ಆ್ಯಪ್ನಗರ

ಶಿರೋಳದಲ್ಲಿ ಹಬ್ಬದ ಕಳೆ

ಕೊಣ್ಣೂರ : ಸಮೀಪದ ಶಿರೋಳದಲ್ಲಿ ಬುಧವಾರ ಬೆಳಗ್ಗೆ 8ಕ್ಕೆ ಶಿರೋಳದ ಗ್ರಾಪಂ ಅಧ್ಯಕ್ಷ ಹನಮಂತ ಕಾಡಪ್ಪನವರ ರಷ್ಟ್ರಧ್ವಜಾರೋಹಣ ಮಾಡಿದರು. ಪರಿಷತ್‌ ಧ್ವಜವನ್ನು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೊಗೇರಿ ಹಾಗೂ ನಾಡ ಧ್ವಜವನ್ನು ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ ನೆರವೇರಿಸಿದರು. 100 ಕುಂಭ ಮೇಳ,ಡೊಳ್ಳಿನ ಮೇಳ ಕರಡಿಮಜಲಿನ ಮೇಳ ಹಾಗೂ ನಾನಾ ಮೇಳಗಳೊಂದಿಗೆ ಶಾಲಾ ಮಕ್ಕಳು ಸೇರಿ ಕನ್ನಡ ತಾಯಿಯ ಭವ್ಯ ಮೆರವಣಿಗೆಗೆ ಶಾಸಕ ಸಿ.ಸಿ.ಪಾಟೀಲ ಚಾಲನೆ ನೀಡಿದರು.

Vijaya Karnataka 31 Jan 2019, 5:00 am
ಕೊಣ್ಣೂರ : ಸಮೀಪದ ಶಿರೋಳದಲ್ಲಿ ಬುಧವಾರ ಬೆಳಗ್ಗೆ 8ಕ್ಕೆ ಶಿರೋಳದ ಗ್ರಾಪಂ ಅಧ್ಯಕ್ಷ ಹನಮಂತ ಕಾಡಪ್ಪನವರ ರಷ್ಟ್ರಧ್ವಜಾರೋಹಣ ಮಾಡಿದರು. ಪರಿಷತ್‌ ಧ್ವಜವನ್ನು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೊಗೇರಿ ಹಾಗೂ ನಾಡ ಧ್ವಜವನ್ನು ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ ನೆರವೇರಿಸಿದರು. 100 ಕುಂಭ ಮೇಳ,ಡೊಳ್ಳಿನ ಮೇಳ ಕರಡಿಮಜಲಿನ ಮೇಳ ಹಾಗೂ ನಾನಾ ಮೇಳಗಳೊಂದಿಗೆ ಶಾಲಾ ಮಕ್ಕಳು ಸೇರಿ ಕನ್ನಡ ತಾಯಿಯ ಭವ್ಯ ಮೆರವಣಿಗೆಗೆ ಶಾಸಕ ಸಿ.ಸಿ.ಪಾಟೀಲ ಚಾಲನೆ ನೀಡಿದರು.
Vijaya Karnataka Web GDG-30KNR PHOTO 1C
ಶಿರೋಳದ ಪ್ರಮುಖ ರಾಜ ಬೀದಿಗಳಲ್ಲಿ ಕನ್ನಡಾಂಬೆಯ ಮೆರವಣಿಗೆ ಕುಂಭಮೇಳ ,ಡೊಳ್ಳಿನ, ಕರಡಿ ಮಜಲಿನ ಮೇಳದೊಂದಿಗೆ ಸಾಗಿತು.


ಮಠದಿಂದ ನಡೆದ ಮೆರವಣಿಗೆಯು ಶಿರೋಳದ ಬೀದಿಗಳಲ್ಲಿ ಜನರು ತಮ್ಮ ಮನೆಯ ಮುಂದೆ ಅಂದದ ರಂಗೋಲಿ ಬಿಡಿಸಿದ್ದು ಜನರ ಮನ ಸೆಳೆಯಿತು. ಬಜಾರ ಮಾರುತಿ ದೇವಸ್ಥಾನ ಹತ್ತಿರ ಸಾಗಿ ಮುಂದೆ ಬಸವೇಶ್ವರ ಓಣೆ,ಕಲ್ಮೇಶ್ವರ ದೇವಸ್ಥಾನ,ಮಾರುತಿ ದೇವಸ್ಥಾನ,ದುರ್ಗಾದೇವಿ ದೇವಸ್ಥಾನ ಮಾರ್ಗವಾಗಿ ಮೆರವಣಿಗೆ ಸಾಗಿತು.

ಮೆರವಣಿಗೆಯಲ್ಲಿ ಕುಂಭ ಮೇಳ,ಕರಡಿ ಮಜಲಿನ ಮೇಳ ಹಾಗೂ ಡೋಳ್ಳಿನ ಮೇಳ ನೋಡುಗರ ಮನ ಸೆಳೆಯಿತು.ಸಮ್ಮೇಳಾನಾಧ್ಯಕ್ಷ ಬಸವರಾಜ ಭೂಸರಡ್ಡಿ, ವಿ.ಕೆ.ಮರೆಗುದ್ದಿ, ನಾಗನಗೌಡ್ರ ತಿಮ್ಮನಗೌಡ್ರ, ಶೇಖಣ್ಣ ಗಟ್ಟಿ,ಶರಣಯ್ಯ ಹಿರೇಮಠ,ಎಂ.ಎಸ್‌.ಹಳ್ಳೂರ, ಶಾರಾದಾ ಜವಳಿ, ಶೇಖರಯ್ಯ ನಾಗಲೋಟಿಮಠ, ಗ್ರಾಪಂ ಸದಸ್ಯ ಬಸವರಾಜ ಹೂಗಾರ,ವೀರಭದ್ರಯ್ಯ ಶಿರೋರ,ಶಿವಯೋಗಿ ಶಾಂತಗೇರಿ,ಮೋಹನ ಕಲಹಾಳ ಬಸವರಾಜ ಪಟ್ಟಣಶೆಟ್ಟಿ,ಎನ್‌.ಎಸ್‌.ಜಾಧವ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ