ಆ್ಯಪ್ನಗರ

ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ಡಂಬಳ: ಸಾಲಬಾಧೆ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಮೀಪದ ಹೈತಾಪುರ ಗ್ರಾಮದಲ್ಲಿಗುರುವಾರ ರಾತ್ರಿ ಸಂಭವಿಸಿದೆ.

Vijaya Karnataka 14 Sep 2019, 5:00 am
ಡಂಬಳ: ಸಾಲಬಾಧೆ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಮೀಪದ ಹೈತಾಪುರ ಗ್ರಾಮದಲ್ಲಿಗುರುವಾರ ರಾತ್ರಿ ಸಂಭವಿಸಿದೆ.
Vijaya Karnataka Web farmer commits suicide by consuming pesticides
ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ


ಹೈತಾಪುರದ ಬಾಳನಗೌಡ ಮಹಾದೇವಗೌಡ ಪಾಟೀಲ(63) ಆತ್ಮಹತ್ಯೆಗೆ ಶರಣಾದ ರೈತ. ಬಾಳನಗೌಡ ಹೈತಾಪುರ-ಮೇವುಂಡಿ ಹದ್ದಿನಲ್ಲಿ8ಎಕರೆ ಜಮೀನು ಮತ್ತು ಸವದತ್ತಿ ತಾಲೂಕಿನ ಹಂಚಿನಾಳದಲ್ಲಿ20ಎಕರೆ ಹೆಣ್ಣಾಸ್ತಿಯ ಜಮೀನು ಹೊಂದಿದ್ದರು. ಬಾಳನಗೌಡ ಮೇವುಂಡಿ ಕೆವಿಜಿ ಬ್ಯಾಂಕಿನಲ್ಲಿ3ಲಕ್ಷ ರೂ.ಸಾಲ ಮತ್ತು ಗದಗ ಎಸ್‌ಬಿಐ ಬ್ಯಾಂಕಿನಲ್ಲಿಸುಮಾರು 13ಲಕ್ಷ ರೂ. ಟ್ರಾತ್ರ್ಯಕ್ಟರ್‌ ಸಾಲ ಪಡೆದಿದ್ದರು. ಐದಾರು ವರ್ಷಗಳಿಂದ ಸರಿಯಾಗಿ ಮಳೆ ಬೆಳೆ ಇಲ್ಲದ ಕಾರಣ ಸಾಲ ಮರುಪಾವತಿಸಲಾಗದೆ ಮನನೊಂದ ಗುರುವಾರ ರಾತ್ರಿ ಜಮೀನಿನಲ್ಲಿಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷ ಸೇವಿಸಿದ್ದನ್ನು ಗಮನಿಸಿದ ಕುಟುಂಬಸ್ಥರು ಬಾಳನಗೌಡ ಅವರನ್ನು ಗದಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಮುಂಡರಗಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ