ಆ್ಯಪ್ನಗರ

ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ

ಗದಗ: ಹಿಂದಿನ ಕಾಲದಲ್ಲಿಶಾಲೆ ಪುಸ್ತಕಗಳನ್ನು ಬಿಟ್ಟರೆ ಬಾಲಭಾರತಿ ಪುಸ್ತಕ ಓದಲು ದೊರೆಯುತ್ತಿತ್ತು. ಇಂದಿನ ವಿದ್ಯಾರ್ಥಿಗಳಿಗೆ ವಿಪುಲವಾದ ಸಾಹಿತ್ಯ ಕೃತಿಗಳು ದೊರೆಯುತ್ತಿವೆ ಅವುಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಬೇಕೆಂದು ಮಕ್ಕಳ ಸಾಹಿತಿ ಎಸ್‌ ಎಂ ಕದಡಿ ಹೇಳಿದರು.

Vijaya Karnataka 17 Sep 2019, 5:00 am
ಗದಗ: ಹಿಂದಿನ ಕಾಲದಲ್ಲಿಶಾಲೆ ಪುಸ್ತಕಗಳನ್ನು ಬಿಟ್ಟರೆ ಬಾಲಭಾರತಿ ಪುಸ್ತಕ ಓದಲು ದೊರೆಯುತ್ತಿತ್ತು. ಇಂದಿನ ವಿದ್ಯಾರ್ಥಿಗಳಿಗೆ ವಿಪುಲವಾದ ಸಾಹಿತ್ಯ ಕೃತಿಗಳು ದೊರೆಯುತ್ತಿವೆ ಅವುಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಬೇಕೆಂದು ಮಕ್ಕಳ ಸಾಹಿತಿ ಎಸ್‌ ಎಂ ಕದಡಿ ಹೇಳಿದರು.
Vijaya Karnataka Web favorite favorite book opinion contest
ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ


ನಗರದ ರೋಟರಿ ಸೆಂಟ್ರಲ್‌ ಪ್ರೌಢಶಾಲೆಯಲ್ಲಿಕನ್ನಡ ಪುಸ್ತಕ ಪ್ರಾಧಿಕಾರದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆಯಲ್ಲಿಮಾತನಾಡಿದರು.

ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು, ಒಬ್ಬ ಶಿಕ್ಷಕ ಇಡೀ ದೇಶದ ಚಿತ್ರಣ ಬದಲಿಸಬಲ್ಲರು ಎನ್ನುವ ಮಾತನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಆಡಳಿತಾಧಿಕಾರಿ ಅನಿಲ ಜೋಶಿ ಅಧ್ಯಕ್ಷತೆ ವಹಿಸಿ, ಕನ್ನಡ ಪುಸ್ತಕ ಪ್ರಾಧಿಕಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಾರ್ಯಕ್ರಮ ಮಕ್ಕಳಿಗೆ ಉಪಯುಕ್ತವಾಗಿದೆ. 3 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮದಿಂದ ಮಕ್ಕಳಲ್ಲಿಓದುವ ಹವ್ಯಾಸ ಇಮ್ಮಡಿಗೊಳಿಸಿದೆ ಎಂದರು.

ಸ್ಪರ್ಧೆಯಲ್ಲಿಭಾಗವಹಿಸಿದ್ದ ಸುಮೇಧಾ ಬಾಗಲಕೋಟಿ ಪ್ರಥಮ, ಸುಷ್ಮಿತಾ ಕಾಳಗಿ ದ್ವಿತೀಯ, ಕವನಾ ಕೊಣ್ಣೂರ ತೃತೀಯ ಸ್ಥಾನ ಪಡೆದು ಪುಸ್ತಕ ಹಾಗೂ ಪ್ರಶಸ್ತಿ ಪತ್ರ ಪಡೆದರು.

ಸ್ಪರ್ಧೆಯಲ್ಲಿಪಲ್ಲವಿ ಅರಳಿಕಟ್ಟಿ, ಸಂಜಯ ಐಲಿ, ಪ್ರಿಯಾಂಕಾ ರಜಪೂತ, ಮಂಜುನಾಥ ಹಿರೇಮಠ, ಶ್ರೀದೇವಿ ಶ್ಯಾವಿ, ಅಶ್ರಫಲಿ ಕಣವಿ, ಸಾನಿಯಾ ಕೌಜಗೇರಿ, ದಿವ್ಯ ಕಲಕೊಟಿ, ಕವಿತಾ ಆಲೂರ, ಸಂಜನಾ ಗೋರ್ಪಡೆ ಅವರು ಮೌಲ್ಯಯುತ ಪುಸ್ತಕಗಳಾದ ಗುರುದೇವ ರಾಮಕೃಷ್ಣ ಕ್ಷಣ ಹೊತ್ತು ಆಣಿ ಮುತ್ತು ಹುಚ್ಚು ಮನಸ್ಸಿನ ಹತ್ತು ಮುಖಗಳು ಬದುಕಿನ ಗುರು ಕುಸುಮಬಾಲೆ ಕೃತಿಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.

ಅನಿರುದ್ಧ ಜೋಷಿ, ಎಸ್‌.ಎಂ. ಕಾತರಕಿ, ಸುಜಾತಾ .ಡಿ ಕೆ., ಮುಖ್ಯಾಧ್ಯಾಪಕಿ ಶಾರದಾ ಅಳಗವಾಡಿ, ಮುತ್ತಣ್ಣ ಬಡಿಗೇರ, ನಿಂಗರಾಜ ಬಡಿಗೇರ, ಸುಷ್ಮಾ ನದಾಫ, ಮಂಜುಳಾ ಮ್ಯಾಗೇರಿ, ಮಹಾಲಕ್ಷ್ಮೇ ಬಿಜ್ಜಳ, ಕ್ಲಾರಾ ಚಿತ್ತಾಪುರ ಇದ್ದರು.

ಸುಕನ್ಯಾ ತಾರನಾಳ, ಕವನಾ ಕೊಣ್ಣೂರ ಪ್ರಾರ್ಥಿಸಿದರು. ಮುತ್ತುರಾಜ ಬಡಿಗೇರ ಸ್ವಾಗತಿಸಿದರು. ಸುಷ್ಮಿತಾ ಕಾಳಗಿ ವಂದಿಸಿದರು. ತಸಬಿಹಾ ದೇಸಾಯಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ