ಆ್ಯಪ್ನಗರ

ತರಾತುರಿಯಲ್ಲಿ ಅಧಿಕಾರ ಹಿಡಿದ ಇಇ!

ಗದಗ : ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾಗಿ ಶಿವಪ್ರಕಾಶ ಗುರುವಾರ ತರಾತುರಿಯಲ್ಲಿ ಅಧಿಕಾರ ಸ್ವೀಕರಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

Vijaya Karnataka 13 Jul 2019, 5:00 am
ಗದಗ : ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾಗಿ ಶಿವಪ್ರಕಾಶ ಗುರುವಾರ ತರಾತುರಿಯಲ್ಲಿ ಅಧಿಕಾರ ಸ್ವೀಕರಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
Vijaya Karnataka Web executive engineer join duty
ತರಾತುರಿಯಲ್ಲಿ ಅಧಿಕಾರ ಹಿಡಿದ ಇಇ!


ಸಧ್ಯ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಂಗರಗಿ ಅವರು, ಕಚೇರಿ ಕಾರ್ಯ ನಿಮಿತ್ತ ಶಿರಹಟ್ಟಿಗೆ ಹೋದಾಗ ಶಿವಪ್ರಕಾಶ ಅವರು ತರಾತುರಿಯಲ್ಲಿ ಕಚೇರಿಗೆ ತೆರಳಿ ಇಇ ಹುದ್ದೆ ಅಲಂಕರಿಸಿ, ಕಾರ್ಯಭಾರ ಕೈಗೆತ್ತಿಕೊಂಡಿದ್ದಾರೆ.

ಪ್ರಭಾರಿಯಾಗಿ ಕೆಲಸ ಮಾಡುತ್ತಿರುವ ಎಇಇ ಹಂಗರಗಿ ಅವರು ಕಚೇರಿ ಕಾರ್ಯ ನಿಮಿತ್ತ ಶಿರಹಟ್ಟಿಗೆ ಹೋಗಿದ್ದಾರೆ. ಅವರು ಬರುವ ವರೆಗೂ ಕಾಯದೇ, ಔಪಚಾರಿಕವಾಗಿಯಾದರೂ ಅಧಿಕಾರ ಪಡೆಯುವ ಪ್ರಕ್ರಿಯೆ ನಡೆಸದ ಶಿವಪ್ರಕಾಶ ಅಧಿಕಾರ ಪಡೆದಿದ್ದಾರೆ.

ಈ ಕುರಿತು ವಿಜಯ ಕರ್ನಾಟಕ ಜತೆ ಮಾತನಾಡಿದ ಇಇ ಶಿವಪ್ರಕಾಶ, ಬುಧವಾರವೇ ಗದಗಕ್ಕೆ ಆಗಮಿಸಿ, ಗುರುವಾರ ನಿಯಮಗಳ ಪ್ರಕಾರ ಅಧಿಕಾರ ಸ್ವೀಕರಿಸಿದ್ದೇನೆ. ಕಾರ್ಯ ನಿಮಿತ್ತ ಧಾರವಾಡಕ್ಕೆ ತೆರಳುತ್ತಿದ್ದೇನೆ. ಹಂಗರಗಿ ಅವರಿಂದ ಅಧಿಕಾರ ಪಡೆಯುವ ಪ್ರಮೇಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಮಾತನಾಡಿದ ಪ್ರಭಾರಿ ಇಇ ಹಂಗರಗಿ ಅವರು, ಕಚೇರಿ ಕಾರ್ಯ ನಿಮಿತ್ತ ಶಿರಹಟ್ಟಿಗೆ ಆಗಮಿಸಿದ್ದೇನೆ. ಇಇ ಆಗಿ ಶಿವಪ್ರಕಾಶ ಅವರು ಅಧಿಕಾರ ಸ್ವೀಕರಿಸಿದ್ದು ಗೊತ್ತಿಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ