಿಪಿಐ ಬಾಲಚಂದ್ರ ಲಕ್ಕಂ ಮಾತನಾಡಿದರು. ಎಂ.ಎಂ. ಹಾರೋಗೇರಿ ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಿದರು.
ತಾಪಂ ಇಒ ಆರ್.ವೈ.ಗುರಿಕಾರ, ಬಿಇಒ ವಿ.ವಿ. ಸಾಲಿಮಠ, ಎಂ.ಎನ್.ಬಾಡಿಗಿ, ಜಿ.ಎಸ್.ಘೋಂಗಡಿ, ವಿ.ಎಸ್.ಪಶುಪತಿಹಾಳ, ಬಿ.ಎಣ್. ಸಂಶಿ, ಎ.ಎ. ಬೇವಿನಗಿಡದ, ಆರ್.ಎಚ್.ಮಾಲಸೂರೆ, ಅನಿಲ ಮಾನೆ, ಆರ್.ಎಂ. ಪೂಜಾರ, ಎಚ್.ಎನ್.ಪಾಟೀಲ, ಎಂ.ಮಕಾನದಾರ, ವಿ.ಆರ್.ಅರ್ಕಸಾಲಿ, ಎಸ್.ವೈ.ಗೊಬ್ಬರಗುಂಪಿ ಮುಂತಾದವರು ಉಪಸ್ಥಿತರಿದ್ದರು.