ಆ್ಯಪ್ನಗರ

ಕಬ್ಬು ಕಾರ್ಖಾನೆ ಮುಂದೆ ರೈತರ ಪ್ರತಿಭಟನೆ

ಮುಂಡರಗಿ: ಹಲವು ದಿನಗಳಾದರೂ ರೈತರ ಕಬ್ಬು ಕಟಾವು ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಬ್ಬು ಬೆಳೆಗಾರ ರೈತರು ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಮುಖ್ಯಬಾಗಿಲು ಬಂದ್‌ ಮಾಡಿ ಪ್ರತಿಭಟಿಸಿದರು.

Vijaya Karnataka 10 Dec 2019, 6:16 pm
ಮುಂಡರಗಿ: ಹಲವು ದಿನಗಳಾದರೂ ರೈತರ ಕಬ್ಬು ಕಟಾವು ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಬ್ಬು ಬೆಳೆಗಾರ ರೈತರು ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಮುಖ್ಯಬಾಗಿಲು ಬಂದ್‌ ಮಾಡಿ ಪ್ರತಿಭಟಿಸಿದರು.
Vijaya Karnataka Web farmers protest in front of sugarcane factory
ಕಬ್ಬು ಕಾರ್ಖಾನೆ ಮುಂದೆ ರೈತರ ಪ್ರತಿಭಟನೆ


ರಾಜ್ಯದ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ಒಂದು ತಿಂಗಳಿಂದ ಕಬ್ಬು ಕಟಾವು ಬೇರೆ ಕಡೆಗೆ ಕಟಾವ್‌ ಮಾಡಲಾಗುತ್ತಿದೆ . ಆದರೆ ತಾಲೂಕಿನ ಬಹುತೇಕ ಕಡೆಗೆ ರೈತರ ಕಬ್ಬು ಇನ್ನು ಕಟಾವು ಆಗುತ್ತಿಲ್ಲ. ಕೆಲ ಜಮೀನುಗಳಲ್ಲಿಮಾತ್ರ ಅರ್ಧ ಭಾಗದಷ್ಟು ಕಬ್ಬು ಕಟಾವು ಮಾಡಿದರೆ ಇನ್ನುಳಿದ ಅರ್ಧ ಭಾಗದಲ್ಲಿಕಟಾವು ಮಾಡದೆ ಹಾಗಿಯೇ ಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಖಾನೆ ಸಿಬ್ಬಂದಿ ಕಬ್ಬು ಕಟಾವು ಮಾಡುತ್ತಾರೆ ಎಂದು ಹಾಗೆ ಬಿಡಲಾಗುತ್ತಿದೆ. ಇದರಿಂದ ಕಬ್ಬಿಗೆ ನೀರು ಬಿಡುತ್ತಿಲ್ಲ, ಹೀಗಾಗಿ ಕಬ್ಬು ಒಣಗುತ್ತಿದೆ. ಕಬ್ಬು ಒಣಗಲು ಆರಂಭಿಸಿ ತನ್ನಿಂದ ತಾನೆ ಇಳುವರಿ ಕಡಿಮೆಯಾಗುತ್ತದೆ ಎಂದರು.

ಪ್ರತಿಭಟನೆ ಸ್ಥಳಕ್ಕೆ ಕಾರ್ಖಾನೆ ಅಡಿಶನಲ್‌ ಜನರಲ್‌ ಮ್ಯಾನೇಜರ್‌ ಮಂಜುನಾಥ, ಸಿಪಿಐ ಸುಧೀರಕುಮಾರ ಬೆಂಕಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಮಂಜುನಾಥ ಮಾತನಾಡಿ, ಜನರಲ್‌ ಮ್ಯಾನೇಜರ್‌ ಅನ್ಯ ಕೆಲಸ ನಿಮಿತ್ತ ಬೇರೆಡೆ ತೆರಳಿದ್ದಾರೆ. ಅವರು ಬಂದ ಈ ಕುರಿತು ಚರ್ಚಿಸುತ್ತೇವೆ. ರೈತರಿಗೆ ಸ್ಪಂದಿಸುವ ಮೂಲಕ ಸಮಸ್ಯೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಮಾತಿಗೆ ಒಮ್ಮತ ಸೂಚಿಸಿದ ರೈತರು ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ವಾಪಸ್‌ ಪಡೆದರು.

ಪ್ರಕಾಶ ಸಜ್ಜನರ, ರವಿಕುಮಾರ ನಾಯಕ, ಜಗದೀಶ ರಾಜೂರ, ಈಶಪ್ಪ ಹೊಸೂರ,ನಿಂಗಪ್ಪ ಹಲವಾಗಲಿ, ಹನುಮಂತ ಶೀರನಹಳ್ಳಿ, ಕೊಟ್ರಪ್ಪ ಚೌಡಕಿ, ಎಂ.ಬಾಬುಜಿ, ರಂಗಪ್ಪ ಗಾಂಜಿ, ಪ್ರಶಾಂತಗೌಡ ಪಾಟೀಲ, ಹನುಮಂತ ಕಿತ್ನೂರ, ಮಾಬುಸಾಬ ಬಳ್ಳಾರಿ, ರವಿ ಕೊಳಲು, ಹನುಮಪ್ಪ ಡೊಳ್ಳಿನ, ಶಿವರಾಜ ಹಕ್ಕಂಡಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ