ಆ್ಯಪ್ನಗರ

ಅನುಭವ ಮಂಟಪ ಸಾಮಾಜಿಕ ಕ್ರಾಂತಿಗೆ ವೇದಿಕೆ

ಗದಗ : ಶಿವಶರಣೆ ಗುಡ್ಡಾಪುರ ದಾನಮ್ಮ ಕೇವಲ ಒಬ್ಬ ಶರಣೆ ಅಲ್ಲ ಭಕ್ತಿಯಿಂದ ನಡೆದುಕೊಳ್ಳುವವರಿಗೆ ಸಾಕ್ಷಾತ್‌ ದೇವತೆ. ಭಕ್ತಿ, ವೈರಾಗ್ಯ, ಜ್ಞಾನ ಮತ್ತು ವೈಚಾರಿಕತೆಯ ಪ್ರತಿಬಿಂಬವಾಗಿರುವ ದಾನಮ್ಮಳಲ್ಲಿ ಶೃದ್ಧಾಭಕ್ತಿಯಿಂದ ಸಂಕಲ್ಪಗಳನ್ನು ನಿವೇದಿಸಿಕೊಂಡಲ್ಲಿ ಇಷ್ಟಾರ್ಥಗಳು ಸಿದ್ಧಿಸುವವು ಎಂದು ಸಿದ್ಧೇಶ್ವರ ಶಾಸ್ತ್ರೀಗಳು ತೆಲ್ಲೂರ ಹೇಳಿದರು.

Vijaya Karnataka 9 Jul 2019, 5:00 am
ಗದಗ : ಶಿವಶರಣೆ ಗುಡ್ಡಾಪುರ ದಾನಮ್ಮ ಕೇವಲ ಒಬ್ಬ ಶರಣೆ ಅಲ್ಲ ಭಕ್ತಿಯಿಂದ ನಡೆದುಕೊಳ್ಳುವವರಿಗೆ ಸಾಕ್ಷಾತ್‌ ದೇವತೆ. ಭಕ್ತಿ, ವೈರಾಗ್ಯ, ಜ್ಞಾನ ಮತ್ತು ವೈಚಾರಿಕತೆಯ ಪ್ರತಿಬಿಂಬವಾಗಿರುವ ದಾನಮ್ಮಳಲ್ಲಿ ಶೃದ್ಧಾಭಕ್ತಿಯಿಂದ ಸಂಕಲ್ಪಗಳನ್ನು ನಿವೇದಿಸಿಕೊಂಡಲ್ಲಿ ಇಷ್ಟಾರ್ಥಗಳು ಸಿದ್ಧಿಸುವವು ಎಂದು ಸಿದ್ಧೇಶ್ವರ ಶಾಸ್ತ್ರೀಗಳು ತೆಲ್ಲೂರ ಹೇಳಿದರು.
Vijaya Karnataka Web GDG-8RUDRAGOUD14
ಚಿಕ್ಕಹಂದಿಗೋಳದ ಹಿರೇಮಠದಲ್ಲಿ ನಡೆದ ಶಿವಶರಣೆ ಗುಡ್ಡಾಪೂರ ದಾನಮ್ಮದೇವಿ ಪುರಾಣ ಪ್ರವಚನ ಮಾಲಿಕೆಯನ್ನು ಬಸಯ್ಯಸ್ವಾಮಿ ಹಿರೇಮಠ ಉದ್ಘಾಟಿಸಿದರು.


ತಾಲೂಕಿನ ಚಿಕ್ಕಹಂದಿಗೋಳದ ಹಿರೇಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀಗುರು ಸಾಂಸ್ಕೃತಿಕ ಶಿವಾನುಭವ ಸಮಿತಿ ಏರ್ಪಡಿಸಿದ ಮಹಾ ಶಿವಶರಣೆ ಗುಡ್ಡಾಪೂರ ದಾನಮ್ಮದೇವಿ ಪುರಾಣ ಪ್ರವಚನ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರ ಸಮಕಾಲೀನಳಾಗಿದ್ದ ಶರಣೆ ಗುಡ್ಡಾಪೂರ ದಾನಮ್ಮಳಿಗೆ ಅನುಭವ ಮಂಟಪ ಸಾಮಾಜಿಕ ಕ್ರಾಂತಿ, ವೈಚಾರಿಕ ನಡೆಗೆ ಸೂಕ್ತ ವೇದಿಕೆಯಾಯಿತು. ಸಮಾಜದಲ್ಲಿ ಸಮಾನತೆ ಇಲ್ಲದೆ ಅಸಮಾನತೆ ತಾಂಡವವಾಡುತ್ತಿದ್ದ ಕಾಲದಲ್ಲಿ ದಾನಮ್ಮಳಿಗೆ ಬಹುವಾಗಿ ಸೆಳೆದಿದ್ದು ಬಸವಣ್ಣನವರ ಅನುಭವ ಮಂಟಪ. ಸ್ತ್ರೀ ಸಮಾನತೆ, ಲಿಂಗಭೇಧ ನಿಷೇಧ, ಅಹಿಂಸೆ ಮುಂತಾದ ವಿಚಾರಗಳಲ್ಲಿ ಆಗಿನ ಸಾಂಪ್ರದಾಯಿಕ ನಿಲುವುಗಳನ್ನು, ಕಟ್ಟಳೆಗಳನ್ನು ಪಕ್ಕಕ್ಕೆ ಸರಿಸಿ ಹೊಸ ಬಗೆಯ ಯೋಚನೆಗಳನ್ನು ಜಾರಿಗೆ ತರುತ್ತಿದ್ದ ಅನುಭವ ಮಂಟಪ ದಾನಮ್ಮಳಂತಹ ಅದೆಷ್ಟೊ ಶರಣರಿಗೆ ತಮ್ಮ ನಿಲುವುಗಳನ್ನು ಸಮಾಜಕ್ಕೆ ತಿಳಿ ಹೇಳಲು ಒಂದು ಸೂಕ್ತ ವೇದಿಕೆಯಾಯಿತು ಎಂದರು.

ಬಸಯ್ಯಸ್ವಾಮಿ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡಿನ ಶಿವಶರಣೆಯಲ್ಲಿಯೇ ಜಾಗೃತಿ, ವೈಚಾರಿಕ ಹಾಗೂ ಸಾಮಾಜಿಕ ಕ್ರಾಂತಿ ಮಾಡಿದ ಗುಡ್ಡಾಪೂರ ದಾನಮ್ಮ ಆದರ್ಶ ಹಾಗೂ ಶ್ರೇಷ್ಠ ಶಿವಶರಣೆ ಎಂಬ ಖ್ಯಾತಿ ಪಾತ್ರವಾಗಿದ್ದಾಳೆ ಎಂದರು.

ಮೌನೇಶಕುಮಾರ ಲಿಂಗನಬಂಡಿ,ತೋಟೇಂದ್ರ ಯಾದಗಿರಿ ಸಂಗೀತ ನೀಡಿದರು. ವಿರುಪಾಕ್ಷ ಗೌಡ್ರ, ನಿಜಲಿಂಗಪ್ಪ, ಬಸಯ್ಯಸ್ವಾಮಿಗಳು, ಸಿದ್ರಾಮಯ್ಯ, ಅಂದಾನಗೌಡ್ರ, ಸೋಮಪ್ಪ ಇದ್ದರು.ಮುತ್ತಪ್ಪ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ