ಆ್ಯಪ್ನಗರ

ಕೆರೆ ಹೂಳೆತ್ತುವ ಕಾಮಗಾರಿ ವಿಕ್ಷ ಣೆ

ಗದಗ: ರೋಣ ತಾಲೂಕಿನ ಬೆಳವಣಿಕಿ ಹಾಗೂ ಕೌಜಗೇರಿ ಗ್ರಾಮದ ಜನರ ನೀರಿನ ದಾಹ ನೀಗಿಸುವ ಕೊಮಟರ ಕೆರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ಸರಕಾರದ ಕೆರೆ ಸಂಜೀವಿನಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ವೀಕ್ಷ ಣೆ ಮಾಡಿದರು.

Vijaya Karnataka 26 Mar 2019, 5:15 pm
ಗದಗ: ರೋಣ ತಾಲೂಕಿನ ಬೆಳವಣಿಕಿ ಹಾಗೂ ಕೌಜಗೇರಿ ಗ್ರಾಮದ ಜನರ ನೀರಿನ ದಾಹ ನೀಗಿಸುವ ಕೊಮಟರ ಕೆರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ಸರಕಾರದ ಕೆರೆ ಸಂಜೀವಿನಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ವೀಕ್ಷ ಣೆ ಮಾಡಿದರು.
Vijaya Karnataka Web explore the construction of the lake
ಕೆರೆ ಹೂಳೆತ್ತುವ ಕಾಮಗಾರಿ ವಿಕ್ಷ ಣೆ


ಈ ಕೆರೆಯ ಹತ್ತಿರ ಮೊದಲು ಬಂಗ್ಲೆ ಅಧಿಕಾರಿಗಳಿಗೆ ವಾಸಿಸಲು ಮನೆ, ನಡೆದುಕೊಂಡು ಹೋಗು ಪ್ರಯಾಣಿಕರಿಗೆ ತಂಗುದಾಣ, ಕೆರೆ ಸುತ್ತಲು ಗಿಡಮರಗಳು, ಹೂವಿನ ಮರಗಳು, ಹಣ್ಣಿನ ಮರಗಳು ಇದ್ದವು. ದನಕರುಗಳಿಗೆ ಕುಡಿಯಲು ನೀರು ಮೇವಿನ ವ್ಯವಸ್ಥೆಯನ್ನು ಬೆಳವಣಿಕಿಯ ಗ್ರಾಮದ ಫತ್ತೇಪೂರ ಕುಟುಂಬದವರು ಮಾಡುತ್ತಿದ್ದರು. ಪ್ರತಿ ವರ್ಷ ಕೆರೆಗೆ ನೀರು ಬಂದರೆ ಪೂಜೆ ಮಾಡಿ ಬೆಳ್ಳಿಯ ಕಪ್ಪೆಗಳನ್ನು ಕೆರೆಯ ನೀರಿನಲ್ಲಿ ಬಿಡುತ್ತಿದ್ದರು. ದಾರಿಯ ಮಧ್ಯದಲ್ಲಿರುವ ಅವರ 20 ಎಕರೆ ಜಮೀನಿನಲ್ಲಿ ಸುಮಾರು 3 ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿ ಈ ಭಾಗದ ಜನರಿಗೆ ಮತ್ತು ಪ್ರಾಣಿಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಿದ್ದರು. ನಂತರ ಕೆರೆ ಸಂಜೀವಿನಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಲಾಗಿದೆ ಎಂದರು.

ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ರೋಣ -ನರಗುಂದ ಯೋಜನಾಧಿಕಾರಿ ವಾಸಂತಿ ಆಮಿನ, ಕೆರೆ ಸಮಿತಿ ಕಾರ್ಯದರ್ಶಿ ಸೋಮಲಿಂಗಪ್ಪ ಚರೇದ, ಪ್ರಾ.ಕೃ.ಪತ್ತಿನ ಸ.ಸಂಘದ ಅಧ್ಯಕ್ಷ ಸುಭಾಸ ಹೊಸಂಗಡಿ, ಕೆರೆ ಸಮಿತಿ ಸದಸ್ಯ ರಾಜು ಫತ್ತೇಪೂರ, ಗುರುಪ್ರಸಾದ, ವೀರಾಪೂರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ