ಆ್ಯಪ್ನಗರ

ರೈತ ಹುತಾತ್ಮ ದಿನಾಚರಣೆ: ಬಿಜೆಪಿಯಿಂದ ಶ್ರದ್ಧಾಂಜಲಿ

ನರಗುಂದ : ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಸುದೀರ್ಘ ಹೋರಾಟದ ನಡುವೆ ನ್ಯಾಯಾಧೀಕರಣ ತೀರ್ಪು ನೀಡಿದ ನಂತರ ಕೇಂದ್ರ ಸರಕಾರ ಗಜೆಟ್‌ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ, ಆದರೆ ರಾಜ್ಯ ಸರಕಾರ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ದೂರಿದರು.

Vijaya Karnataka 22 Jul 2019, 5:00 am
ನರಗುಂದ : ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಸುದೀರ್ಘ ಹೋರಾಟದ ನಡುವೆ ನ್ಯಾಯಾಧೀಕರಣ ತೀರ್ಪು ನೀಡಿದ ನಂತರ ಕೇಂದ್ರ ಸರಕಾರ ಗಜೆಟ್‌ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ, ಆದರೆ ರಾಜ್ಯ ಸರಕಾರ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ದೂರಿದರು.
Vijaya Karnataka Web farmer martyrs day shraddhanjali from bjp
ರೈತ ಹುತಾತ್ಮ ದಿನಾಚರಣೆ: ಬಿಜೆಪಿಯಿಂದ ಶ್ರದ್ಧಾಂಜಲಿ


39ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ನ್ಯಾಯಾಧೀಕರಣ ಆದೇಶದ ನಂತರ ಗೆಜೆಟ್‌ ಹೊರಡಿಸುವ ನಿಟ್ಟಿನಲ್ಲಿ ಸಂಸದರು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ ಅವರು ಪ್ರಯತ್ನ ನಡೆಸಿದ್ದಾರೆ ಎಂದರು.

ಪುರಸಭೆ ಮಾಜಿ ಸದಸ್ಯ ವಾಸು ಜೋಗಣ್ಣವರ ಮಾತನಾಡಿ, ಕರ ರದ್ದತಿಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ರೈತರು ಗೋಲಿಬಾರಿಗೆ ಪ್ರಾಣ ಕಳೆದುಕೊಂಡರು. ಹಲವರು ಜೈಲುವಾಸ ಅನುಭವಿಸಿದರು. ರೈತರ ಬದಕು, ಕೃಷಿಕರ ಬದುಕು ಹಸನಾಗಬೇಕು, ಅಂದಾಗಲೆ ಎಲ್ಲರ ಬುದುಕು ಸುಂದರವಾಗಲು ಸಾಧ್ಯ ಎಂದರು.

ಎ.ಎಂ.ಹುಡೇದ, ಬಿ.ಬಿ.ಐನಾಪುರ, ಶಿವಾನಂದ ಮುತವಾಡ, ಚಂದ್ರು ದಂಡಿನ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ