ಆ್ಯಪ್ನಗರ

ಸ್ಲಂ ಜನರಿಗೆ ಸೌಲಭ್ಯ ಕಲ್ಪಿಸಿ

ಗದಗ: ಬಿಜೆಪಿಯ ಸ್ಲಂ ದೌರ್ಭಾಗ್ಯ ವರದಿಯ ಹತ್ತು ಪ್ರಮುಖ ಬೇಡಿಕೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಕರೆಯ ಮೇರೆಗೆ ಜಿಲ್ಲಾಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Vijaya Karnataka 26 Oct 2019, 5:00 am
ಗದಗ: ಬಿಜೆಪಿಯ ಸ್ಲಂ ದೌರ್ಭಾಗ್ಯ ವರದಿಯ ಹತ್ತು ಪ್ರಮುಖ ಬೇಡಿಕೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಕರೆಯ ಮೇರೆಗೆ ಜಿಲ್ಲಾಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web facilitate slum people
ಸ್ಲಂ ಜನರಿಗೆ ಸೌಲಭ್ಯ ಕಲ್ಪಿಸಿ


ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿಕಳೆದ ವರ್ಷ ಫೆ.11 ರಂದು ಬಿಜೆಪಿಯು ಕಾಂಗ್ರೆಸ್‌ ಪಕ್ಷದ ಅಹಿಂದ ಅಸ್ತ್ರಕ್ಕೆ ಪ್ರತಿಯಾಗಿ ಸ್ಲಂ ವಾಸ್ತವ್ಯ ಮಾಡಿ, ರಾಜ್ಯಾದ್ಯಂತ 22 ಜಿಲ್ಲೆಯ 976 ಕೊಳಗೇರಿಗಳ 46 ಸಾವಿರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಈ ಮನೆಗಳಲ್ಲಿ16.71 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಸಮೀಕ್ಷೆಯಲ್ಲಿ4 ಲಕ್ಷಕ್ಕೂ ಹೆಚ್ಚು ಸ್ಲಂ ನಿವಾಸಿಗಳನ್ನು ಭೇಟಿ ಮಾಡಿ ಇದು ನಾಗರೀಕತೆಯಲ್ಲನರಕದ ಕತೆ! ಎಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಲೇವಡಿ ಮಾಡಿದನ್ನು ಈ ಸಂದರ್ಭದಲ್ಲಿಬಿಜೆಪಿಯ ಸಮೀಕ್ಷಾ ವರದಿ ಪುಸ್ತಕದಲ್ಲಿರಾಜ್ಯದ ಸ್ಲಂಗಳ ದುಸ್ಥಿತಿ ಬಗ್ಗೆ ಅವಲೋಕಿಸಲಾಗಿದೆ. ಈ ವರದಿ ಪ್ರಕಾರ ರಾಜ್ಯದಲ್ಲಿ2804 ಸ್ಲಂಗಳಿದ್ದು ಶೇ.40.50 ರಷ್ಟು ಜನರು ಸ್ಲಂಗಳಲ್ಲಿವಾಸಿಸುತ್ತಿದ್ದು. ಸ್ಲಂ ಜನರಿಗೆ ಭೂಮಿ, ವಸತಿ, ನೀರು, ಶೌಚಾಲಯ, ಚರಂಡಿ, ರಸ್ತೆ, ಬೀದಿದೀಪ, ಆಸ್ಪತ್ರೆ ಮತ್ತು ಶಾಲೆಗಳಿಲ್ಲಈ ವಿಷಯವನ್ನು ಮನವಿಯಲ್ಲಿಉಲ್ಲೇಖಿಸಿಲ್ಲ.

ಜಿಲ್ಲಾಸ್ಲಂ ಸಮಿತಿಯ ಅಧ್ಯಕ್ಷ ಇಮ್ತಿಯಾಜ ಮಾನ್ವಿ, ರವಿಕುಮಾರ ಬೆಳಮಕರ, ಅಶೋಕ ಕುಸಬಿ, ಇಬ್ರಾಹಿಂ ಮುಲ್ಲಾ, ಅಬುಬಕರ ಮಕಾನದಾರ, ಉಸ್ಮಾನ ಚಿತ್ತಾಪೂರ, ಮೆಹರುನಿಸಾ ಢಾಲಾಯತ, ಮೌಲಾಸಾಬ ಗಚ್ಚಿ, ಮಂಜು ಹೆಳವರ, ರಮಜಾನಸಾಬ ನದಾಫ, ಖಾಜಾಸಾಬ ಬಳ್ಳಾರಿ, ಉಮರ ನೀಲಗುಂದ, ಮುಜಮ್ಮಿಲದ ಡಂಬಳ, ನವಾಜ ಶಿರಹಟ್ಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ