ಲಕ್ಕುಂಡಿ : ಇಲ್ಲಿಯ ಸಮೀಪದ ಹರ್ಲಾಪುರದ ಕೊಟ್ಟೂರೇಶ್ವರ ಮಠದಲ್ಲಿ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ರೋಣ ತಾಲೂಕು ಕೊತಬಾಳದ ಸುರೇಶ ಐಹೊಳೆ ಮತ್ತು ಕಲಾ ತಂಡ ಪ್ರದರ್ಶನ ನೀಡಿದ ಹಳ್ಳಿಯ ಸುಗ್ಗಿಯ ಹಾಡು, ಲಾವಣಿ ಪದ, ಜಾನಪದ ನೃತ್ಯ, ಹಾಸ್ಯದ ಏಕಾಭಿನಯ ಪಾತ್ರ ಹಾಗೂ ಜೋಗುತಿ ನೃತ್ಯ ದೀಪ ನೃತ್ಯ ಕಾರ್ಯಕ್ರಮಗಳು ಸೇರಿದ ನೂರಾರು ಅಭಿಮಾನಿಗಳ ಮನ ಸೂರೆಗೊಂಡಿತು. ಗ್ರಾಮದ ಗಜಾನನ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾನಿಧ್ಯ ವಹಿಸಿದ್ದ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಈ ಜನಪದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದರ ಮೂಲಕ ಇವುಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಮೊಬೈಲ್ ಹಾಗೂ ಟಿವಿ ಮಾಧ್ಯಮದಿಂದಾಗಿ ಇಂತಹ ಕಾರ್ಯಕ್ರಗಳಿಂದ ಯುವ ಸಮುದಾಯ ದೂರವಾಗುತ್ತಿರುವುದು ವಿಷಾಧನೀಯ. ಈ ದಿಸೆಯಲ್ಲಿ ಮನೆಯಲ್ಲಿರುವ ಹಿರಿಯರು, ಸಾಮಾಜಿಕ ಕಾರ್ಯಕರ್ತರು, ಗಣ್ಯರು ಅಂತಹ ಸಮುದಾಯ ಮನವೊಲಿಸಿ ಜಾನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರಿಪಿಸಬೇಕು ಎಂದರು.
ಜಂತ್ಲಿಶಿರೂರ ಗ್ರಾಮದ ಜಾನಪದ ಕಲಾವಿದ ಗವಿಶಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಕೊಟ್ಟೂರೇಶ್ವರ ಮಠದಲ್ಲಿ ಜಾತ್ರೆ, ಶಿವಾನುಭವಗಳಲ್ಲಿ ಜಾನಪದ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ತಳವಾರ, ಉಪಾಧ್ಯಕ್ಷ ಬಸವರಾಜ ಬೆಳ್ಲಕ್ಕಿ, ರೇವಣೆಪ್ಪ ಕೋರಿ, ಚಂದ್ರಪ್ಪ ಗದಗ, ಮುಖ್ಯೋಪಾಧ್ಯಾಯ ನೀಲಕಂಠ ಮರಡಿ, ಶಿವು ಬಜಂತ್ರಿ, ಸುರೇಶ ಐಹೊಳ್ಳಿ ಉಪಸ್ಥಿತರಿದ್ದರು.
ಕೆ.ಬಿ.ಕೊಣ್ಣೂರು ಸ್ವಾಗತಿಸಿದರು. ಕೆ.ಆರ್. ಕೋರಿ ನಿರೂಪಿಸಿದರು. ಡಾ. ಎಸ್.ಸಿ. ಸರ್ವಿ ವಂದಿಸಿದರು.
ರೋಣ ತಾಲೂಕು ಕೊತಬಾಳದ ಸುರೇಶ ಐಹೊಳೆ ಮತ್ತು ಕಲಾ ತಂಡ ಪ್ರದರ್ಶನ ನೀಡಿದ ಹಳ್ಳಿಯ ಸುಗ್ಗಿಯ ಹಾಡು, ಲಾವಣಿ ಪದ, ಜಾನಪದ ನೃತ್ಯ, ಹಾಸ್ಯದ ಏಕಾಭಿನಯ ಪಾತ್ರ ಹಾಗೂ ಜೋಗುತಿ ನೃತ್ಯ ದೀಪ ನೃತ್ಯ ಕಾರ್ಯಕ್ರಮಗಳು ಸೇರಿದ ನೂರಾರು ಅಭಿಮಾನಿಗಳ ಮನ ಸೂರೆಗೊಂಡಿತು. ಗ್ರಾಮದ ಗಜಾನನ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾನಿಧ್ಯ ವಹಿಸಿದ್ದ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಈ ಜನಪದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದರ ಮೂಲಕ ಇವುಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಮೊಬೈಲ್ ಹಾಗೂ ಟಿವಿ ಮಾಧ್ಯಮದಿಂದಾಗಿ ಇಂತಹ ಕಾರ್ಯಕ್ರಗಳಿಂದ ಯುವ ಸಮುದಾಯ ದೂರವಾಗುತ್ತಿರುವುದು ವಿಷಾಧನೀಯ. ಈ ದಿಸೆಯಲ್ಲಿ ಮನೆಯಲ್ಲಿರುವ ಹಿರಿಯರು, ಸಾಮಾಜಿಕ ಕಾರ್ಯಕರ್ತರು, ಗಣ್ಯರು ಅಂತಹ ಸಮುದಾಯ ಮನವೊಲಿಸಿ ಜಾನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರಿಪಿಸಬೇಕು ಎಂದರು.
ಜಂತ್ಲಿಶಿರೂರ ಗ್ರಾಮದ ಜಾನಪದ ಕಲಾವಿದ ಗವಿಶಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಕೊಟ್ಟೂರೇಶ್ವರ ಮಠದಲ್ಲಿ ಜಾತ್ರೆ, ಶಿವಾನುಭವಗಳಲ್ಲಿ ಜಾನಪದ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ತಳವಾರ, ಉಪಾಧ್ಯಕ್ಷ ಬಸವರಾಜ ಬೆಳ್ಲಕ್ಕಿ, ರೇವಣೆಪ್ಪ ಕೋರಿ, ಚಂದ್ರಪ್ಪ ಗದಗ, ಮುಖ್ಯೋಪಾಧ್ಯಾಯ ನೀಲಕಂಠ ಮರಡಿ, ಶಿವು ಬಜಂತ್ರಿ, ಸುರೇಶ ಐಹೊಳ್ಳಿ ಉಪಸ್ಥಿತರಿದ್ದರು.
ಕೆ.ಬಿ.ಕೊಣ್ಣೂರು ಸ್ವಾಗತಿಸಿದರು. ಕೆ.ಆರ್. ಕೋರಿ ನಿರೂಪಿಸಿದರು. ಡಾ. ಎಸ್.ಸಿ. ಸರ್ವಿ ವಂದಿಸಿದರು.