ಆ್ಯಪ್ನಗರ

1886ನೇ ದಿನಕ್ಕೆ ರೈತರ ಧರಣಿ

ನರಗುಂದ: ಐದು ವರ್ಷದಿಂದ ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂದು ಒತ್ತಾಯಿಸಿ ನಿರಂತರ ಧರಣಿ ನಡೆಸಿದ ನಮಗೆ ನ್ಯಾಯಾಧೀಕರಣ ತೀರ್ಪು ಕೊಟ್ಟರೂ ನ್ಯಾಯ ಸಿಗದಿರುವುದು ನೋವಿನ ಸಂಗತಿ. ಸಾಯೋದರಾಗ ನೀರು ಕುಡಿದು ಸಾಯಬೇಕು ಎಂದು ಎಂದು ಕಲ್ಲಾಪುರ ಗ್ರಾಮದ ರೈತ ಯಂಕಪ್ಪ ಹುಜರತ್ತಿ ಆಶಾಭಾವನೆ ವ್ಯಕ್ತಪಡಿಸಿದರು.

Vijaya Karnataka 19 Nov 2019, 5:00 am
ನರಗುಂದ: ಐದು ವರ್ಷದಿಂದ ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂದು ಒತ್ತಾಯಿಸಿ ನಿರಂತರ ಧರಣಿ ನಡೆಸಿದ ನಮಗೆ ನ್ಯಾಯಾಧೀಕರಣ ತೀರ್ಪು ಕೊಟ್ಟರೂ ನ್ಯಾಯ ಸಿಗದಿರುವುದು ನೋವಿನ ಸಂಗತಿ. ಸಾಯೋದರಾಗ ನೀರು ಕುಡಿದು ಸಾಯಬೇಕು ಎಂದು ಎಂದು ಕಲ್ಲಾಪುರ ಗ್ರಾಮದ ರೈತ ಯಂಕಪ್ಪ ಹುಜರತ್ತಿ ಆಶಾಭಾವನೆ ವ್ಯಕ್ತಪಡಿಸಿದರು.
Vijaya Karnataka Web 18NRD1_25
ನರಗುಂದ ರೈತರ ಹೋರಾಟ ವೇದಿಕೆಯಲ್ಲಿರೈತ ಯಂಕಪ್ಪ ಹುಜರತ್ತಿ ಮಾತನಾಡಿದರು.


ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಸೋಮವಾರ ನಡೆದ 1586ನೇ ದಿನ ಧರಣಿಯಲ್ಲಿಪಾಲ್ಗೊಂಡು ಮಾತನಾಡಿದರು.

ಈ ಭಾಗದ ಜನಪ್ರತಿನಿಧಿಗಳು ರೈತರ ಬಗ್ಗೆ ದಯೆ ತೋರುತ್ತಿಲ್ಲ. ನಾಲ್ಕು ಜಿಲ್ಲೆಯ ರೈತರ ನೆಮ್ಮದಿ ಬದುಕಿಗೆ ಮಹದಾಯಿ, ಕಳಸಾ ಬಂಡೂರಿ ಒಂದೆ ನೀರು ಕುಡಿಯುವ ಆಸೆ ಇಟ್ಟುಕೊಂಡು ನಿತ್ಯ ಹೋರಾಟ ಮಾಡುತ್ತಾದ್ದಾರೆ. ನೂರಾರು ಮಹಿಳೆಯರು ಮನೆ ತೊರೆದು ಧರಣಿ ನಡೆಸುತ್ತಿದ್ದರೂ ಕೇಂದ್ರ ಸರಕಾರ ಕುರುಣೆ ತೋರುತ್ತಿಲ್ಲ. ಕೂಡಲೆ ರೈತರ ಬೇಡಿಕೆ ಇಡೇರಿಸಲು ಸಂಸದರು, ಶಾಸಕರು, ಸಚಿವರು ಕೇಂದ್ರದ ಮೇಲೆ ಒತ್ತಡ ತಂದು ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಮೇಲೆ ಸಮನ್ವಯ ಸಮಿತಿಯ ವೀರಬಸಪ್ಪ ಹೂಗಾರ, ಎಸ್‌.ಬಿ.ಜೋಗಣ್ಣವರ, ಜಗನ್ನಾಥ ಮುಧೋಳೆ, ಎಚ್‌.ಎನ.ಕೋರಿ, ಘಾಟಗೆ, ಬಾಳಿಕಾಯಿ, ಹಸನಿ, ಸಾತನ್ನವರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ