ಆ್ಯಪ್ನಗರ

ಸಮಿತಿ ರಚಿಸಿದರೆ ಉಗ್ರ ಹೋರಾಟ

ನರಗುಂದ: ಕಳಸಾ ಬಂಡೂರಿ ಯೋಜನೆಗೆ ಅಡ್ಡಗಾಲು ಹಾಕಿರುವ ಗೋವಾ ಸರಕಾರ ರಾಜ್ಯಕ್ಕೆ ನೀಡಿರುವ ಅನುಮತಿ ಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದ್ದು ಒಂದು ವೇಳೆ ಸಮಿತಿ ರಚನೆಗೆ ಒಪ್ಪಿಗೆ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾದೀತು ಎಂದು ರೈತ ಹೋರಾಟಗಾರರು ಎಚ್ಚರಿಸಿದ್ದಾರೆ.

Vijaya Karnataka 21 Nov 2019, 5:00 am
ನರಗುಂದ: ಕಳಸಾ ಬಂಡೂರಿ ಯೋಜನೆಗೆ ಅಡ್ಡಗಾಲು ಹಾಕಿರುವ ಗೋವಾ ಸರಕಾರ ರಾಜ್ಯಕ್ಕೆ ನೀಡಿರುವ ಅನುಮತಿ ಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದ್ದು ಒಂದು ವೇಳೆ ಸಮಿತಿ ರಚನೆಗೆ ಒಪ್ಪಿಗೆ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾದೀತು ಎಂದು ರೈತ ಹೋರಾಟಗಾರರು ಎಚ್ಚರಿಸಿದ್ದಾರೆ.
Vijaya Karnataka Web fierce struggle if the committee is formed
ಸಮಿತಿ ರಚಿಸಿದರೆ ಉಗ್ರ ಹೋರಾಟ


ಈ ಭಾಗದ ಸುದೀರ್ಘ ರೈತರ ಹೋರಾಟಕ್ಕೆ ನ್ಯಾಯಾಧೀಕರಣ ತೀರ್ಪು ಸಮಾಧಾನ ತಂದುಕೊಟ್ಟಿದ್ದು ಅಲ್ಲದೆ ಕಳಸಾ ಬಂಡೂರಿ ನೀರು ಮಲಪ್ರಭೆಗೆ ಹರಿದು ಬರುವ ಆಶಾ ಭಾವನೆ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರಕಾರ ಕಾಮಗಾರಿಯಿಂದ ಹೊರ ಬೀಳದ ಗೆಜೆಟ್‌ ನೋಟಿಫಿಕೇಶನ್‌ನಿಂದ ನಿರಾಸೆ ಮೂಡಿಸಿತ್ತು. ಈ ಸಂದರ್ಭದಲ್ಲಿಕಳಸಾ ಬಂಡೂರಿ ಕಾಮಗಾರಿಗೆ ಪರಿಸರ ಇಲಾಖೆ ಅನುಮತಿಗೆ ವಿರೋಧ ವ್ಯಕ್ತಪಡಿಸಿರುವ ಗೋವಾ ಸರಕಾರ ಕೇಂದ್ರ ಪರಿಸರ ಸಚಿವವರಿಗೆ ಪತ್ರ ಬರೆದಿದೆ. ಜತೆಗೆ ಕರ್ನಾಟಕಕ್ಕೆ ನೀಡಿರುವ ಅನುಮತಿ ಮರು ಪರಿಶೀಲನೆಗೆ ಸಮಿತಿ ರಚಿಸುವ ಭರವಸೆ ನೀಡಿರುವುದು ಹೋರಾಟಗಾರರನ್ನು ಕೆರಳಿಸಿದೆ.

ನ್ಯಾಯಾಧೀಕರಣ ತೀರ್ಪು ಮರು ಪರಿಶೀಲಿಸಲು ಸಮಿತಿ ರಚಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿರುವ ರೈತ ಮುಖಂಡ ಚಂದ್ರಗೌಡ ಪಾಟೀಲ ಒಂದು ವೇಳೆ ಸಮಿತಿ ರಚನೆಗೆ ಮುಂದಾದಲ್ಲಿರೈತರು ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಣ್ಣ ರಾಜ್ಯಕ್ಕೆ ಕೇಂದ್ರ ಸರಕಾರ ಮನೆ ಹಾಕಿ ಕರ್ನಾಟಕಕ್ಕೆ ದ್ವಿಮುಖ ಧೋರಣೆ ಮಾಡುತ್ತಿದೆ. ನ್ಯಾಯಾಧೀಕರಣ ತೀರ್ಪುನಂತೆ ರಾಜ್ಯಕ್ಕೆ 13 ಟಿಎಂಸಿ ನೀರು ಹಂಚಿಕೆ ಮಾಡಲು ಮುಂದಾಗಬೇಕು ಇಲ್ಲದೆ ಹೋದರೆ ಪ್ರತಿಭಟನೆ ಎದುರಿಸಬೇಕಾದೀತು ಎಂದು 1588ನೇ ದಿನದ ರೈತರ ದರಣಿ ವೇದಿಕೆಯಲ್ಲಿಎಚ್ಚರಿಸಿರುವ ಸಮನ್ವಯ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ, ಎಸ್‌.ಬಿ.ಜೋಗಣ್ಣವರ, ಮಾರುತಿ ಯಾದವ, ಯಂಕಪ್ಪ ಹುಲಜೋಗಿ, ಜಗನ್ನಾಥ ಮುಧೋಳೆ, ಸುಭಾಶ ಗಿರಿಯಣ್ಣವರ, ಸಾತನ್ನವರ ಮುಂತಾದವರು ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ