ಆ್ಯಪ್ನಗರ

ಫೇಸ್‌ಬುಕ್‌ ಮಾಹಿತಿ ನೋಡಿ ನೆರವು

ನರಗುಂದ : ಅಪ್ಪ,ಅವ್ವನ ದುಡಿಮೆಗೆ ನೆರವಾಗಿ ಬೀದಿ ಸುತ್ತಿ ಹಣ್ಣು ಮಾರುವ ಬಾಲಕನ ಕುರಿತು ಫೇಸ್‌ಬುಕ್‌ನಲ್ಲಿ ಪ್ರಕಟವಾದ ಮಾಹಿತಿ ಗಮನಿಸಿದ ಯುವ ಮುಖಂಡ ಉಮೇಶಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿ ಬಾಲಕನ ಶಿಕ್ಷ ಣಕ್ಕೆ ಈರಣ್ಣ ಯಡಹಳ್ಳಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

Vijaya Karnataka 6 Jun 2019, 5:00 am
ನರಗುಂದ : ಅಪ್ಪ,ಅವ್ವನ ದುಡಿಮೆಗೆ ನೆರವಾಗಿ ಬೀದಿ ಸುತ್ತಿ ಹಣ್ಣು ಮಾರುವ ಬಾಲಕನ ಕುರಿತು ಫೇಸ್‌ಬುಕ್‌ನಲ್ಲಿ ಪ್ರಕಟವಾದ ಮಾಹಿತಿ ಗಮನಿಸಿದ ಯುವ ಮುಖಂಡ ಉಮೇಶಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿ ಬಾಲಕನ ಶಿಕ್ಷ ಣಕ್ಕೆ ಈರಣ್ಣ ಯಡಹಳ್ಳಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web GDG-5NRD3
ನರಗುಂದದ ಬಡ ಬಾಲಕ ಈರಣ್ಣ ಯಡಹಳ್ಳಿಗೆ ಶಿಕ್ಷ ಣದ ನೆರವು ನೀಡಲಾಯಿತು.


ಮಂಜುನಾಥ ಗುಗ್ಗರಿ ಎಂಬವರು ತಮ್ಮ ಫೇಸ್‌ಬುಕ್‌ನಲ್ಲಿ ಮೇ 1 ರಂದು ಬೈಲಹೊಂಗಲದ ಸವಟಗಿ ಗ್ರಾಮದ ಬಾಲಕ ಈರಣ್ಣ ಯಡಹಳ್ಳಿ ಕುರಿತು ಮಾಹಿತಿ ನೀಡಿದ್ದರು. ಅಪ್ಪ ಹೊಟೆಲ್‌ನಲ್ಲಿ ಅಡುಗೆ ಮಾಡುವ, ತಾಯಿ ರಸ್ತೆ ಬದಿ ಹಣ್ಣು ಮಾರಿಕೊಂಡು ಜೀವನ ನಡೆಸುವ ಬಡ ಕುಟುಂಬದ ಮಗ ತಂದೆ -ತಾಯಿಗೆ ನೆರವಾಗಿ ರಜೆಯಲ್ಲಿ ಬೀದಿಯಲ್ಲಿ ಅಲೆದು ಚಿಕ್ಕು ಹಣ್ಣುಮಾರುತ್ತಿರುವುದು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಅನೇಕರು ಬಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇಳಿವಯಸ್ಸಿನಲ್ಲಿ ತಂದೆ,ತಾಯಿಗೆ ನೆರವಾಗುತ್ತಿದ್ದ ಬಾಲಕ ಶಾಸಕರ ಮಾದರಿ ಶಾಲೆ ನಂ.1ರಲ್ಲಿ 6ನೇ ತರಗತಿಗೆ ಪ್ರವೇಶ ಪಡೆದಿದ್ದಾನೆ.

ಈ ಬಾಲಕನಿಗೆ 2ವರ್ಷಕ್ಕೆ ಆಗುವಷ್ಟು ನೊಟ್‌ಬುಕ್‌,ಬ್ಯಾಗ್‌,ಪೆನ್‌ ಸೇರಿದಂತೆ ಇತರೆ ಸಲಕರಣೆಗಳನ್ನು ಶಾಸಕರ ಪುತ್ರ ಉಮೇಶಗೌಡ ಅವರು ಬಾಲಕನ 10ನೇ ತರಗತಿವರೆಗೆ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.

ನೇರವು ನೀಡಿದ ಉಮೇಶಗೌಡ ಅವರಿಗೆ ಶಿವಾನಂದ ಮುತವಾಡ, ಮಂಜುನಾಥ ಗುಗ್ಗರಿ, ಮಹಾದೇವ ಇಡಗಲ್ಲ, ಶಿವಾನಂದ ಹಂಚಿನಾಳ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ