ಆ್ಯಪ್ನಗರ

ರೈತ, ಸೈನಿಕ ದೇಶದ ಕಣ್ಣು

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಪತ್ರೇಶ್ವರ ದೇವಸ್ಥಾನದಲ್ಲಿಗ್ರಾಮದ ಎಲ್ಲರೈತರು ಸೇರಿ ಸೋಮವಾರ ಮಾಜಿ ಪ್ರಧಾನಿ ದಿ.ಚರಣಸಿಂಗ್‌ ಅವರ ಪುಣ್ಯತಿಥಿ ಅಂಗವಾಗಿ ರೈತ ದಿನ ಆಚರಿಸಲಾಯಿತು.

Vijaya Karnataka 24 Dec 2019, 5:00 am
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಪತ್ರೇಶ್ವರ ದೇವಸ್ಥಾನದಲ್ಲಿಗ್ರಾಮದ ಎಲ್ಲರೈತರು ಸೇರಿ ಸೋಮವಾರ ಮಾಜಿ ಪ್ರಧಾನಿ ದಿ.ಚರಣಸಿಂಗ್‌ ಅವರ ಪುಣ್ಯತಿಥಿ ಅಂಗವಾಗಿ ರೈತ ದಿನ ಆಚರಿಸಲಾಯಿತು.
Vijaya Karnataka Web farmer soldier countrys eye
ರೈತ, ಸೈನಿಕ ದೇಶದ ಕಣ್ಣು


ಮುಂಡರಗಿ ತಾಲೂಕು ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ ಮಾತನಾಡಿ, ರೈತ ಮತ್ತು ಸೈನಿಕ ದೇಶದ ಕಣ್ಣುಗಳಿದ್ದಂತೆ. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ರೈತರು ತಮ್ಮ ಆದಾಯ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸಬಲರಾದರೆ ತಮ್ಮ ಜೀವನ ಹರ್ಷದಿಂದ ಇರಲು ಕಾರಣವಾಗುತ್ತದೆ ಎಂದು ಹೇಳಿದರು.

ಗ್ರಾಮದ ಎಲ್ಲರೈತರು ಸೇರಿ ಗ್ರಾಮದಲ್ಲಿನಾಲ್ಕು ಜನ ರೈತರು ಮತ್ತು ಇಬ್ಬರು ರೈತ ಕೂಲಿ ಕಾರ್ಮಿಕ, ರೈತ ಮಹಿಳೆ, ಇಬ್ಬರು ಹೈನುಗಾರಿಕೆ ಮಾಡುವ ರೈತ ಮಹಿಳೆ, ಇಬ್ಬರು ಅತ್ಯುತ್ತಮ ಹೂವು ಬೆಳೆಗಾರ, ಒಬ್ಬರು ಒಣಬೇಸಾಯದಲ್ಲಿಅತ್ಯುತ್ತಮ ಇಳುವರಿ ತೆಗೆದ ರೈತರನ್ನು ಹೀಗೆ ಒಟ್ಟು 13 ರೈತರನ್ನು ಸತ್ಕರಿಸಲಾಯಿತು. ಶ್ರೀಶೈಲಪ್ಪ ಸಂಕಣ್ಣವರ ತಮ್ಮ ಎರಡು ಎತ್ತುಗಳ ಸಮೇತ ಬಂದು ಕಾರ್ಯಕ್ರಮಕ್ಕೆ ಮೆರಗು ತಂದರು.

ಯಲ್ಲಪ್ಪ ಬದಾಮಿ, ಮುತ್ತಪ್ಪ ಹೊಸೂರ, ಪ್ರಕಾಶ ಸಂಕಣ್ಣವರ, ಶಿವು ಬೀಡನಾಳ, ಶಿವಾನಂದ ಹರಿಜನ, ಶಾಂತಯ್ಯ ಮುತ್ತಿನಪೆಂಡಿಮಠ, ಶರಣಪ್ಪ ಅಂಗಡಿ, ಹಾಲಪ್ಪ ಅಂಗಡಿ, ಮಲ್ಲಪ್ಪ ಮೂಡನಾಡ, ಶಿವನಗೌಡ ಪಾಟೀಲ ಇದ್ದರು. ಶಿವಾನಂದ ಹರಿಜನ ಸ್ವಾಗತಿಸಿದರು.ಮುತ್ತಣ್ಣ ತಳವಾರ ನಿರೂಪಿಸಿದರು. ಮಲ್ಲನಗೌಡ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ