ಆ್ಯಪ್ನಗರ

ತಂದೆ- ತಾಯಿ ಸೇವೆ ನಿಜವಾದ ಸಮಾಜ ಸೇವೆ

ರೋಣ : ಹಣವಂತರು ಸಮಾಜ ಸೇವೆಯಲ್ಲಿ ತೊಡಗುವುದು ಬಹಳ ಕಡಿಮೆ, ತಮ್ಮ ತಂದೆ -ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸಿ, ದೇಣಿಗೆ ನೀಡುತ್ತ ದೊಡ್ಡ ಸಮಾಜ ಸೇವಕರು ಎನಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ತಂದೆ ತಾಯಿ ಸೇವೆ ನಿಜವಾದ ಸಮಾಜ ಸೇವೆ ಎಂದು ನಟಿ ಸುಮತಿಶ್ರೀ ಹೇಳಿದರು

Vijaya Karnataka 28 Mar 2019, 5:00 am
ರೋಣ : ಹಣವಂತರು ಸಮಾಜ ಸೇವೆಯಲ್ಲಿ ತೊಡಗುವುದು ಬಹಳ ಕಡಿಮೆ, ತಮ್ಮ ತಂದೆ -ತಾಯಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸಿ, ದೇಣಿಗೆ ನೀಡುತ್ತ ದೊಡ್ಡ ಸಮಾಜ ಸೇವಕರು ಎನಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ತಂದೆ ತಾಯಿ ಸೇವೆ ನಿಜವಾದ ಸಮಾಜ ಸೇವೆ ಎಂದು ನಟಿ ಸುಮತಿಶ್ರೀ ಹೇಳಿದರು
Vijaya Karnataka Web GDG-27 RON 5
ಮುಶಿಗೇರಿ ಗ್ರಾಮದ ಶ್ರೀ ಶರಣಬಸವೇಶ್ವರರ 69 ಜಾತ್ರಾಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಧಾಮಿಕ ಕಾರ್ಯಕ್ರಮದಲ್ಲಿ ಚಿತ್ರನಟಿ ಸುಮತಿಶ್ರೀ ಅವರನ್ನು ಗ್ರಾಮದ ಮಹಿಳೆಯರು ಸನ್ಮಾನಿಸಿದರು.


ಅವರು ತಾಲೂಕಿನ ಮುಶಿಗೇರಿಯ ಶ್ರೀ ಶರಣಬಸವೇಶ್ವರರ 69 ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಧಿಕಾರ ಕೈಯಲ್ಲಿದ್ದರೆ ಮಾತ್ರ ಸಮಾಜ ಸೇವೆ ಮಾಡಬಹುದು ಎಂಬುದು ಹಲವರ ಅನಿಸಿಕೆ. ಅದು ತಪ್ಪು ಕಲ್ಪನೆ. ನನ್ನ ಹೆತ್ತವರು ಯಾರೂ ಅಂತ ಗೊತ್ತಿಲ್ಲ. ನನ್ನ 7ನೇ ವಯಸ್ಸಿನಲ್ಲಿ ನನಗೆ ಗುರುಪುಟ್ಟರಾಜರು ತಂದೆಯಾಗಿ ರಂಗಭೂಮಿಗೆ ಹೋಗುವಂತೆ ಸೂಚಿಸಿದರು, ರೇಣುಕಾ ಯಲ್ಲಮ್ಮನನ್ನು ತಾಯಿಯಾಗಿ ಆರಾಧಿಸುತ್ತ ಚಿತ್ರರಂಗ, ರಂಗಭೂಮಿಯಿಂದ ಬರುವ ಆದಾಯವನ್ನು ಇಂತಹ ಸಮಾಜ ಸೇವೆಗೆ ನೀಡುತ್ತಿರುವೆ. ಜನಸೇವೆಗೆ ಪದವಿ ಬೇಕಾಗಿಲ್ಲ. ವೃತ್ತಿಯಲ್ಲಿ ಮನಸ್ಸು ಕೊಟ್ಟು ನಿಷ್ಠೆಯಿಂದ ದುಡಿದು ಕಷ್ಟದಲ್ಲಿರುವವರ ಕಣ್ಣಿರು ಒರೆಸುವುದೇ ನಿಜವಾದ ಸೇವೆ. ಗುರು ಪುಟ್ಟರಾಜರ ಆಶೀರ್ವಾದ ಹಾಗೂ ಪ್ರೋತ್ಸಾಹವೇ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಯಿತು ಎಂದರು.

ಸಿದ್ದಾಪೂರ ಶಿವಲಿಂಗಶಾಸ್ತ್ರಿಗಳು ಸಾನ್ನಿಧ್ಯವಹಿಸಿ, ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲ ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತವೆ. ಅಂಬೇಡ್ಕರ್‌, ಮಹತ್ಮಾಗಾಂಧೀಜಿ, ನೆಲ್ಸನ್‌ ಮಂಡೆಲಾ ಅವರೆಲ್ಲ ರಾಷ್ಟ್ರ ಮಟ್ಟದಲ್ಲಿ ಸಮಾಜ ಸೇವೆಗೈದವರು. ಈ ಮಟ್ಟಕ್ಕೆ ಎಲ್ಲರೂ ಏರಲು ಸಾಧ್ಯವಿಲ್ಲವಾದರೂ ಪ್ರತಿಯೊಬ್ಬರು ಯೋಗ್ಯತಾನುಸಾರ ಸಮಾಜ ಸೇವೆಗೆ ಮುಂದಾಗಬೇಕು ಎಂದರು.

ಮಂಜುಳಾ ರೇವಡಿ, ಗೌರಾದೇವಿ ಶಾಬಾದಿಮಠ, ವಿಜಯಲಕ್ಷ್ಮೀ ವಸ್ತ್ರದ, ಶರಣಮ್ಮ ಅಂಗಡಿ, ಲಲಿತಾ ಮುರಗೋಡ, ಸುಪ್ರೀಯಾ ಅಕ್ಕಸಾಲಿಗರ, ಶಿವರುದ್ರಯ್ಯ ಗೌಡಗಾಂವ, ಸಿದ್ದಶಕುಮಾರ ಸಿಂದೋಗಿ, ಬಿ.ಸಿ. ಪೊಲೀಸ್‌ಪಾಟೀಲ, ಬಸವರಾಜ ಕೌಜಗೇರಿ, ಶಂಕರಪ್ಪ ನಾಯ್ಕರ, ಚಂದಪ್ಪ ಗುಡದೂರ, ಕಳಕಪ್ಪ ಸೂಡಿ, ಶರಣಪ್ಪ ಕುಂಬಾರ, ರಾಜಶೇಖರ ಮಾಲಗಿತ್ತಿ, ಮಾರುತಿ ನಾಯ್ಕರ, ಹನಮಂತ ಬಂಡಿವಡ್ಡರ, ಸಿ.ಎನ್‌.ಚುರ್ಚಪ್ಪನವರ, ಸಂತೋಷ ಸೂಡಿ, ಶಿವಾನಂದ ಗುಡದೂರ, ಎಫ್‌.ಡಿ.ಉಪ್ಪಾರ , ಬಸನಗೌಡ ಗೌಡರ, ಮುತ್ತಪ್ಪ ಶೆಟ್ಟರ, ವೀರಣ್ಣ ಮುದೇನೂರ, ಕೂಡ್ಲೇಪ್ಪ ಸಂಗಟಿ, ಮೌನೇಶ ಅಕ್ಕಸಾಲಿಗರ, ಶಿವಪ್ಪ ಮಾದರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ