ಆ್ಯಪ್ನಗರ

ಭೂ ತಾಯಿಗೆ ನೈವೇದ್ಯ ಸಲ್ಲಿಸದ ರೈತರು

ಲಕ್ಕುಂಡಿ: ರೈತಾಪಿ ವರ್ಗ ಭೂ ತಾಯಿಗೆ ನಮನ ಸಲ್ಲಿಸುವ ಉತ್ತರ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಆಚರಣೆಯಲೊಂದಾದ ಎಳ್ಳ ಅಮಾವಾಸ್ಯೆಯನ್ನು ಇಲ್ಲಿಯ ರೈತರು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಿದರು.

Vijaya Karnataka 14 Jan 2020, 5:00 am
ಲಕ್ಕುಂಡಿ: ರೈತಾಪಿ ವರ್ಗ ಭೂ ತಾಯಿಗೆ ನಮನ ಸಲ್ಲಿಸುವ ಉತ್ತರ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಆಚರಣೆಯಲೊಂದಾದ ಎಳ್ಳ ಅಮಾವಾಸ್ಯೆಯನ್ನು ಇಲ್ಲಿಯ ರೈತರು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಿದರು.
Vijaya Karnataka Web 452427LKD1B_25
ರೈತ ಕುಟುಂಬದವರು ಸಾಮೂಹಿಕವಾಗಿ ಭೋಜನ ಮಾಡಿದರು.


ಗುರುವಾರ ಸೂರ್ಯಗ್ರಹಣ ಕಾರಣ ಶನಿವಾರ ಬೆಳಗ್ಗೆಯಿಂದಲೇ ರೈತರು, ಚಕ್ಕಡಿ, ಟ್ರಾತ್ರ್ಯಕ್ಟರ್‌, ಟಂ ಟಂ. ವಾಹನದ ಮೂಲಕ ಜಮೀನುಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬನ್ನಿಮರದ ಬುಡದಲ್ಲಿಐದು ಕಲ್ಲಿನ ದೇವರನ್ನು ಪ್ರತಿಷ್ಠಾಪಿಸಿ ವಿಭೂತಿ, ಕುಂಕಮ ಹಚ್ಚಿ ನೈವೇಧ್ಯ ಅರ್ಪಿಸಿದರು. ನಂತರ ಬನ್ನಿಮರವನ್ನು ಐದು ಬಾರಿ ಸುತ್ತು ಹಾಕಿ ಹೊಲದ ತುಂಬ ಚರಗ ಚಲ್ಲಿದರು.

ಜೋಳ ಮತ್ತು ಸಜ್ಜೆಯ ಕಟಗ ರೊಟ್ಟಿ, ಪುಂಡಿ ಪಲ್ಯಾ, ಕೆಂಪು ಖಾರ, ಕಡ್ಲಿಚಟ್ನಿ, ಅಗಸಿ ಚಟ್ನಿ, ಬದ್ನಿಕಾಯಿ ಪಲ್ಯಾ, ವಿವಿಧ ಕಾಳು ಪಲ್ಯಾ, ಗಜರಿ, ಸವತಿಕಾಯಿ, ಮೊಸರು, ಎಳ್ಳ, ಶೇಂಗಾ, ಹೊಳಿಗೆ, ಕರಗಡುಬು ಸೇರಿದಂತೆ ವಿವಿಧ ಖಾಧ್ಯಗಳನ್ನು ಸವಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ