ಆ್ಯಪ್ನಗರ

ಅಗ್ನಿ ದುರಂತಕ್ಕೆ ಬದುಕು ಮುರಾಬಟ್ಟಿ

ಶಿರಹಟ್ಟಿ : ಶಿರಹಟ್ಟಿ ತಾಲೂಕು ಕೇಂದ್ರದಿಂದ ಸುಮಾರು 25-30 ಕಿಮೀ ದೂರದಲ್ಲಿರುವಂತಹ ಕೋಗನೂರ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದಂತಹ ಅಗ್ನಿಯ ರುದ್ರನರ್ತನಕ್ಕೆ ಜಾನುವಾರುಗಳ ನಿರ್ವಹಣೆಗಾಗಿ ರೈತರು ಸಂಗ್ರಹಿಸಿಟ್ಟಿದ್ದ 50ಕ್ಕೂ ಹೆಚ್ಚು ಮೇವಿನ ಬಣವೆ ಹಾಗೂ 5 ಮನೆಗಳು ನಾಶವಾಗಿ ಜನರು ನಿರ್ಗತಿಕರಾಗಿದ್ದಾರೆ. ಕಳೆದು ಹೋದ ನಮ್ಮ ಬದುಕನ್ನು ಕಟ್ಟಿಕೊಡೋರಾರ‍ಯರು ಎಂದು ಹಾನಿ ಅನುಭವಿಸಿದ ಜನರು ಪರಿತಪಿಸುತ್ತಿದ್ದಾರೆ.

Vijaya Karnataka 29 Apr 2019, 5:00 am
ಶಿರಹಟ್ಟಿ : ಶಿರಹಟ್ಟಿ ತಾಲೂಕು ಕೇಂದ್ರದಿಂದ ಸುಮಾರು 25-30 ಕಿಮೀ ದೂರದಲ್ಲಿರುವಂತಹ ಕೋಗನೂರ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದಂತಹ ಅಗ್ನಿಯ ರುದ್ರನರ್ತನಕ್ಕೆ ಜಾನುವಾರುಗಳ ನಿರ್ವಹಣೆಗಾಗಿ ರೈತರು ಸಂಗ್ರಹಿಸಿಟ್ಟಿದ್ದ 50ಕ್ಕೂ ಹೆಚ್ಚು ಮೇವಿನ ಬಣವೆ ಹಾಗೂ 5 ಮನೆಗಳು ನಾಶವಾಗಿ ಜನರು ನಿರ್ಗತಿಕರಾಗಿದ್ದಾರೆ. ಕಳೆದು ಹೋದ ನಮ್ಮ ಬದುಕನ್ನು ಕಟ್ಟಿಕೊಡೋರಾರ‍ಯರು ಎಂದು ಹಾನಿ ಅನುಭವಿಸಿದ ಜನರು ಪರಿತಪಿಸುತ್ತಿದ್ದಾರೆ.
Vijaya Karnataka Web GDG-28SHT1
ಶಿರಹಟ್ಟಿ ತಾಲೂಕು ಕೋಗನೂರದಲ್ಲಿ ಶನಿವಾರ ಸಂಜೆ ಸಂಭವಿಸಿದಂತಹ ಅಗ್ನಿ ದುರಂತಲ್ಲಿ ಸುಟ್ಟು ಭಸ್ಮವಾದ ಮೇವಿನ ಬಣವೆ ಹಾಗೂ ಮನೆಗಳು.


ಸಾಲ ಮಾಡಿದ್ದ ಹಣ ಭಸ್ಮ :

ಹಲವು ವರ್ಷಗಳಿಂದ ಕೂಲಿ ಮಾಡಿ ಜೀವನ ಮುನ್ನಡೆಸಿಕೊಂಡು ಬಂದಿದ್ದಂತಹ ಮಂಜವ್ವ ಚೂರಿ, ಹೊಸದಾಗಿ ಮನೆ ಕಟ್ಟುವುದಕ್ಕಾಗಿ ಪ್ರಾರಂಭ ಮಾಡಿದ್ದಳು. ಇದಕ್ಕಾಗಿ 2ಲಕ್ಷ ರೂ. ಬಡ್ಡಿಸಾಲ ತೆಗೆದುಕೊಂಡು ಬಂದು ಶುಕ್ರವಾರ ಸಂಜೆಯೇ ತನ್ನ ಮನೆಯಲ್ಲಿಟ್ಟಿದ್ದಳು. ಆದರೆ ಶನಿವಾರ ಸಂಜೆ ಸಂಭವಿಸಿದ ಅವಘಡದಲ್ಲಿ 2ಲಕ್ಷ ನಗದು ಸುಟ್ಟು ಭಸ್ಮವಾಗಿವೆ. ಇವುಗಳ ಜತೆಗೆ ದಿನಸಿ ಸಾಮಾಗ್ರಿಗಳು ಸೇರಿದಂತೆ ಎಲ್ಲ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡು ಮರುಗುತ್ತಿದ್ದಾಳೆ.

ಮದುವೆಗೆ ತಯಾರಿಯೂ ನಡೆದಿತ್ತು :

ಮೇ 2ರಂದು ತಮ್ಮ ಮಗನ ಮದುವೆಗಾಗಿ ಹನುಮಂತಪ್ಪ ಕೂರಗುಂದ 3 ತೊಲಿ ಬಂಗಾರ, ಹೊಸ ಬಟ್ಟೆ ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಿದ್ದರು.ಮದುವೆಗೆ ಬೇಕಾಗುವ ಹಣವನ್ನು ಸಾಲ ಮಾಡಿ ತಂದು ಮನೆಯಲ್ಲಿಟ್ಟಿದ್ದರು. ಇವೆಲ್ಲವು ಸಹ ಸುಟ್ಟು ಭಸ್ಮವಾಗಿದ್ದರಿಂದ ಮದುವೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಹನುಮಂತಪ್ಪ ಕುಳಿತಿದ್ದಾನೆ. ಹೀಗೆ 5 ಕುಟುಂಬಗಳು ಸಹ ಎಲ್ಲವನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿ ಸರಕಾರಿ ಶಾಲೆಯಲ್ಲಿ ತಮ್ಮ ಜೀವನದಲ್ಲಿ ಸಂಭವಿಸಿದಂತಹ ದುರ್ಘಟನೆಯನ್ನು ಮೆಲುಕು ಹಾಕುತ್ತ ಕುಳಿತಿದ್ದಾರೆ.

ಹೆಸ್ಕಾಂ ನಿರ್ಲಕ್ಷ ್ಯಕ್ಕೆ ಹಿಡಿ ಶಾಪ :

ವಿದ್ಯುತ್‌ ತಂತಿಗಳು ವೇಗವಾಗಿ ಗಾಳಿ ಬೀಸಿದರೆ ಒಂದಕ್ಕೊಂದು ತಗುಲಿ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಯಾವುದಾದರೂ ಅನಾಹುತ ಸಂಭವಿಸುವುದಕ್ಕಿಂತ ಮೊದಲೇ ಕ್ರಮ ವಹಿಸಿ ಎಂದು ಹಲವಾರು ಬಾರಿ ಹೆಸ್ಕಾಂ ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ಹೇಳುತ್ತ ಬಂದಿದ್ದರೂ ಸಹ ಅವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ್ಯ ಧೋರಣೆಯೇ ಈ ದುರಂತಕ್ಕೆ ಕಾರಣವಾಗಿ ನಾವು ಮನೆಗಳನ್ನು ಕಳೆದುಕೊಳ್ಳುವಂತಾಗಿದೆ. ನಮ್ಮ ಎಲ್ಲ ನಷ್ಟವನ್ನು ಸಹ ಅವರೇ ಭರಿಸಬೇಕೆಂದು ಹೆಸ್ಕಾಂಗೆ ನಿರ್ಗತಿಕ ಕುಟುಂಬಗಳು ಆಗ್ರಹಿಸುತ್ತಿದ್ದಾರೆ.

ಮುಂದುವರಿಯುತ್ತಿರುವ ಸರಣಿ ವಿದ್ಯುತ್‌ ಅವಘಡ :

ಶಿರಹಟ್ಟಿ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರ ಜಮೀನುಗಳಲ್ಲಿ ಎಲ್ಲೆಂದರಲ್ಲಿ ಜೋತು ಬಿದ್ದ ವಿದ್ಯುತ್‌ ಕಂಬಗಳು ವೇಗವಾಗಿ ಗಾಳಿ ಬೀಸಿದರೆ ನೆಲಕ್ಕೆ ಅಪ್ಪಳಿಸಿ ರೈತರು ಬೆಳೆದ ಬೆಳೆಗಳು ಸಹ ಸುಟ್ಟು ಹೋಗುತ್ತಿವೆ. ಇವುಗಳ ಜತೆಗೆ ಅಲ್ಲಲ್ಲಿ ಬಣವೆಗಳು ಭಸ್ಮವಾಗುತ್ತಿದ್ದು, ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಅಗತ್ಯ ಕ್ರಮವಹಿಸದೇ ಇದ್ದರೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಘಡಗಳು ಸಂಭವಿಸಬಹುದು ಎಂಬುದು ಜನರ ಆತಂಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ