ಮುಳಗುಂದ :ಪಟ್ಟಣಾದ್ಯಂತ ಭಾನುವಾರ ರೈತರು ಶೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಸಿಹಿ ಭೋಜನ ಮಾಡಿ ಭೂ ತಾಯಿಗೆ ಚರಗ ಚಲ್ಲಿಭಕ್ತಿ ಸಮರ್ಪಿಸಿದರು.
ಮುಂಗಾರು ಸ್ವಲ್ಪು ತಡವಾಗಿ ಆರಂಭವಾಗಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು ಒಂದೆಡೆ ಉತ್ಸಾಹ ಇಮ್ಮಡಿಯಾದರೆ ಮುಂಗಾರು ಹಂಗಾಮಿನಲ್ಲಿಬಿತ್ತಿರುವ ಶೇಂಗಾ ಬೆಳೆ ಈಗ ಕೈಗೆ ಬಂದಿದ್ದು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿಶೀಗೆ ಹುಣ್ಣಿಮೆಗೆ ಉಂಡಗಡಬು,ಪುಂಡಿಪಲ್ಯ, ಕುಚ್ಚಿದ ಮೇಣಸಿನಕಾಯಿ, ಕರಿಗಡಬು, ಹುರಕ್ಕಿ ಹೋಳಿಗೆ ಹೀಗೆ ನಾನಾ ಬಗೆಯ ಆಹಾರ ತಯಾರಿಸುವ ರೈತರು ಹೊಲದಲ್ಲಿಚರಗ ಚಲ್ಲಿಉತ್ತಮ ಬೆಳೆ ಬರಲಿ ಎಂದು ಭೂತಾಯಿಗೆ ಬೆಡಿಕೊಳ್ಳುವರು.
ಮುಂಗಾರು ಸ್ವಲ್ಪು ತಡವಾಗಿ ಆರಂಭವಾಗಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು ಒಂದೆಡೆ ಉತ್ಸಾಹ ಇಮ್ಮಡಿಯಾದರೆ ಮುಂಗಾರು ಹಂಗಾಮಿನಲ್ಲಿಬಿತ್ತಿರುವ ಶೇಂಗಾ ಬೆಳೆ ಈಗ ಕೈಗೆ ಬಂದಿದ್ದು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿಶೀಗೆ ಹುಣ್ಣಿಮೆಗೆ ಉಂಡಗಡಬು,ಪುಂಡಿಪಲ್ಯ, ಕುಚ್ಚಿದ ಮೇಣಸಿನಕಾಯಿ, ಕರಿಗಡಬು, ಹುರಕ್ಕಿ ಹೋಳಿಗೆ ಹೀಗೆ ನಾನಾ ಬಗೆಯ ಆಹಾರ ತಯಾರಿಸುವ ರೈತರು ಹೊಲದಲ್ಲಿಚರಗ ಚಲ್ಲಿಉತ್ತಮ ಬೆಳೆ ಬರಲಿ ಎಂದು ಭೂತಾಯಿಗೆ ಬೆಡಿಕೊಳ್ಳುವರು.