ಆ್ಯಪ್ನಗರ

ತುಂಬಿದ ಚರಂಡಿ: ಡೆಂಗೆ ಭಯದಲ್ಲಿ ಜನ

ನರಗುಂದ : ಸ್ವಚ್ಛತೆ ಅಂದೋಲನ ಮೂಲಕ ಜಾಗೃತಿ ಮೂಡಿಸುವ ಅಧಿಕಾರಿಗಳು ವಿನಾಯಕ ನಗರದ ಚರಂಡಿ ಸ್ವಚ್ಛತೆಯನ್ನೇ ಮರೆತಿದ್ದು ಕಸ,ಗಲೀಜಿನಿಂದಾಗಿ ಸೊಳ್ಳೆಗಳ ತಾಣವಾಗಿ ಪರಿಣಮಿಸಿದೆ.

Vijaya Karnataka 7 May 2019, 5:00 am
ನರಗುಂದ : ಸ್ವಚ್ಛತೆ ಅಂದೋಲನ ಮೂಲಕ ಜಾಗೃತಿ ಮೂಡಿಸುವ ಅಧಿಕಾರಿಗಳು ವಿನಾಯಕ ನಗರದ ಚರಂಡಿ ಸ್ವಚ್ಛತೆಯನ್ನೇ ಮರೆತಿದ್ದು ಕಸ,ಗಲೀಜಿನಿಂದಾಗಿ ಸೊಳ್ಳೆಗಳ ತಾಣವಾಗಿ ಪರಿಣಮಿಸಿದೆ.
Vijaya Karnataka Web filled drainage people in fear of dengue
ತುಂಬಿದ ಚರಂಡಿ: ಡೆಂಗೆ ಭಯದಲ್ಲಿ ಜನ


ಪಟ್ಟಣದ ವಿನಾಯಕ ನಗರದಲ್ಲಿ ಈ ಹಿಂದೆ ಚಿಕುನ್‌ ಗುನ್ಯಾ, ಡೆಂಗೆ ಇತರ ಮಾರಕ ರೋಗಗಳ ಪ್ರಕರಣಗಳು ಕಂಡುಬಂದಿದ್ದು , ಚರಂಡಿ ನೀರು ಮಲೀನಗೊಂಡು ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಿದ್ದರೂ ಪುರಸಭೆಯಾಗಲಿ, ಆರೋಗ್ಯಾಧಿಕಾರಿಗಳಾಗಿ ಗಮನ ನೀಡಿಲ್ಲ ಎಂಬುದು ಜನರ ಆರೋಪ.

ತುಂಬಿದ ಚರಂಡಿ: ವಿನಾಯಕ ನಗರದ ಮಸೀದಿಗೆ ಹೊಂದಿಕೊಂಡಿರುವ ಚರಂಡಿ ಸ್ವಚ್ಛತೆ ಕೈಗೊಳ್ಳದ ಕಾರಣ ಗಲೀಜು ನೀರು ಸಂಗ್ರಹಗೊಂಡ ಗಬ್ಬೆದ್ದು ನಾರುತ್ತಿದೆ. ರಾತ್ರಿಯಾಗುತ್ತಿದ್ದಂತೆ ಸೊಳ್ಳೆಗಳ ಕಾಟದಿಂದ ಜನ ನಿದ್ದೆಗೆಟ್ಟಿದ್ದಾರೆ. 24*7 ಕುಡಿಯುವ ನೀರಿನ ಪೈಪ್‌ಲೈನ್‌ ಸೋರಿಕೆಯಿಂದ ಚರಂಡಿ ತುಂಬಿ ನಿಂತಿದೆ. ನೀರು ಸರಾಗವಾಗಿ ಹರಿದು ಹೋಗದೆ ಗಲೀಜು ನಿರ್ಮಾಣವಾಗಿದೆ.

ಅವೈಜ್ಞಾನಿಕ ಚರಂಡಿ : ವಿನಾಯಕ ನಗರದಲ್ಲಿ ಚರಂಡಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೊಗದೆ ಅಲ್ಲಲ್ಲಿ ನೀರು ಸಂಗ್ರಹವಾಗಿ ದುರ್ವಾಸನೆಗೆ ಕಾರಣವಾಗಿದೆ. ನೀರು ಸರಾಗವಾಗಿ ಹರಿದು ಹೊರ ಹೋಗುವಂತೆ ಚರಂಡಿ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮನೆಯಲ್ಲಿ ನೀರು ಸಂಗ್ರಹಿಸಿ ಇಡಬೇಡಿ, ಸೊಳ್ಳೆ ಆಗದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸೊಳ್ಳೆಯ ನಿಯಂತ್ರಣಕ್ಕೆ ಜಾಗೃತಿ ಮೂಡಿಸುತ್ತಿದ್ದರೆ ಇನ್ನೊಂದು ಕಡೆ ಚರಂಡಿಯಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಪುರಸಭೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ವಿನಾಯಕ ನಗರದ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಪಕ್ಕಿರಪ್ಪ ಕುಳಗೇರಿ, ಕಿರಣ ಪಾಟೀಲ, ಇಬ್ರಾಹಿಮ್‌ ನಾಲಬಂದ, ಮಾಬೂಸಾಬ ನಾಲಬಂದ, ಬಾಪುಗೌಡ ಪಾಟೀಲ(ಚಿಕ್ಕೊಪ್ಪ) ಮುಂತಾದವರು ಒತ್ತಾಯಿಸಿದ್ದಾರೆ.

ಹೆಲ್ಪಲೈನ್‌ಗೂ ಕ್ರಮವಿಲ್ಲ:

ವಿನಾಯಕ ನಗರದ ಚರಂಡಿ ಸ್ವಚ್ಛತೆಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದಿರುವುದರಿಂದ ಇಲ್ಲಿನ ಯುವಕರು ಹೆಲ್ಪಲೈನ್‌ಗೆ ದೂರು ನೀಡಿದ್ದಾರೆ. ಆದರೂ ಇಲ್ಲಿಯ ವರೆಗೂ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ