ಆ್ಯಪ್ನಗರ

ಮಳೆಯಿಂದ ರೈತರಲ್ಲಿ ಹರ್ಷ

ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಉತ್ತಮ ಮಳೆ ಸುರಿಯಿತು. ಇದರಿಂದ ರೈತರ ಮೊಗದಲ್ಲಿ ಚೈತನ್ಯ ಮೂಡಿಸಿದೆ.

Vijaya Karnataka 17 Jul 2019, 5:00 am
ಗಜೇಂದ್ರಗಡ : ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಉತ್ತಮ ಮಳೆ ಸುರಿಯಿತು. ಇದರಿಂದ ರೈತರ ಮೊಗದಲ್ಲಿ ಚೈತನ್ಯ ಮೂಡಿಸಿದೆ.
Vijaya Karnataka Web excitement among farmers due to rain
ಮಳೆಯಿಂದ ರೈತರಲ್ಲಿ ಹರ್ಷ


ಸತತ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಗಜೇಂದ್ರಗಡ, ಸೂಡಿ, ಕೊಡಗಾನೂರ, ದ್ಯಾಮುಣಸಿ, ಹೊಸರಾಂಪುರ ಸೇರಿದಂತೆ ಇನ್ನಿತರ ಗ್ರಾಮಗಳ ಹಳ್ಳಗಳಿಗೆ ಮಳೆ ನೀರಿನಿಂದ ಜೀವಕಳೆ ಬಂದಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಹೊಲಗಳ ಒಡಲಿನಲ್ಲಿ ಮಳೆ ನೀರು ಹರಿದಾಡಿದೆ. ತಗ್ಗು ಪ್ರದೇಶ ಬದುವಿನಲ್ಲಿ ನೀರು ಸಂಗ್ರಹವಾಗಿರುವ ಚಿತ್ರಣ ಎಲ್ಲಡೆ ಕಾಣುತ್ತಿದೆ. ನಾಲ್ಕು ವರ್ಷ ಬಳಿಕ ಉತ್ತಮವಾಗಿ ಸುರಿದ ಮಳೆಯಿಂದ ಕಳೆಗುಂದಿದ ಕೃಷಿ, ವಾಣಿಜ್ಯ ವಹಿವಾಟುಗಳು ಚೇತರಿಕೆ ಕಾಣುವಂತಾಯಿತು.

ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣ, ಸುತ್ತಲಿನ ಗ್ರಾಮದಲ್ಲಿ ಸುರಿದ ಹದವಾದ ಮಳೆಯಿಂದ ರೈತ ಸಮೂಹ ಫುಲ್‌ಖುಷಿಯಲ್ಲಿದ್ದಾರೆ. ಈಗಾಗಲೆ ಬಿತ್ತನೆ ಮಾಡಿರುವ ಹೆಸರು, ಸೂರ್ಯಕಾಂತಿ, ಗೋವಿನ ಜೋಳ, ಸಜ್ಜೆ, ಹೈಬ್ರಿಡ್‌ ಜೋಳ, ಗುರಳ್ಳು, ಯಳ್ಳು, ತೊಗರಿ ಬೆಳೆ ಮಳೆ ಅವಶ್ಯವಾಗಿತ್ತು. ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೋಗೇರಿ, ಮಾಟ ರಂಗಿ, ರಾಮಾಪುರ, ಪುರ್ತ ಗೇರಿ, ಕೊಡಗಾನೂರ, ವೀರಾಪುರ, ಚಿಲ್‌ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ನಿಡಗುಂದಿ, ಸೂಡಿ, ಮತ್ತಿತರ ಗ್ರಾಮಗಳ ರೈತರು ಮತ್ತೊಂದು ಮಳೆ ಬರುವುದನ್ನು ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ