ಆ್ಯಪ್ನಗರ

ಕಳೆಗುಂದುತ್ತಿರುವ ಬಸದಿ

​ರೋಣ: ಪಟ್ಟಣದ ಹೋರಪೇಟಿ ಓಣಿಯಲ್ಲಿ10 ನೇ ಶತಮಾನದ ಪಾಶ್ರ್ವನಾಥ ಜೀನ ತೀರ್ಥಂಕರ ಸುಂದರ ಬಸದಿಗೆ ಸೂಕ್ತ ರಕ್ಷಣೆಯಿಲ್ಲದ್ದರಿಂದ ಕಾಲಗರ್ಭ ಸೇರುವಂತಾಗಿದೆ. ಸರಕಾರ ಮತ್ತು ಪ್ರಾಚ್ಯಶಾಸ್ತ್ರ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂಬುದು ಜನರ ಆರೋಪ.

Vijaya Karnataka 24 Dec 2019, 5:00 am
ಯಲ್ಲಪ್ಪ ತಳವಾರ
Vijaya Karnataka Web fading basadi
ಕಳೆಗುಂದುತ್ತಿರುವ ಬಸದಿ

ರೋಣ: ಪಟ್ಟಣದ ಹೋರಪೇಟಿ ಓಣಿಯಲ್ಲಿ10 ನೇ ಶತಮಾನದ ಪಾಶ್ರ್ವನಾಥ ಜೀನ ತೀರ್ಥಂಕರ ಸುಂದರ ಬಸದಿಗೆ ಸೂಕ್ತ ರಕ್ಷಣೆಯಿಲ್ಲದ್ದರಿಂದ ಕಾಲಗರ್ಭ ಸೇರುವಂತಾಗಿದೆ. ಸರಕಾರ ಮತ್ತು ಪ್ರಾಚ್ಯಶಾಸ್ತ್ರ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂಬುದು ಜನರ ಆರೋಪ.

ಪಟ್ಟಣದಲ್ಲಿಇಲ್ಲಿನಾನಾ ಮತ ಧರ್ಮಗಳ ದೇಗುಲಗಳಿವೆ. ರಾಷ್ಟ್ರಕೂಟರ ಕಾಲದಿಂದ ಇಂದಿನವರೆಗೂ ಕಟ್ಟಲಾದ ದೇವಾಲಯಗಳನ್ನು ಇಲ್ಲಿಕಾಣಬಹುದು. ಪ್ರಾಚೀನ ದೇವಾಯಲಗಳಲ್ಲಿದ್ರೋಣಾಚಾರ್ಯ ಗುಡಿ, ಅನಂತ ಶಯನ, ಲೋಕನಾಥ, ಸಂಗಮೇಶ್ವರ, ಸೋಮಲಿಂಗೇಶ್ವರ, ಕಲ್ಲಗುಡಿ, ಮಲ್ಲಿಕಾರ್ಜುನ ದೇಗುಲ, ಪಾಶ್ರ್ವನಾಥ ಜೈನ ಬಸದಿ ಮೊದಲಾದ ದೇವಾಲಯಗಳು ಇಲ್ಲಿವೆ.

ಪ್ರಾಚೀನ ಮಂದಿರವೆಂದರೆ ಭಗವಾನ್‌ 1008 ಪಾಶ್ರ್ವನಾಥ ಜೈನ ಚೈತ್ಯಾಲಯ. ಈ ಬಸದಿಯು ಇತಿಹಾಸ ಹಿನ್ನೆಲೆ ಹೊಂದಿದ್ದು, ವಿವಿಧ ಕೆತ್ತನೆ ,ವಾಸ್ತು-ಶಿಲ್ಪದ, ಬೃಹತ್‌ ಸಭಾ ಮಂಟಪವನ್ನು ಇಲ್ಲಿಕಾಣಬಹುದು.

ಪಟ್ಟಣದಲ್ಲಿಕಾಣುವ ಈಶ್ವರ ಗುಡಿ,ಲೋಕನಾಥ ದೇವಾಲಯ,ಸೋಮಲಿಂಗೇಶ್ವರ ಗುಡಿ ಮೊದಲಾದ ಪ್ರಾಚೀನ ದೇವಾಲಯ ಹಾಗೂ ಗುಡಿ,ಗುಂಡಾರದ ಗೋಪುರಗಳು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿಆರಂಭದ ಹಂತದ ರಚನೆಗಳಾಗಿವೆ. ಪಾಶ್ರ್ವನಾಥ ಮಂದಿರದ ಮಾದರಿಯಲ್ಲಿಯೇ ಐಹೊಳೆಯಲ್ಲಿರುವ ಚರಂತಿಮಠ ಗುಂಪಿನ ಒಂದು ಜೈನ ದೇವಾಲಯ ಹಾಗೂ ಶ್ರವಣಬೆಳಗೋಳದ ಚಂದ್ರಗುಪ್ತ ಬಸದಿ ನೆನಪಿಸುತ್ತದೆ. ಉತ್ತರ ಕರ್ನಾಟಕ ದೇವಾಲಯ ನಿರ್ಮಾಣದಲ್ಲಿಪ್ರಚಲಿತವಿದ್ದ ಮದ್ಯಕಾಲೀನ ವಾಸ್ತು ಶೈಲಿಯ ಮಾದರಿಯಲ್ಲಿಬಸದಿ ರೂಪಿತವಾಗಿದೆ.

ಬಸದಿಯ ವೈಶಿಷ್ಟ್ಯ:
ಗರ್ಭಗುಡಿಯ ಎರಡೂ ಬದಿಯಲ್ಲಿ2 ಸಣ್ಣ ಗುಹೆಗಳಿವೆ.ಗರ್ಭಗುಡಿಯಲ್ಲಿಪಾಶ್ರ್ವನಾಥರ ಮೂರ್ತಿಯಿದೆ. ಐದು ದ್ವಾರ ಶಾಖೆಗಳು, ಲಲಾಟದಲ್ಲಿಪದ್ಮಾಸನದಲ್ಲಿಜೈನರ ಶಿಲ್ಪವಿದೆ. ನವರಂಗದ ನಾಲ್ಕು ಶಾಲಾ ಸ್ತಂಭಗಳಲ್ಲಿಆಲದೆಲೆಯ ಆಕಾರದ ಕೆತ್ತನೆ ಕಾಣಬಹುದು. ಕ್ಷೇತ್ರಪಾಲನ ಮೂರ್ತಿ,ಪದ್ಮಾವತಿ ದೇವಿ ಮೂರ್ತಿ, ಹೊರಗೋಡೆಯಲ್ಲಿ17 ಕುಡ್ಯಸ್ತಂಭಗಳು, ಮಕರ ಮತ್ತು ಮಯೂರ ತೋರಣಗಳಿವೆ. ಇಂತದೆ ತೋರಣವನ್ನು ಎಲ್ಲೋರದ (ವೆರೋಳ) ಕೈಲಾಸ ದೇವಾಯಲದಲ್ಲಿಕಾಣಬಹುದು.

ರೋಣ ತಾಲೂಕಿನಲ್ಲಿಅನೇಕ ಐತಿಹಾಸಿಕ ದೇವಾಲಯಗಳಿವೆ.ಸರಕಾರ ಮತ್ತು ಪ್ರಾಚ್ಯಶಾಸ್ತ್ರ ಇಲಾಖೆ ಇಂತವುಗಳನ್ನು ಗುರುತಿಸಿ,ರಕ್ಷಿಸಲು ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಮೂರ್ತಿಯಲ್ಲಿನೀರಿನ ಜರಿ :
ಈ ಬಸದಿಯ ಗರ್ಭಗೃಹದಲ್ಲಿರುವ ಪಾಶ್ರ್ವನಾಥರ ಬಿಂಬ(ಮೂರ್ತಿ)ದ ಬಲಭಾಗದ ಶಿರದಿಂದ ಅಂದಾಜು 2 ಸೆ.ಮೀ ಅಗಲದ ನೀರಿನ ಜರಿ ಕೆಳಕ್ಕೆ ಬಲಗಾಲಿನ ಹೆಬ್ಬೆರಳಿನವರೆಗೆ ಜಿನುಗುತ್ತಿತ್ತಂತೆ. ಅಲ್ಲದೆ ಒಣ ಬಟ್ಟೆಯಿಂದ ಒರೆಸಿದರೆ ಅದು ಮತ್ತೆ ನೀರು ಜಿನುಗುತ್ತಿತ್ತಂತೆ. ಅದರಂತೆ ಎಡಗಡೆ ನಡುನೆತ್ತಿ ಮತ್ತು ಶಿರದ ಮಧ್ಯದಿಂದಲೂ ನೀರಿನ ಜರಿ ಬರುವಂತಹ ಅನುಭವವಾಗುತ್ತಿದೆ. ಇಂತಹ ದಿವ್ಯತ್ವದ ಶಕ್ತಿ ಹೊಂದಿದ ಐತಿಹಾಸಿಕ ಈ ಬಸದಿಯನ್ನು ಹಾಳಾಗದಂತೆ ರಕ್ಷಿಸಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ