ಆ್ಯಪ್ನಗರ

ತಾಡಪತ್ರೆಗೆ ಮುಗಿಬಿದ್ದ ರೈತರು

ನರೇಗಲ್ಲ: ರಿಯಾಯಿತಿ ದರದ ತಾಡಪತ್ರಿ ಪಡೆಯಲು ರೈತರು ಮುಗಿಬಿದ್ದ ಪರಿಣಾಮ ಕೆಲಕಾಲ ಗೊಂದಲ ಉಂಟಾಯಿತು. ಕೊನೆಗೆ ಲಾಟರಿ ಮೂಲಕ ತಾಡಪತ್ರಿ ವಿತರಿಸುವ ನಿರ್ಧಾರ ಕೈಗೊಳ್ಳಲಾಯಿತು.

Vijaya Karnataka 6 Oct 2020, 5:00 am
ನರೇಗಲ್ಲ: ರಿಯಾಯಿತಿ ದರದ ತಾಡಪತ್ರಿ ಪಡೆಯಲು ರೈತರು ಮುಗಿಬಿದ್ದ ಪರಿಣಾಮ ಕೆಲಕಾಲ ಗೊಂದಲ ಉಂಟಾಯಿತು. ಕೊನೆಗೆ ಲಾಟರಿ ಮೂಲಕ ತಾಡಪತ್ರಿ ವಿತರಿಸುವ ನಿರ್ಧಾರ ಕೈಗೊಳ್ಳಲಾಯಿತು.
Vijaya Karnataka Web 5NRGL2_25
ನರೇಗಲ್ಲ ಕೃಷಿ ಕೇಂದ್ರದಲ್ಲಿ ತಾಡಪತ್ರೆಗಾಗಿ ಮುಗಿಬಿದ್ದಿರುವ ರೈತರು.


ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ 2020-21ನೇ ಸಾಲಿಗೆ ಒಟ್ಟು ತಾಡಪತ್ರಿಗಳು ಪೂರೈಕೆಯಾಗಿವೆ. ಇವುಗಳನ್ನು ಸಾಮಾನ್ಯ 500, ಎಸ್ಸಿ 40, ಎಸ್ಟಿ 22 ಎಂದು ವರ್ಗವಾರು ವಿಂಗಡಿಸಲಾಗಿದೆ. ಸಾಮಾನ್ಯ ವರ್ಗದ ರೈತರು ಒಂದು ತಾಡಪತ್ರಿಗೆ 1000 ರೂ. ಪಾವತಿಸಬೇಕು. ಎಸ್ಸಿ, ಎಸ್ಟಿ ರೈತರು 200 ರೂ. ನೀಡಬೇಕು. ತಾಡಪತ್ರಿ ಪಡೆಯಲು ಅರ್ಜಿ ಸಲ್ಲಿಸಿದ ರೈತರ ಸಂಖ್ಯೆಗಿಂತ ತಾಡಪತ್ರಿಗಳ ಸಂಖ್ಯೆ ಕಡಿಮೆ ಆಗಿದ್ದರಿಂದ ಗೊಂದಲದ ವಾತಾವರಣ ಉಂಟಾಯಿತು. ಆದರೆ ಅರ್ಜಿ ಸಲ್ಲಿಸಿದ್ದ ರೈತರ ಹೆಸರಿನಲ್ಲಿಲಾಟರಿ ಎತ್ತಿದ್ದರಿಂದ ಸಮಸ್ಯೆ ಆಗಲಿಲ್ಲಎಂದು ನರೇಗಲ್ಲಕೃಷಿ ಕೇಂದ್ರದ ಅಧಿಕಾರಿ ವೀರಣ್ಣ ಗಡಾದ ಮಾಹಿತಿ ನೀಡಿದರು. ಲಾಟರಿಯಲ್ಲಿಹೆಸರು ಬಂದ ರೈತರು ಸೋಮವಾರ, ಮಂಗಳವಾರ ಹಾಗೂ ಬುಧವಾರ ಬಂದು ತಾಡಪತ್ರಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ಎಸ್ಸಿ, ಎಸ್ಟಿ ರೈತರ ಹೆಸರಲ್ಲಿಬೇರೆಯವರು ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆಯುತ್ತಿದ್ದಾರೆ. ಇದರಿಂದ ಅರ್ಹ ರೈತರಿಗೆ ಅನ್ಯಾಯವಾಗುತ್ತಿದೆ. ಅರ್ಹರನ್ನು ಗುರುತಿಸಿ ತಾಡಪತ್ರಿ ವಿತರಿಸಬೇಕು ಎಂದು ವೀರೇಶ ರಾಥೋಡ್‌, ಮಂಜು ಮಾದರ ಮೊದಲಾದ ರೈತರು ಆಗ್ರಹಿಸಿದರು. ಜಿಲ್ಲೆಗೆ ದೊಡ್ಡ ಹೋಬಳಿಯಾಗಿರುವ ನರೇಗಲ್ಲರೈತ ಸಂಪರ್ಕ ಕೇಂದ್ರಕ್ಕೆ ಹೆಚ್ಚಿನ ತಾಡಪತ್ರೆಗಳನ್ನು ವಿತರಿಸಬೇಕು ಎಂದು ವಿವಿಧ ಗ್ರಾಮಗಳ ರೈತರು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ